ಸಿರಾಜ್ ಮುಂದೆ ಪ್ರಸಿದ್ಧ್ ಸೈಡ್ ಲೈನ್ – ಫೈನಲ್ ಫೈಟ್.. 8 ವಿಕೆಟ್ ಲೆಕ್ಕಕ್ಕಿಲ್ವಾ?
ENGನಲ್ಲಿ ಕನ್ನಡಿಗನಿಗೆ ಅದೆಷ್ಟು ಅವಮಾನ?

ಸಿರಾಜ್ ಮುಂದೆ ಪ್ರಸಿದ್ಧ್ ಸೈಡ್ ಲೈನ್ – ಫೈನಲ್ ಫೈಟ್.. 8 ವಿಕೆಟ್ ಲೆಕ್ಕಕ್ಕಿಲ್ವಾ?ENGನಲ್ಲಿ ಕನ್ನಡಿಗನಿಗೆ ಅದೆಷ್ಟು ಅವಮಾನ?

ಇಂಗ್ಲೆಂಡ್ ಪ್ರವಾಸದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಜರ್ನಿ ಒಂದೇ ಥರ ಇರ್ಲಿಲ್ಲ. ಯಾಕಂದ್ರೆ ಸಿರಾಜ್​ಗೆ ಬ್ಯಾಕ್ ಟು ಬ್ಯಾಕ್ ಎಲ್ಲಾ ಮ್ಯಾಚ್​ಗಳಲ್ಲೂ ಅವಕಾಶ ಸಿಕ್ಕಿತ್ತು. ಆದ್ರೆ ಪ್ರಸಿದ್ಧ್ ಪರಿಸ್ಥಿತಿ ಹಾಗಿರಲಿಲ್ಲ. ಒಂಥರಾ ರಿಪ್ಲೇಸ್ ಪ್ಲೇಯರ್ ಆಗಿ ಚಾನ್ಸ್ ನೀಡಲಾಗಿತ್ತು. ಅದ್ರ ಜೊತೆಗೆ ಸಿಕ್ಕಾಪಟ್ಟೆ ರನ್ಸ್ ಕೊಡ್ತಾರೆ ಅನ್ನೋ ಟೀಕೆ ಬೇರೆ.. ಈ ಎಲ್ಲಾ ಅವಮಾನ, ಅಪಹಾಸ್ಯ, ಟ್ರೋಲ್ ಎಲ್ಲವನ್ನೂ ಮೆಟ್ಟಿನಿಂತು ದಿಟ್ಟ ಉತ್ತರ ಕೊಟ್ಟವ್ರು ಪ್ರಸಿದ್ಧ್ ಕೃಷ್ಣ. ಕೊನೇ ಪಂದ್ಯದಲ್ಲೂ 8 ವಿಕೆಟ್​ಗಳನ್ನ ಉರುಳಿಸಿ ಭಾರತದ ಗೆಲುವಿಗೆ ಬೆನ್ನೆಲುಬಾಗಿ ನಿಂತವ್ರೂ ಕೂಡ ಪ್ರಸಿದ್ಧ್ ಕೃಷ್ಣನೇ. ಆದ್ರೆ ಸಿರಾಜ್ ಮ್ಯಾಚ್ ಟರ್ನಿಂನ್ ಮೂಮೆಂಟ್ಸ್ ಮುಂದೆ ಹೈಲೆಟ್ ಆಗ್ಲಿಲ್ಲ ಅಷ್ಟೇ.

ಇದನ್ನೂ ಓದಿ : IND ಟೀಂನಿಂದ ಐವರು ಔಟ್? ಕರುಣ್, ಕಾಂಬೋಜ್‌ಗೆ ಕೈ ತಪ್ಪಿದ ಚಾನ್ಸ್?

ಅಷ್ಟಕ್ಕೂ ಐಪಿಎಲ್ ಮುಗಿಸಿ ಇಂಗ್ಲೆಂಡ್ ಟೂರ್​ಗೆ ಹೊರಟ ಟೀಂ ಇಂಡಿಯಾದಲ್ಲಿ ಪ್ರಸಿದ್ಧ್ ಕೃಷ್ಣಗೂ ಅವಕಾಶದ ಬಾಗಿಲು ತೆರೆದಿತ್ತು. ಯಾಕಂದ್ರೆ ಐಪಿಎಲ್​ನಲ್ಲಿ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ದ ಪ್ರಸಿದ್ಧ್​​ಗೆ ಬಿಸಿಸಿಐ ಬಿಗ್ ಚಾನ್ಸ್ ಕೊಟ್ಟಿತ್ತು. ಮೊದಲ ಪಂದ್ಯದಲ್ಲೇ ಪ್ಲೇಯಿಂಗ್ 11ನಲ್ಲಿ ಕಣಕ್ಕಿಳಿಸಲಾಗಿತ್ತು.

