‘ಆಸ್ಕರ್ ಪ್ರಶಸ್ತಿ ನನಗೆ ಮುಟ್ಟಲು ಬಿಡಿ ಪ್ಲೀಸ್’ – ರಾಮ್‌ಚರಣ್‌ಗೆ ಶಾರುಖ್ ಪ್ರೀತಿಯ ಸಂದೇಶ

‘ಆಸ್ಕರ್ ಪ್ರಶಸ್ತಿ ನನಗೆ ಮುಟ್ಟಲು ಬಿಡಿ ಪ್ಲೀಸ್’ – ರಾಮ್‌ಚರಣ್‌ಗೆ ಶಾರುಖ್ ಪ್ರೀತಿಯ ಸಂದೇಶ

ಚಿತ್ರರಂಗದಲ್ಲಿ ಕಲಾವಿದರ ಬಾಂಧವ್ಯ ಮೆಚ್ಚುವಂತದ್ದು. ಅದರಲ್ಲೂ ಬಾಲಿವುಡ್ ಕಿಂಗ್‌ಖಾನ್ ಟಾಲಿವುಡ್‌ನ ರಾಮ್‌ಚರಣ್ ನಡುವೆ ಇರುವ ಬಾಂಧವ್ಯವಂತೂ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಅದಕ್ಕೆ ಕಾರಣ ಇದೀಗ ಶಾರುಖ್ ಖಾನ್ ರಾಮ್‌ಚರಣ್‌ಗೆ ಕಳಿಸಿರುವ ವಿಶೇಷ ಸಂದೇಶ. ರಾಮ್ ಚರಣ್ ನಟನೆಯ ‘ಆರ್‌ಆರ್‌ಆರ್‌’ ಸಿನಿಮಾ ಆಸ್ಕರ್ ಪ್ರಶಸ್ತಿ ಪಡೆಯಲು ಅರ್ಹತಾ ಸುತ್ತು ಪ್ರವೇಶಿಸಿದೆ. ಖಂಡಿತವಾಗಿಯೂ ಈ ಚಿತ್ರಕ್ಕೆ ಆಸ್ಕರ್ ಒಲಿಯಲಿದೆ ಎಂಬ ಭರವಸೆ ಶಾರುಖ್ ಖಾನ್ ಅವರಿಗೆ ಇದೆ. ಅದೇ ನಂಬಿಕೆ ಮೇಲೆ ಅವರು ಟ್ವೀಟ್ ಮಾಡಿದ್ದಾರೆ. ಆಸ್ಕರ್ ಪ್ರಶಸ್ತಿಯನ್ನು ‘ಆರ್‌ಆರ್‌ಆರ್‌’ ಚಿತ್ರತಂಡ ಭಾರತಕ್ಕೆ ತಂದಾಗ ನನಗೆ ಅದನ್ನು ಮುಟ್ಟಲು ಕೊಡಿ ಪ್ಲೀಸ್’ ಎಂದು ಶಾರುಖ್ ಖಾನ್ ಮನವಿ ಮಾಡಿದ್ದಾರೆ.

ಶಾರುಖ್ ಖಾನ್ ಅವರು ಈ ಮಾತಿಗೆ ಪ್ರತಿಕ್ರಿಯಿಸಿರುವ ರಾಮ್ ಚರಣ್ ಅವರು, ‘ಖಂಡಿತವಾಗಿಯೂ ಶಾರುಖ್ ಸರ್. ಆ ಪ್ರಶಸ್ತಿ ಭಾರತೀಯ ಚಿತ್ರರಂಗಕ್ಕೆ ಸೇರಿದ್ದು’ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:  ಆಸ್ಕರ್ ಅಂಗಳದಲ್ಲಿ ಕಾಂತಾರ, ವಿಕ್ರಾಂತ್ ರೋಣ – ಅರ್ಹತೆ ಸುತ್ತು ಪಾಸ್ ಮಾಡಿದ ಕನ್ನಡ ಚಿತ್ರಗಳು

ಈಗಾಗಲೇ ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಟ್ರೇಲರ್ ಅನ್ನು ರಾಮ್ ಚರಣ್ (Ram Charan) ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಇಡೀ ಪಠಾಣ್ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ. ಹಿಂದೆಂದೂ ಕಾಣದ ರೀತಿಯಲ್ಲಿ ಶಾರುಖ್ ಖಾನ್ ಅವರನ್ನು ಸಾಹಸ ದೃಶ್ಯಗಳಲ್ಲಿ ನೋಡಲು ಕಾದಿದ್ದೇನೆ’ ಎಂದು ಟ್ವೀಟ್ ಮಾಡಿರುವ ರಾಮ್ ಚರಣ್ ಅವರು ‘ಪಠಾಣ್’ ಟ್ರೇಲರ್ ಹಂಚಿಕೊಂಡಿದ್ದಾರೆ. ಈ ಸಿನಿಮಾ ತೆಲುಗಿನಲ್ಲಿಯೂ ಬಿಡುಗಡೆ ಆಗಲಿದೆ. ಅದಕ್ಕೆ ಶಾರುಖ್ ಖಾನ್ ಅವರು ಆತ್ಮೀಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರ ಈ ಮಾತಿನ ಮಧ್ಯೆ ಆಸ್ಕರ್ ಪ್ರಶಸ್ತಿ (Oscar 2023) ವಿಚಾರ ಪ್ರಸ್ತಾಪ ಆಗಿದೆ.

suddiyaana