ಅಪವಿತ್ರ ಬಂಧಕ್ಕಾಗಿ ದಾರಿ ತಪ್ಪಿದ ಸಾರಥಿ – ದಚ್ಚು ಬಾಳಿಗೆ ಬಂದಿದ್ದೇಗೆ ಮಾಯಾಂಗನೆ?
ಹೆತ್ತವರ ಹುಚ್ಚಾಟಕ್ಕೆ ಮಕ್ಕಳಿಗೆ ಶಿಕ್ಷೆನಾ?

ಅಪವಿತ್ರ ಬಂಧಕ್ಕಾಗಿ ದಾರಿ ತಪ್ಪಿದ ಸಾರಥಿ – ದಚ್ಚು ಬಾಳಿಗೆ ಬಂದಿದ್ದೇಗೆ ಮಾಯಾಂಗನೆ?ಹೆತ್ತವರ ಹುಚ್ಚಾಟಕ್ಕೆ ಮಕ್ಕಳಿಗೆ ಶಿಕ್ಷೆನಾ?

ಪವಿತ್ರಾ ಗೌಡ. ಈಕೆಗಾಗಿಯೇ ಸ್ಯಾಂಡಲ್‌ವುಡ್‌ನ ಗಜ ಒಂದು ಜೀವವನ್ನೇ ಬಲಿ ಪಡೆಯೋ ಮಟ್ಟಿಗೆ ಹೋಗಿದ್ದಾರೆಂದರೆ ಆಕೆ ಪವರ್‌ಫುಲ್ ಲೇಡಿಯೇ ಇರ್ಬೇಕು ಬಿಡಿ. ಮೊದಲ ಪತ್ನಿ ವಿಜಯಲಕ್ಷ್ನೀ, ಎದೆಯೆತ್ತರ ಬೆಳೆದು ಅಪ್ಪ ತೋರಿಸುವ ದಾರಿಯಲ್ಲಿ ನಡೆಯಬೇಕಿದ್ದ ಮಗನ ಮರೆತು ಯಾವಾಗ ದರ್ಶನ್ ಪವಿತ್ರಾಗೌಡ ಜೊತೆ ಸಂಬಂಧ ಶುರುಮಾಡಿದ್ರೋ ಅಲ್ಲಿಂದ ಇಲ್ಲಿವರೆಗೂ ನಡೆದಿದ್ದು ಬರೀ ವಿವಾದ. ಪರ್ಸನಲ್ ಲೈಫ್‌ ಲ್ಲಿ ನಡೆಯೋ ಜಗಳ ಸೋಶಿಯಲ್ ಮೀಡಿಯಾದಲ್ಲಿ ಯಾವ ಲೆವೆಲ್ ಗೆ ಹೋಗ್ತಿತ್ತು ಅಂದ್ರೆ ಇವ್ರ ಜೀವನ ಇಷ್ಟೇ ಬಿಡು ಅನ್ನುವಷ್ಟು ಬೇಸರವಾಗ್ತಿತ್ತು. ಡಿಬಾಸ್‌ಗೆ ತಾಳ್ಮೆ ಇಲ್ವೋ, ಗಜನಿಗೆ ತಾನು ನಡೆದಿದ್ದೇ ದಾರಿ ಎಂಬ ದರ್ಪವೋ, ಅಂತೂ ಪವಿತ್ರಾಗೌಡಗಾಗಿ ಅಭಿಮಾನಿಯ ಜೀವವನ್ನೇ ತೆಗೆಯೋ ಮಟ್ಟಕ್ಕೆ ಇಳಿದದ್ದೂ ಆಯ್ತು. ಪೊಲೀಸ್ ಕಂಬಿ ಹಿಂದೆ ಹೋಗಿದ್ದು ಆಯ್ತು. ಇನ್ನು ಪವಿತ್ರಗೌಡ. ಇಷ್ಟು ದಿನ ದರ್ಶನ್ ಪತ್ನಿ ವಿಜಯಲಕ್ಷ್ಮೀ ಜೊತೆ ನಿನ್ನ ಗಂಡನನ್ನ ನಾನೇ ಚೆನ್ನಾಗಿ ನೋಡಿಕೊಳ್ಳೋದು, 10 ವರ್ಷಗಳ ಸಂಬಂಧದಲ್ಲಿ ಕಾಳಜಿ ಪ್ರೀತಿಯೇ ತುಂಬಿತ್ತು ಎಂದು ಹೇಳಿಕೊಂಡ ಪವಿತ್ರಗೌಡ ಈಗ ಡಿ ಬಾಸ್‌ ಹೆಸ್ರನ್ನೇ ಡಿಗ್ಯಾಂಗ್ ಮಾಡುವಷ್ಟು ಶಕ್ತಿತುಂಬಿದ್ದಂತೂ ಹೌದು. ಡಿ ಗ್ಯಾಂಗ್‌ನ ಎ1 ಆರೋಪಿ ಪವಿತ್ರಗೌಡ ದರ್ಶನ್ ಸಹವಾಸ ಮಾಡಿದ್ದು ಹೇಗೆ?, ದರ್ಶನ್ ತೆಕ್ಕೆ ಸೇರಿದ ಮೇಲೆ ಮೊದಲ ಪತಿಯಿಂದ ದೂರವಾಗಿದ್ದು ಹೇಗೆ? ಆ ಅಪ್ಪನೂ ಇಲ್ಲದೆ, ಈಗ ಈ ಅಪ್ಪನೂ ಇಲ್ಲದೆ ಪಾಪದ ಮಗಳ ಭವಿಷ್ಯವೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: US ಸೋಲಿಸಿದ್ರೂ INDಗೆ ಶಾಕ್ – 111 ರನ್ ಟಾರ್ಗೆಟ್ ಕಷ್ಟವಾಗಿದ್ದೇಕೆ?

