ರಾಗಿ ಮುದ್ದೆ ಮಾಡಿಕೊಟ್ಟು ಪೇಚಿಗೆ ಸಿಲುಕಿದ ಪ್ರತಾಪ್ – ಗ್ಯಾಸ್ ಬಾರದೆ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಗಲಾಟೆ

ರಾಗಿ ಮುದ್ದೆ ಮಾಡಿಕೊಟ್ಟು ಪೇಚಿಗೆ ಸಿಲುಕಿದ ಪ್ರತಾಪ್ – ಗ್ಯಾಸ್ ಬಾರದೆ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಗಲಾಟೆ

ಬಿಗ್ ಬಾಸ್ ಅಂದರೆ ಹಿಂದೆಲ್ಲಾ ಮಸ್ತ್ ಮನರಂಜನೆ ಸಿಗುತ್ತಿತ್ತು. ಆದರೆ ಈ ಸಲ ಮನರಂಜನೆಗಿಂತ ಜಾಸ್ತಿ ಜಗಳವೇ ಆಗಿದೆ. ಒಬ್ಬರನ್ನ ಕಂಡರೆ ಒಬ್ಬರಿಗೆ ಆಗದ ಮಟ್ಟಿಗೆ ಕಿತ್ತಾಡಿಕೊಳ್ತಾರೆ. ಈ ವಾರ ಬಿಗ್ ಬಾಸ್ ಶಾಲೆಯಾಗಿ ಬದಲಾಗಿದ್ದರಿಂದ ಸ್ವಲ್ಪ ಕೂಲ್ ಆಗಿತ್ತು. ಆದರೆ ಟಾಸ್ಕ್ ಮುಗಿದ ಮೇಲೆ ಮತ್ತೆ ಮನೆಯಲ್ಲಿ ಜೋರು ಜಟಾಪಟಿ ಶುರುವಾಗಿದೆ.

ಇದನ್ನೂ ಓದಿ : ಅಯ್ಯಪ್ಪನ ದರ್ಶನಕ್ಕೆ ಶಬರಿಮಲೆಯಲ್ಲಿ ಭಕ್ತಸಾಗರ – ನೂಕುನುಗ್ಗಲಿನ ನಡುವೆ ಭಕ್ತರಿಗೆ ಸಾಲು ಸಾಲು ಸಮಸ್ಯೆ

ಬಿಗ್ ಬಾಸ್ ಅಂದ್ರೆ ಹತ್ತಾರು ರೂಲ್ಸ್ ಇರುತ್ತವೆ. ಊಟಕ್ಕೂ ಕೂಡ ಇತಿಮಿತಿ ಇದೆ. ಇಂಥದ್ದು ಬೇಕು ಅನ್ನಿಸಿದ್ರೆ ಮಾಡಿಕೊಂಡು ತಿನ್ನೋ ಆಗಿಲ್ಲ. ಹಾಗೇನಾದ್ರೂ ತಿಂದರೆ ಬಿಗ್ ಬಾಸ್ ಶಿಕ್ಷೆ ಪಕ್ಕಾ. ಇದೀಗ ಮನೆ ಮಂದಿಯ ಪರಿಸ್ಥಿತಿ ಹಾಗೇ ಆಗಿದೆ. ಡ್ರೋನ್ ಪ್ರತಾಪ್ ಅವರು ಎಲ್ಲರಿಗೂ ಮುದ್ದೆ  ಮಾಡಿಕೊಟ್ಟಿದ್ದಾರೆ. ಇದೇ ಈಗ ದೊಡ್ಡ ಪ್ರಮಾದ ಆಗಿ ಹೋಗಿದೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಮುದ್ದೆ ತಿನ್ನಬೇಕು ಎನಿಸಿದೆ. ಡ್ರೋನ್ ಪ್ರತಾಪ್ (Drone Prathap) ಅವರು ಎಲ್ಲರಿಗೂ ಮುದ್ದೆ  ಮಾಡಿಕೊಟ್ಟಿದ್ದಾರೆ. ಬಹುಶಃ ಇದಕ್ಕೆ ಗ್ಯಾಸ್ ಅತಿಯಾಗಿ ಬಳಕೆ ಆಗಿದೆ ಅನಿಸುತ್ತದೆ. ಹೀಗಾಗಿ, ಸಂಜೆ ಅಡುಗೆ ಮಾಡೋಕೆ ಬಿಗ್ ಬಾಸ್ ಗ್ಯಾಸ್ ಬಿಟ್ಟಿಲ್ಲ. ಇದರಿಂದ ಮನೆಯವರು ಸಿಟ್ಟಾಗಿದ್ದಾರೆ. ‘ಎಲ್ಲರೂ ರಾಕ್ಷಸರಾಗುತ್ತಿದ್ದಾರೆ. ಗ್ಯಾಸ್ ಕೊಡಿ’ ಎಂದು ಸಂತೋಷ್, ಪ್ರತಾಪ್ ಮನವಿ ಮಾಡಿಕೊಂಡಿದ್ದಾರೆ.

ಅದರಲ್ಲೂ ವಿನಯ್ ಇವತ್ತು ಅಡುಗೆ ಆಗದಿದ್ದರೆ, ಊಟ ಸಿಗದೇ ಇದ್ದರೆ ನಾನು ದೇವ್ರಾಣೆ ಸುಮ್ಮನಿರಲ್ಲ ಎಂದಿದ್ದಾರೆ. ಇದಕ್ಕೆ ನಮ್ರತಾ ಕೂಡ ಸಾಥ್ ಕೊಟ್ಟಿದ್ದು ಪ್ರತಾಪ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಗ್ಯಾಸ್ ಬರ್ತಿಲ್ಲ ಎಂದು ಮನೆಯವ್ರೆಲ್ಲಾ ಸಿಟ್ಟಾಗಿದ್ದು ಮುದ್ದೆ ಮಾಡಿಕೊಟ್ಟ ಪ್ರತಾಪ್ ಸ್ಥಿತಿ ಈಗ ಇಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ದಯವಿಟ್ಟು ಗ್ಯಾಸ್ ಕೊಡಿ ಬಿಗ್ ಬಾಸ್ ಎಂದು ಬೇಡಿಕೊಳ್ತಿದ್ದಾರೆ.

 

Shantha Kumari