ಶರದ್ ಪವಾರ್ ‘ಬಾಹುಬಲಿ’ ಅಜಿತ್ ಪವಾರ್ ‘ಕಟ್ಟಪ್ಪ’ – ಎನ್‌ಸಿಪಿ ಬೆಂಬಲಿಗರ ಪೋಸ್ಟರ್ ವೈರಲ್

ಶರದ್ ಪವಾರ್ ‘ಬಾಹುಬಲಿ’ ಅಜಿತ್ ಪವಾರ್ ‘ಕಟ್ಟಪ್ಪ’ – ಎನ್‌ಸಿಪಿ ಬೆಂಬಲಿಗರ ಪೋಸ್ಟರ್ ವೈರಲ್

ಒಡೆದು ಎರಡು ಹೋಳಾಗಿರುವ ಎನ್​ಸಿಪಿಯಲ್ಲಿ ಈಗ ಕ್ಷಣಕ್ಕೊಂದು ಬೆಳವಣಿಗೆಗಳಾಗುತ್ತಿವೆ. ಅಜಿತ್​ ಪವಾರ್​​​ ತಮ್ಮ ಬೆಂಬಲಿಗರ ಜೊತೆ ಸೇರಿ ಮೈತ್ರಿ ಸರ್ಕಾರದ ಜೊತೆ ಕೈಜೋಡಿಸುತ್ತಲೇ ಇತ್ತ ಪವಾರ್​​ ಬೆಂಬಲಿಗರು ರೊಚ್ಚಿಗೆದ್ದಿದ್ದಾರೆ. ಎರಡೂ ಬಣಗಳ ಮಧ್ಯೆ ಈಗ ಪೋಸ್ಟರ್ ವಾರ್​ ಕೂಡ ಶುರುವಾಗಿದೆ. ಶರದ್​ ಪವಾರ್​​ರನ್ನ ಬಾಹುಬಲಿ ಮತ್ತು ಅಜಿತ್​ ಪವಾರ್​​ರನ್ನ ಕಟ್ಟಪ್ಪ ಅಂತಾ ಬಿಂಬಿಸಿ ಎನ್​ಸಿಪಿ ಬೆಂಬಲಿಗರು ಮುಂಬೈನಲ್ಲಿ ಪೋಸ್ಟರ್​ಗಳನ್ನ ಅಂಟಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ʼಪವಾರ್‌ʼ ಬಣಗಳ ಶಕ್ತಿ ಪ್ರದರ್ಶನ – ಮಗನ ಮುಂದೆ ಸೈಡ್‌ ಲೈನ್‌ ಆದ್ರಾ  ಎನ್‌ಸಿಪಿ ವರಿಷ್ಠ?

ಅಮರೇಂದರ ಬಾಹುಬಲಿ ಪವಾರ್​​ಗೆ ಕಟ್ಟಪ್ಪ ಅಜಿತ್ ಹಿಂದಿನಿಂದ ಖಡ್ಗ ಇರಿಯೋ ಫೋಟೋವನ್ನ ಪೋಸ್ಟರ್​​ನಲ್ಲಿ ನಮೂದಿಸಲಾಗಿದೆ. ಇವೆಲ್ಲದರ ಮಧ್ಯೆ, ಶರದ್ ಪವಾರ್ ನೇತೃತ್ವದಲ್ಲಿ​ ದೆಹಲಿಯಲ್ಲಿ ಎನ್​​ಸಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆದಿದ್ದು, 12 ಮಂದಿ ಬಂಡಾಯ ಶಾಸಕರನ್ನ ಪಕ್ಷದಿಂದ ಅಧಿಕೃತವಾಗಿ ಉಚ್ಛಾಟನೆ ಮಾಡಿದ್ದಾರೆ. ಬಳಿಕ ಮಾತನಾಡಿದ ಪವಾರ್, 82 ವರ್ಷದವನಾಗಿರಲಿ 92 ವರ್ಷವೇ ಆಗಲಿ.. ನನಗೆ ಇನ್ನೂ ಕೂಡ ರಾಜಕೀಯದಲ್ಲಿ ಸಾಮರ್ಥ್ಯ ಇದೆ ಅಂತಾ ಅಜಿತ್​ ಪವಾರ್​​ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

 

suddiyaana