ಬೆಂಗಳೂರಿನ ತಲಘಟ್ಟಪುರದ ನಿವಾಸಿ ಪವಿತ್ರಾಗೌಡ ಹದಿಹರೆಯಕ್ಕೆ ಕಾಲಿಡುತ್ತಲೇ ಕಂಡಿದ್ದು ಬಣ್ಣದ ಲೋಕದ ಕನಸನ್ನು. ಮೊದಲಿಗೆ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ಪವಿತ್ರಾಗೌಡ ಸಿಕ್ಕ ಅವಕಾಶವನ್ನ ಯಾವತ್ತೂ ಮಿಸ್ ಮಾಡಿಕೊಂಡಿದ್ದೇ ಇಲ್ಲ. ಬೆಂಗಳೂರಿನ ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಸಿಎ ಪದವಿ ಮುಗಿಸಿದ ಪವಿತ್ರಾ ಗೌಡ ಮಾಡೆಲಿಂಗ್‌ ಹಾಗೂ ರ‍್ಯಾಂಪ್ ಶೋಗಳಲ್ಲಿ ಹೆಜ್ಜೆ ಹಾಕಿದ್ದರು. ಜೊತೆಗೆ ಚಿನ್ನಾಭರಣ ಮಳಿಗೆಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಮಿಸ್ ಬೆಂಗಳೂರು ಆಗಿಯೂ ಗುರುತಿಸಿಕೊಂಡಿದ್ದರು. ಚಿತ್ರರಂಗದಲ್ಲಿನ ಅವಕಾಶಗಳಿಗಾಗಿ ಅಲೆಯುತ್ತಿದ್ದ ಪವಿತ್ರಾ ಗೌಡ ಅವರನ್ನು ಗುರುತಿಸಿದ್ದು ನಿರ್ದೇಶಕ ಉಮೇಶ್‌ ಗೌಡ. ‘ಅಗಮ್ಯ’ ಚಿತ್ರದ ಮೂಲಕ ಪವಿತ್ರಗೌಡ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ರು. ಎಂ ಪಿ ಜಯರಾಜ್‌ ಪುತ್ರ ಅಜಿತ್‌ ಜಯರಾಜ್‌ ನಾಯಕನಾಗಿ ನಟಿಸಿದ್ದ ‘ಅಗಮ್ಯ’ ಚಿತ್ರ ತೆರೆಕಂಡು ಅಟ್ಟರ್ ಪ್ಲಾಫ್ ಆಯ್ತು. ತಾನು ನಾಯಕಿಯಾಗಿ ನಟಿಸಿದ್ದ ಮೊದಲ ಚಿತ್ರವೇ ಸೋಲು ಕಂಡಾಗ ತಮಿಳಿನತ್ತ ಮುಖ ಮಾಡಿದರು. ತಮಿಳಿನಲ್ಲಿ ಒಂದು ಚಿತ್ರ ಮಾಡಿ ಮತ್ತೆ ಕನ್ನಡಕ್ಕೆ ಮರಳಿದ ಪವಿತ್ರಾ ‘ಛತ್ರಿಗಳು ಸಾರ್‌ ಛತ್ರಿಗಳು’, ‘ಸಾಗುವ ದಾರಿಯಲ್ಲಿ’, ‘ಪ್ರೀತಿ ಕಿತಾಬು’ ಚಿತ್ರಗಳಲ್ಲಿ ನಟಿಸಿದರು. ಆಮೇಲೆ ದಿಢೀರ್ ನಾಪತ್ತೆಯಾದ ಪವಿತ್ರಾ ಮತ್ತೆ ಪ್ರತ್ಯಕ್ಷವಾಗಿತ್ತು ದರ್ಶನ್ ಜೊತೆ.

