ಪ್ರಭಾಸ್‌ಗೆ ಈ ಜನ್ಮದಲ್ಲಿ ಮದುವೆ ಯೋಗವಿಲ್ಲ – ಜ್ಯೋತಿಷಿ ವೇಣುಸ್ವಾಮಿ ನುಡಿದ ಭವಿಷ್ಯ

ಪ್ರಭಾಸ್‌ಗೆ ಈ ಜನ್ಮದಲ್ಲಿ ಮದುವೆ ಯೋಗವಿಲ್ಲ – ಜ್ಯೋತಿಷಿ ವೇಣುಸ್ವಾಮಿ ನುಡಿದ ಭವಿಷ್ಯ

ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಮದುವೆ ಅವರ ಮನೆ ಮಂದಿಗೆ ಮಾತ್ರವಲ್ಲ ಅದೆಷ್ಟೋ ಅಭಿಮಾನಿಗಳ ಕನಸು ಕೂಡಾ ಹೌದು. ಈ ವರ್ಷ ಮದುವೆಯಾಗುತ್ತಾರೆ, ಹೊಸ ವರ್ಷಕ್ಕೆ ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಆದರೆ, ವರುಷಗಳು ಉರುಳುತ್ತಿದೆ ಅನ್ನೋದು ಬಿಟ್ಟರೆ ಇಬ್ಬರಿಗೂ ಮದುವೆ ಯೋಗ ಮಾತ್ರ ಕೂಡಿ ಬರುತ್ತಿಲ್ಲ. ಇದರ ನಡುವೆ ಸೆಲೆಬ್ರಿಟಿಗಳ ಭವಿಷ್ಯ ನುಡಿಯುವ ಜ್ಯೋತಿಷಿ ವೇಣು ಸ್ವಾಮಿ ಪ್ರಭಾಸ್ ಬಗ್ಗೆ ನೀಡಿದ ಹೇಳಿಕೆ ಸಾಕಷ್ಟು ಸುದ್ದಿ ಮಾಡುತ್ತಿದೆ.

ಇದನ್ನೂ ಓದಿ: ಪ್ರಶಾಂತ್ ನೀಲ್ ಸೃಷ್ಟಿಸಿದ ಸಲಾರ್ ಪ್ರಪಂಚ ಹೇಗಿದೆ? – ಧೂಳೆಬ್ಬಿಸಿದ ಪ್ರಭಾಸ್ ಸಿನಿಮಾದ ಟ್ರೈಲರ್

ಸೆಲೆಬ್ರಿಟಿಗಳಿಗೆ ಭವಿಷ್ಯ ನುಡಿಯುವ ಜ್ಯೋತಿಷಿ ವೇಣು ಸ್ವಾಮಿ ಅವರು ಪ್ರಭಾಸ್ ಅಭಿಮಾನಿಗಳಿಗೆ ಈ ಬಾರಿ ನೀಡಿದ್ದು ಶಾಕಿಂಗ್ ನ್ಯೂಸ್. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರಿಗೆ ಮದುವೆ ಆಗುವ ಯೋಗವಿಲ್ಲ ಎಂದು ಹೇಳಿದ್ದಾರೆ ಎಂದು ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದಾರೆ.  ವೇಣು ಗೋಪಾಲ್ ಅವರ ಮಾತನ್ನು ಅನೇಕ ಸೆಲೆಬ್ರಿಟಿಗಳು ನಂಬುತ್ತಾರೆ. ಹಾಗಾಗಿ ಪ್ರಭಾಸ್ ಮದುವೆ ವಿಚಾರದಲ್ಲಿ ವೇಣುಸ್ವಾಮಿ ಹೇಳಿದ್ದೇ ನಿಜವಾಗುತ್ತಾ ಎಂಬ ಆತಂಕ ಅಭಿಮಾನಿಗಳದ್ದು.

