ಸುಧಾಕರ್‌ ಒಬ್ಬ ಅಯೋಗ್ಯ.. ಡಬಲ್ ಗೇಮ್ ಆಡ್ತಿದ್ದಾನೆ.. – ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡ ಪ್ರದೀಪ್‌ ಈಶ್ವರ್‌!

ಸುಧಾಕರ್‌ ಒಬ್ಬ ಅಯೋಗ್ಯ.. ಡಬಲ್ ಗೇಮ್ ಆಡ್ತಿದ್ದಾನೆ.. – ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡ ಪ್ರದೀಪ್‌ ಈಶ್ವರ್‌!

ಚಿಕ್ಕಬಳ್ಲಾಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಚಿವ ಡಾ. ಸುಧಾಕರ್ ನಡುವೆ ರಾಜಕೀಯ ವೈಷಮ್ಯ ಮುಂದುವರಿದಿದೆ. ಇವರಿಬ್ಬರ  ನಡುವಿನ ವಾಕ್ಸಮರ ನಿಲ್ಲುವಂತೆ ಕಾಣುತ್ತಿಲ್ಲ. ಸದಾ ಒಂದಲ್ಲ ಒಂದು ವಿಚಾರಕ್ಕೆ   ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ. ಇದೀಗ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌, ಸುಧಾಕರ್​ಗೆ ಹಿಗ್ಗಾಮುಗ್ಗಾ ಬೈದಿದ್ದಾರೆ. ಸುಧಾಕರ್ ಒಬ್ಬ ಅಯೋಗ್ಯ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌ – ಬಾಂಬರ್‌ ಕರ್ನಾಟಕದ ಮೂಲದವನೇ!

ಈ ಬಗ್ಗೆ ಚಿಕ್ಕಬಳ್ಳಾಪುರ ನಗರದ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ಎಸ್‌ಸಿ, ಎಸ್ಟಿ ಸಮುದಾಯದವರು ತೀರಿಕೊಂಡ್ರೆ ಮಣ್ಣು ಮಾಡಲು ಜಾಗ ಇರ್ಲಿಲ್ಲ. ನಾನು ಹಾಗೂ ಈ ಊರಿನ ಗ್ರಾಮಸ್ಥರು ಎಷ್ಟು ಸಲ ಮನವಿ ಮಾಡಿದ್ವಿ.. ಸುಧಾಕರ್ ಒಬ್ಬ ಅಯೋಗ್ಯ. ಈ ಅಯೋಗ್ಯನಿಗೆ ಜಾಗ ಕೊಡುವ ಯೋಗ್ಯತೆ ಇಲ್ಲ.. ಡಬಲ್ ಗೇಮ್ ಆಡ್ತಿದ್ದಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ..

ಬಿಜೆಪಿಯಲ್ಲಿ ಟಿಕೆಟ್ ಸಿಕ್ಕರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸ್ತಾರಂತೆ. ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂದರೆ ಕಾಂಗ್ರೆಸ್ ನಿಂದ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸ್ತಾರಂತೆ.  ಇದ್ದರೆ ನಿಯತ್ತಾಗಿ ಒಂದು ಪಕ್ಷದಲ್ಲಿ ಇರಿ ಸುಧಾಕರ್ ಅವರೇ. ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಮೋಸ ಮಾಡಿ ಹೋದಿರಿ. ಈಗ ಕಾಂಗ್ರೆಸ್ ಗೆ ಬಂದರೆ ಕೆಪಿಸಿಸಿ ಕಚೇರಿಯ ಹೊರಗೆ ಇರುವ ವಸ್ತುವಿನಂತೆ ಇರ್ತೀರ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.

Shwetha M