ಡಾ.ಕೆ ಸುಧಾಕರ್ ಸವಾಲ್ ಸ್ವೀಕರಿಸಿದ ಪ್ರದೀಪ್ ಈಶ್ವರ್ – ದೇವರ ಮುಂದೆ ದೀಪ ಹಚ್ಚಲು ಸಿದ್ಧವೆಂದು ತಿರುಗೇಟು

ಡಾ.ಕೆ ಸುಧಾಕರ್ ಸವಾಲ್ ಸ್ವೀಕರಿಸಿದ ಪ್ರದೀಪ್ ಈಶ್ವರ್ – ದೇವರ ಮುಂದೆ ದೀಪ ಹಚ್ಚಲು ಸಿದ್ಧವೆಂದು ತಿರುಗೇಟು

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಕದನ ಮತ್ತೊಂದು ಹಂತ ತಲುಪಿದೆ. ಕಳೆದ ಕೆಲ ದಿನಗಳ ಹಿಂದೆ ಭ್ರಷ್ಟಾಚಾರ ಆರೋಪದ ವಿಚಾರವಾಗಿ ಮಾಜಿ ಶಾಸಕ ಡಾ.ಕೆ ಸುಧಾಕರ್ ಸಿಡಿದೆದ್ದಿದ್ದರು. ನಾನು ಭ್ರಷ್ಟಾಚಾರ ಮಾಡಿಲ್ಲ ಎಂದು ದೇವರ ಮುಂದೆ ದೀಪ ಹಚ್ಚುತ್ತೇನೆ. ಹಾಲಿ ಶಾಸಕ ಪ್ರದೀಪ್ ಈಶ್ವರ್ ಗೆ ದೀಪ ಹಚ್ಚಲು ಹೇಳಿ ಎಂದಿದ್ದರು. ಈ ಸವಾಲಿಗೆ ಪ್ರದೀಪ್ ಈಶ್ವರ್ ಈಗ ಪ್ರತಿ ಸವಾಲು ಹಾಕಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ʼಸಾಲರಾಮಯ್ಯʼ..  ಬಜೆಟ್‌ನಲ್ಲಿ ಸಿಕ್ಕಿರುವುದು ʼಸಾಲದ ಹೊರೆ – ತೆರಿಗೆಯ ಬರೆʼ..  – ಬಿಜೆಪಿ ಟ್ವೀಟಾಸ್ತ್ರ

ಕೊರೊನಾ ವೇಳೆ ಭ್ರಷ್ಟಾಚಾರ ನಡೆದಿಲ್ಲ ಎಂದು ಡಾ.ಕೆ ಸುಧಾಕರ್ ದೀಪ ಹಚ್ಚಲಿ. ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಹಾಡು ಹಾಕ್ಕೊಂಡು ದೀಪ ಹಚ್ಚೋಣ ಎಂದು ಮಾಜಿ ಪ್ರದೀಪ್‌ ಈಶ್ವರ್‌ ತಿರುಗೇಟು ಕೊಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್‌ ವೇಳೆ ಮಾಜಿ ಸಚಿವ ಡಾ.ಕೆ. ಸುಧಾಕರ್‌ ಭ್ರಷ್ಟಾಚಾರ ಮಾಡಿಲ್ಲವೆಂದು ಭೋಗನಂಧೀಶ್ವರ ದೇವಸ್ಥಾನಕ್ಕೆ ಬಂದು ದೀಪ ಹಚ್ಚಲಿ. ನಾನು ಕೂಡ ಬಂದು ದೀಪವನ್ನು ಹಚ್ಚುತ್ತೇನೆ. ನಿವೇಶನಗಳ ಬಗ್ಗೆ ಎಸ್ ಐಟಿ ತನಿಖೆಗೆ ಒಪ್ಪಿಸುತ್ತೇವೆ. ಅವರು ಬಂದು ‌ನಮ್ಮ ಜೊತೆಯೇ ನಿಂತುಕೊಳ್ಳಲಿ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಸವಾಲು ಹಾಕಿದ್ದಾರೆ. ಪ್ರಾಮಾಣಿಕರಾದರೆ ನನ್ನ ಸವಾಲನ್ನು ಸ್ವೀಕರಿಸಲಿ‌ ನೋಡೊಣ ಎಂದು ತಿರುಗೇಟು ನೀಡಿದರು.

ಅಷ್ಟಕ್ಕೂ ಕೆಲ ದಿನಗಳ ಹಿಂದೆ ಮಾಜಿ ಸಚಿವ ಡಾ.ಕೆ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಚಿಕ್ಕಬಳ್ಳಾಪುರ ವಸತಿ ಯೋಜನೆಗಳ ಬಗ್ಗೆ ಶಾಸಕ ಪ್ರದೀಪ್‌ ಈಶ್ವರ್‌ ಸುಳ್ಳಿನ ಅಭಿಯಾನ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದರು. ಸುಳ್ಳು ಶಾಸಕರ ಮನೆ ದೇವರು ಅನ್ನೋ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಈಗಷ್ಟೇ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಅಲ್ಲಿ ತಿಳಿದುಕೊಳ್ಳಲಿ. ಯಾರಾದ್ರು 20 ಸಾವಿರ ನಿವೇಶನ ತಂದಿದ್ದಾರಾ ನೋಡಲಿ. ಸಿನಿಮಾ ಡೈಲಾಗ್‌ಗಳನ್ನು ಹೇಳಿಕೊಂಡು ಓಡಾಡಿದ್ರೆ ರಾಜಕೀಯ ತುಂಬಾ ದಿನ‌ ನಡೆಯಲ್ಲ. ಚಿಕ್ಕಬಳ್ಳಾಪುರ ನಿವೇಶನಗಳಿಗೆ ಜಮೀನು ಮಂಜೂರು ಮಾಡಿದ್ದೀನಿ ಅಂತಾ ನಂದಿ ದೇವಸ್ಥಾನದಲ್ಲಿ ದೀಪ ಹಚ್ಚುತ್ತೇನೆ. ಇದೆಲ್ಲಾ ಬೋಗಸ್ ಅಂತಾ ನೀವು ಬಂದು ಹಚ್ಚಿ ನೋಡೊಣ ಎಂದು ಪ್ರದೀಪ್ ಈಶ್ವರ್‌ಗೆ ಸವಾಲು ಹಾಕಿದರು. ನೀವು ಹಾಗೇ ದೀಪ ಹಚ್ಚುವಂತ ಗಿರಾಕಿಯೇ ಎಂದು ಕಿಡಿಕಾರಿದ್ದರು.

suddiyaana