ಪ್ರಸಿದ್ಧ್ ಪವರ್ ಶೋ!

ಲೀಡ್ಸ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಬೇಟೆ

ಪ್ರತೀ ಓವರ್​ಗೆ 6+ ರನ್ಸ್, ಇದೇ ಕಾರಣಕ್ಕೆ ಸಾಕಷ್ಟು ಟೀಕೆ

ಬುಮ್ರಾಗೆ ರೆಸ್ಟ್ ನೀಡಿದ್ರಿಂದ ಪ್ರಸಿದ್ಧ್ ಕೃಷ್ಣಗೆ ಇನ್ನೊಂದು ಚಾನ್ಸ್

ಈ ಮ್ಯಾಚ್​ನಲ್ಲಿ ಪ್ರಸಿದ್ಧ್​ಗೆ ಒಂದೇ ವಿಕೆಟ್ ಅಷ್ಟೇ ತೆಗೆಯೋಕೆ ಸಾಧ್ಯ

ಬುಮ್ರಾ ತಂಡಕ್ಕೆ ಕಮ್ ಬ್ಯಾಕ್ ಪ್ರಸಿದ್ಧ್ ಜಾಗ ಬಿಟ್ಟುಕೊಟ್ಟು ಬೆಂಚ್

ಅರ್ಷದೀಪ್​ ಸಿಂಗ್​ರನ್ನ ಟೆಸ್ಟ್ ಡೆಬ್ಯೂ ಮಾಡಿಸೋ ಪ್ಲ್ಯಾನ್​ ನಲ್ಲಿದ್ರು

ಗಾಯಗೊಂಡಿದ್ರಿಂದ ಪ್ರಸಿದ್ಧ್​ಗೆ ಮತ್ತೊಂದು ಅದೃಷ್ಟದ ಅವಕಾಶ

ಬೌಲಿಂಗ್​ನಲ್ಲಿ ಲೈನ್ ಌಂಡ್ ಲೆಂಗ್ತ್ ಪರ್ಫೆಕ್ಟ್ ಆಗಿ ರೀಚ್ ಆಗ್ತಿತ್ತು

ಪ್ರಸಿದ್ಧ್ ವಿಕೆಟ್ ತೆಗೆದೂ ಕೂಡ ಸೈಲೆಂಟ್ ಆಗಿ ಸೆಲೆಬ್ರೇಟ್ ಮಾಡ್ತಿದ್ರು

ಕೊನೇ ಪಂದ್ಯದಲ್ಲಿ 8 ವಿಕೆಟ್​ಗಳನ್ನ ತೆಗೆದ್ರೂ ಎಲೆಮರೆಯ ಕಾಯಿ

ಮೂರು ಪಂದ್ಯಗಳಿಂದ 14 ವಿಕೆಟ್ ತೆಗೆದು ಐದನೇ ಸ್ಥಾನದಲ್ಲಿ ಪ್ರಸಿದ್ಧ್

ಸದ್ಯ ಜಸ್ಪ್ರೀತ್ ಬುಮ್ರಾ ಫಿಟ್​ನೆಸ್, ಇಂಜುರಿ  ಆಬ್ಸೆನ್ಸ್​ನಲ್ಲಿ ಟೀಂ ಇಂಡಿಯಾದ ವೇಗಿಗಳ ದಾಳಿ ಮುನ್ನಡೆಸೋದು ಯಾರು ಅನ್ನೋ ಪ್ರಶ್ನೆಗೆ ಮೊಹಮ್ಮದ್ ಸಿರಾಜ್ ಹೆಸರು ಮುಂಚೂಣಿಯಲ್ಲಿ ಇರ್ತಿತ್ತು. ಇದೀಗ ಈ ಲಿಸ್ಟ್​ಗೆ ಪ್ರಸಿದ್ಧ್ ಕೃಷ್ಣ ಹೆಸರೂ ಕೂಡ ಸೇರ್ಪಡೆಯಾಗಿದೆ. ಆದ್ರೆ ಮುಂದಿನ ದಿನಗಳಲ್ಲಿ ಅದೆಷ್ಟರ ಮಟ್ಟಿಗೆ ಚಾನ್ಸ್ ಕೊಡ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.

Shantha Kumari