ಶಿವಣ್ಣನ ಪ್ರಚಾರ ಟೀಕಿಸಿ ಬೆಪ್ಪಾದ ಪ್ರಶಾಂತ್ ಸಂಬರಗಿ – ಇದಪ್ಪಾ ದೊಡ್ಮನೆ ಫ್ಯಾನ್ಸ್ ಪವರ್ ಅಂದ್ರೆ!

ಶಿವಣ್ಣನ ಪ್ರಚಾರ ಟೀಕಿಸಿ ಬೆಪ್ಪಾದ ಪ್ರಶಾಂತ್ ಸಂಬರಗಿ – ಇದಪ್ಪಾ ದೊಡ್ಮನೆ ಫ್ಯಾನ್ಸ್ ಪವರ್ ಅಂದ್ರೆ!

ವಿಧಾನಸಭಾ ಚುನಾವಣಾ ಕಣದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್ ಕೂಡ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ಒಬ್ಬೊಬ್ಬರೂ ಒಂದೊಂದು ಪಕ್ಷದ ಪರ ಕ್ಯಾಂಪೇನ್ ನಡೆಸುತ್ತಿದ್ದಾರೆ. ಹೀಗಿದ್ದರೂ ಕೂಡ ನಟ ಶಿವರಾಜ್ ಕುಮಾರ್ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ಶಿವಣ್ಣನ ಕುರಿತು ಟೀಕೆ ಮಾಡಿದ್ದರು. ಹಣ ಪಡೆದು ಪ್ರಚಾರ ಮಾಡ್ತಿದ್ದಾರೆ ಅಂತಾ ವ್ಯಂಗ್ಯವಾಡಿದ್ದರು. ಆದ್ರೀಗ ಅದೇ ಪ್ರಶಾಂತ್ ಉಲ್ಟಾ ಹೊಡೆದಿದ್ದಾರೆ.

ಇದನ್ನೂ ಓದಿ : ಸ್ಕೂಟರ್‌ನಲ್ಲಿ ಡೆಲಿವರಿ ಬಾಯ್ ಜೊತೆ ಸಂಚಾರ – ಗ್ರಾಹಕರ ಜೊತೆ ಕುಳಿತು ಕಾಫಿ ಕುಡಿದ ರಾಹುಲ್ ಗಾಂಧಿ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಕಾಂಗ್ರೆಸ್ (Congress) ಪರ ಪ್ರಚಾರ ಮಾಡಿದ್ದಕ್ಕೆ ಪ್ರಶಾಂತ್ ಸಂಬರಗಿ (Prashanth Sambargi) ಟೀಕೆ ಮಾಡಿದ್ದರು. ಸಂಬರಗಿಯ ಈ ನಡೆಯನ್ನ  ಶಿವಣ್ಣನ ಫ್ಯಾನ್ಸ್ ಸೇರಿದಂತೆ ಹಲವರು ಖಂಡಿಸಿದ್ದರು. ಸಂಬರಗಿ ವಿರುದ್ಧ ವಿರೋಧ ವ್ಯಕ್ತವಾದ ಬೆನ್ನಲ್ಲೇ ತಾವು ಆಡಿದ ಮಾತನ್ನ ಹಿಂಪಡೆದಿದ್ದಾರೆ. ಈ ಕುರಿತು ಪೋಸ್ಟ್ ಕೂಡ ಮಾಡಿದ್ದಾರೆ. ಕಾಂಗ್ರೆಸ್ ಪರ ಶಿವಣ್ಣರ ಪ್ರಚಾರ ಕುರಿತು, ಶಿವಣ್ಣ ಕಥೆ ಕೇಳಲ್ಲ. ಅವರಿಗೆ ಹಣ ಮುಖ್ಯ, ಹಾಗೆಯೇ ಅಭ್ಯರ್ಥಿ ಗೆಲ್ಲಲಿ ಬಿಡಲಿ ಅವರಿಗೆ ದುಡ್ಡು ಬಂದರೆ ಆಯ್ತು ಎಂದು ಸಂಬರಗಿ ಶಿವಣ್ಣ ವಿರುದ್ಧ ಕಿಡಿಕಾರಿದ್ದರು. ಬಳಿಕ ಶಿವಣ್ಣ ಕೂಡ ರಿಯಾಕ್ಟ್ ಮಾಡಿದ್ದರು. ನಾನು ಇಲ್ಲಿ ಮನಸ್ಸಿನ ಮಾತು ಕೇಳಿ ಬಂದಿದ್ದೇನೆ. ಅವರು ಆ ರೀತಿ ಮಾತನಾಡೋದು ಸರಿಯಲ್ಲ. ಅವರ ಮಾತು ಹಿಂಪಡೆಯಲಿ ಎಂದಿದ್ದರು. ಇಷ್ಟಕ್ಕೆ ಸುಮ್ಮನಾಗದ ಸಂಬರಗಿ, ಭಜರಂಗಿ ಹೆಸರಿನಲ್ಲಿ ನಟಿಸಿ, ಬಜರಂಗದಳದ ನಿಷೇಧದ ಬಗ್ಗೆ ನಿಮ್ಮ ನಡೆಯೇನು ಎಂದು ಹಾಗೂ ಇದರ ಜೊತೆ ಹಲವು ಪ್ರಶ್ನೆಗಳನ್ನ ಶಿವಣ್ಣ ಮುಂದೆ ಇಟ್ಟಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಸಂಬರಗಿ ನಡೆಯನ್ನ ಖಂಡಿಸಿ ಅಭಿಮಾನಿಗಳು ಶಿವಣ್ಣ ಬಳಿ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದಿದ್ದರು. ಹಾಗಾಗಿ ಸಂಬರಗಿ ತಾವು ಆಡಿದ ಮಾತನ್ನ ಹಿಂಪಡೆದಿದ್ದಾರೆ.

ಶಿವಣ್ಣ ಮತ್ತೆ ಇನೊಬ್ಬ ನಮ್ಮ ಆಪ್ತ ಮಿತ್ರನೊಂದಿಗೆ ಇದೀಗ ತಾನೇ ಮಾತನಾಡಿದೆ. ಶಿವಣ್ಣ ಅವರು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ಶಿವಣ್ಣ ಅವರ ತಂದೆಯ ಬಯಕೆಯಂತೆ ಅವರು ರಾಜಕೀಯದಿಂದ ದೂರವಾಗಿದ್ದರೆ ನಾನು ಅವರ ಬಗ್ಗೆ ಬರೆದಿರುವ ನನ್ನ ಪೋಸ್ಟ್ ಅನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಮತ್ತು ಶಿವಣ್ಣ ಮತ್ತು ಅವರ ಅಭಿಮಾನಿಗಳಿಗೆ ಕರ್ನಾಟಕದಾದ್ಯಂತ ನೋಯಿಸಬಾರದು ಎಂದು ನಾನು ಬಯಸುತ್ತೇನೆ ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ ಎಲ್ಲಿಯೂ ಶಿವಣ್ಣಗೆ ಕ್ಷಮೆ ಕೇಳಿಲ್ಲ. ಈ ಬಗ್ಗೆ ಫ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

suddiyaana