ಈ ಹಿಂದೆ ಪ್ರಭಾಸ್ ಕುಟುಂಬ ಮದುವೆ ವಿಚಾರದಲ್ಲಿ ಬೇರೆಯದ್ದೇ ಮಾಹಿತಿ ನೀಡಿತ್ತು. ಪ್ರಭಾಸ್ ಕುಟುಂಬದ ವ್ಯಕ್ತಿಯೊಬ್ಬರು ಪ್ರಭಾಸ್ ಮದುವೆ ಸಿದ್ಧತೆ ನಡೆಯುತ್ತಿದೆ ಎಂಬ ವಿಚಾರ ಹೇಳಿಕೊಂಡಿದ್ದರು. ಪ್ರಭಾಸ್ ಯುಎಸ್ ನಲ್ಲಿ ವಾಸಿಸುತ್ತಿರುವ ಯುವತಿಯ ಕೈ ಹಿಡಿಯಲಿದ್ದಾರೆ. ಯುವತಿಯ ಕುಟುಂಬಸ್ಥರು ಪ್ರಭಾಸ್ ಕುಟುಂಬಕ್ಕೆ ಆತ್ಮೀಯರು ಎನ್ನಲಾಗಿದೆ. ಅಮೆರಿಕದಲ್ಲಿ ಉದ್ಯಮ ನಡೆಸುತ್ತಿರುವ ವ್ಯಕ್ತಿಯೊಬ್ಬರ ಪುತ್ರಿಯಾಗಿರುವ ಯುವತಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ.  ಪ್ರಭಾಸ್ ಕುಟುಂಬಸ್ಥರು ಈಗಾಗಲೇ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಪ್ರಭಾಸ್ ಕುಟುಂಬಸ್ಥರು ಯಾವುದೇ ಅಧಿಕೃತ ಹೇಳಿಕೆಯನ್ನ ನೀಡಿಲ್ಲ. ಬಾಹುಬಲಿ ಬಳಿಕ ನಟ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆಯಾಗುತ್ತಾರೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಆದರೆ ಈ ವರದಿಗಳನ್ನು ಇಬ್ಬರು ನಿರಾಕರಿಸಿ ನಾವು ಕೇವಲ ಸ್ನೇಹಿತರಷ್ಟೇ ಎಂದಿದ್ದರು. ಕಳೆದ ವರ್ಷ ಪ್ರಭಾಸ್ ಮದುವೆ ಕುರಿತು ಪ್ರತಿಕ್ರಿಯೆ ನೀಡಿದ್ದ ಅವರ ದೊಡ್ಡಪ್ಪ ಕೃಷ್ಣಂ ರಾಜು, ಇದು ನಮ್ಮ ಕುಟುಂಬದ ವಿಚಾರವಾಗಿದ್ದು, ಇದನ್ನು ಬಹಿರಂಗವಾಗಿ ಚರ್ಚೆ ಮಾಡಲು ಇಷ್ಟಪಡುವುದಿಲ್ಲ. ಆದರೆ ಈ ವರ್ಷ ಪ್ರಭಾಸ್ ಮದುವೆ ನಡೆಯಲಿದೆ ಎಂದಿದ್ದರು. ಆದರೆ, ಈ ವರ್ಷ ಮುಗಿಯಲು ಕೆಲವೇ ದಿನಗಳಷ್ಟೇ ಬಾಕಿಯಿರುವುದು. ಈ ವರ್ಷ ಅಂತಾ ಹೇಳುತ್ತಲೇ ಇರುವುದು, ವರ್ಷಗಳು ಉರುಳುತ್ತಲೇ ಇರುವುದು ನೋಡಿ ಪ್ರಭಾಸ್ ಅಭಿಮಾನಿಗಳು ಕೂಡಾ ನಿರಾಶೆಗೊಂಡಿದ್ದರು. ಅದಕ್ಕೆ ಸರಿಯಾಗಿ ಈಗ ವೇಣುಸ್ವಾಮಿ ನುಡಿದಿರುವ ಭವಿಷ್ಯ ಪ್ರಭಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಂತೂ ಸತ್ಯ.

Sulekha