ಗಂಡ ಸಾವಿನ ಬಳಿಕ ಕಾನ್ಸ್‌ಟೇಬಲ್ ಕಿರುಕುಳ! – ಪೊಲೀಸ್‌ ಸಿಬ್ಬಂದಿ ಪತ್ನಿ ಆತ್ಮಹತ್ಯೆ!

ಗಂಡ ಸಾವಿನ ಬಳಿಕ ಕಾನ್ಸ್‌ಟೇಬಲ್ ಕಿರುಕುಳ! – ಪೊಲೀಸ್‌ ಸಿಬ್ಬಂದಿ ಪತ್ನಿ ಆತ್ಮಹತ್ಯೆ!

ಗಂಡನಿಲ್ಲ ಎಂಬ ನೋವು ಒಂದ್ಕಡೆಯಾದ್ರೆ, ಪೇದೆ ಕಿರುಕುಳ ಇನ್ನೊಂದ್ಕಡೆ. ಇದೀಗ ಪೊಲೀಸ್‌ ಕಾನ್ಸ್‌ಟೇಬಲ್‌ ಕಿರುಕುಳ ತಾಳಲಾರದೆ ಪೊಲೀಸ್ ಸಿಬ್ಬಂದಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ  ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ಉಗ್ರರ ಕರಿನೆರಳು.. ಕೆಂಪು ಕೋಟೆ, ಚಾಂದಿನಿ ಚೌಕ್ ದೇಗುಲ ಸ್ಫೋಟಕ್ಕೆ ಸ್ಕೆಚ್! – ದೆಹಲಿಯಲ್ಲಿ ಹೈ ಅಲರ್ಟ್!‌

ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ವಾಟ್ಸಪ್‌ನಲ್ಲಿ ಡೆತ್‌ನೋಟ್‌ನಲ್ಲಿ ಪತ್ತೆಯಾಗಿದ್ದು, ಪೇದೆ ಮೋಹನ್ ಕಾಟ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾರೆ. ಮೋಹನ್‌ ಮಹಿಳೆಗೆ ಕಿರುಕುಳ ನೀಡಿದ ಪೇದೆ. ಇದೀಗ ಈ ಪ್ರಕರಣ ಸಂಬಂಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಮೃತ ಸ್ವಾತಿ ಹಾಗೂ ಜಗದೀಶ್ 7 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಜಗದೀಶ್ ತಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಅನುಕಂಪದ ಆಧಾರದ ಮೇಲೆ ಜಗದೀಶ್‌ಗೆ ಕೆಲಸ ಸಿಕ್ಕಿತ್ತು. ಕಳೆದ ಹತ್ತು ವರ್ಷಗಳಿಂದ ಕೆಎಸ್‌ಐಎಸ್‌ಎಫ್‌ನಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದರು. ಫೆ.14ರಂದು ಕರ್ತವ್ಯ ನಿಮಿತ್ತ ಜಗದೀಶ್ ಚಿತ್ರದುರ್ಗಕ್ಕೆ ಹೋಗಿ ಬಂದಿದ್ದರು. ರಾತ್ರಿ 9 ಗಂಟೆ ಮನೆಗೆ ಬಂದು ಅಡುಗೆ ಮಾಡುವಂತೆ ಪತ್ನಿಗೆ ತಿಳಿಸಿ ಮಹಡಿ ಮೇಲಿನ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅತಿಯಾದ ಮದ್ಯ ಸೇವನೆ, ಹೊಟ್ಟೆ ನೋವಿನಿಂದ ಜಗದೀಶ್ ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಶಂಕಿಸಿದ್ದರು.

ಜಗದೀಶ್ ಸಾವನ್ನಪ್ಪುತ್ತಿದ್ದಂತೆ ಪೊಲೀಸ್ ಪೇದೆ ಮೋಹನ್ ಸ್ವಾತಿಗೆ ಕಿರುಕುಳ ನೀಡಲು ಆರಂಭಿಸಿದ್ದ. ಮೊದಲು ಫೇಸ್‌ಬುಕ್‌ನಲ್ಲಿ ಮೆಸೇಜ್ ಮಾಡಿದ್ದ. ಆಗ ಸ್ವಾತಿ ಆತನ ಆಕೌಂಟ್ ಬ್ಲಾಕ್ ಮಾಡಿದ್ದರು. ಇದಕ್ಕೆ ಕೋಪಗೊಂಡು ಬೇರೆ ಅಕೌಂಟ್‌ನಿಂದ ಸ್ವಾತಿ ಬಗ್ಗೆ ಅಪಪ್ರಚಾರ ಮಾಡಿದ್ದ. ಈತನ ಕಾಟ ತಾಳಲಾರದೆ ಡೆತ್‌ನೋಟ್ ಬರೆದಿಟ್ಟು ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ವಾತಿ ಡೆತ್ನೋಟ್ಏನಿದೆ?   

ಡೆತ್‌ನೋಟ್‌ನಲ್ಲಿ ಅಮ್ಮ ಸಾರಿ, ನನ್ನ ಬಗ್ಗೆ ಇಲ್ದೇ ಇರೋದೆಲ್ಲ ಕೆಟ್ಟದಾಗಿ ಜನಗಳ ಹತ್ತಿರ ಹೇಳಿದ್ರೆ ನಂಗೆ ತಡಿಯೋಕೆ ಆಗ್ತಿಲ್ಲ. ಅವನನ್ನ ಮಾತ್ರ ಸುಮ್ನೆ ಬಿಡಬೇಡಿ. ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ ಪ್ಲೀಸ್ ಎಂದು ಬರೆದುಕೊಂಡಿದ್ದಾರೆ. ಈ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆ ಎಫ್‌ಐಆರ್‌ ದಾಖಲಾಗಿದೆ.

Shwetha M