ಇಲ್ಲಿ ಒಂದು ವಿಚಾರ ಹೇಳಲೇಬೇಕು. ಪವಿತ್ರಾ ಇದ್ರ ಮಧ್ಯೆ ಮದ್ವೆಯಾಗಿದ್ದರು. ಅದು ಕೂಡಾ ಪ್ರೀತಿಸಿ ಮದ್ವೆಯಾಗಿದ್ದರು. 2002ರಲ್ಲಿ ಉತ್ತರಪ್ರದೇಶದ ನಿವಾಸಿ ಸಂಜಯ್ ಸಿಂಗ್ ಎಂಬುವರ ಜೊತೆ ಮದ್ವೆಯಾಗಿದ್ದರು. ಮದುವೆಯಾಗಿ 3 ವರ್ಷ ಆದ ಮೇಲೆ ಸಂಜಯ್ ಸಿಂಗ್ ಮತ್ತು ಪವಿತ್ರಾಗೌಡಗೆ ಮಗಳು ಹುಟ್ಟಿದಳು. ಆಮೇಲೆ ಪವಿತ್ರಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು. ಚಿತ್ರರಂಗಕ್ಕೆ ಕಾಲಿಟ್ಟಮೇಲೆ ಯಾವಾಗ ದರ್ಶನ್ ಸಂಗ ಬೆಳೆಯಿತೋ ಸಂಜಯ್ ಸಿಂಗ್ ಜೊತೆ ಮನಸ್ತಾಪ ಶುರುವಾಯ್ತು. ದರ್ಶನ್ ಜೊತೆ ಸೇರಿದ ಮೇಲೆ 1 ವರ್ಷ ದೂರ ಇದ್ದೆವು ಎಂದು ಸ್ವತಃ ಸಂಜಯ್ ಸಿಂಗ್ ಹೇಳಿಕೆ ನೀಡಿದ್ದಾರೆ. 2013ರಲ್ಲಿ ನಮ್ಮ ಡಿವೋರ್ಸ್‌ ಆಯ್ತು. ಡಿವೋರ್ಸ್ ಮೊದಲೇ ನಾವಿಬ್ಬರು ಒಂದು ವರ್ಷ ಪ್ರತ್ಯೇಕವಾಗಿ ವಾಸಿಸುತ್ತಿದ್ದೆವು. ಗಂಡ ಹೆಂಡತಿ ಮಧ್ಯೆ ಕೆಲ ವಿಚಾರಕ್ಕೆ ಸಣ್ಣ ಸಣ್ಣ ಜಗಳ ಆಗುತಿತ್ತು. ಅವಳು ಡಿವೋರ್ಸ್‌ ಫೈಲ್‌ ಮಾಡಿದಾಗ ನಾನು ಮುಂಬೈನಲ್ಲಿದ್ದೆ. ಆಗ ಅವಳು ದರ್ಶನ್‌ ಜೊತೆ ಸಂಬಂಧದಲ್ಲಿ ಇದ್ದಾಳೆ ಎಂಬ ವಿಚಾರ ಗೊತ್ತಾಯ್ತು ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. ನಾನು ಅವಳನ್ನ ಚಿನ್ನು ಅಂತ ಕರೆಯುತ್ತಿದ್ದೆ. ಅವಳು ಸಂಜಯ್ ಅನ್ನುತ್ತಿದ್ದಳು. ನಾವಿಬ್ಬರು ಜೊತೆಗೆ ಇರಲು ಸಾಧ್ಯವಿಲ್ಲ. ನಾನು ಮತ್ತು ದರ್ಶನ್ ಗಂಡ ಹೆಂಡತಿ ಆಗಲು ಇಷ್ಟಪಟ್ಟಿದ್ದೇವೆ ಎಂದು ಹೇಳಿದ್ದಳು. ಅದಕ್ಕೆ ನನ್ನಿಂದ ಏನು ಆಗಬೇಕು ಎಂದು ಕೇಳಿದೆ. ಅದಕ್ಕೆ ಡಿವೋರ್ಸ್‌ ಕೊಡು ಎಂದು ಹೇಳಿದ್ದಳು. ನಾನು ಸರಿ ಎಂದು ಡಿವೋರ್ಸ್‌ ಕೊಟ್ಟೆ. ಬಳಿಕ ಆಕೆ ದರ್ಶನ್‌ ಜೊತೆ ಜೀವನ ಮಾಡಲು ಶುರು ಮಾಡಿದಳು ಎಂದು ಸಂಜಯ್ ಸಿಂಗ್ ಪವಿತ್ರಾ ಪ್ರೀತಿ ರಹಸ್ಯವನ್ನು ರಿವೀಲ್ ಮಾಡಿದ್ದಾರೆ.

ಈ ಮಧ್ಯೆ ದರ್ಶನ್‌ಗೂ ಪವಿತ್ರಾಗೂ ಪ್ರೀತಿ ಶುರುವಾಗಿದ್ದು ಎಲ್ಲಿ ಅನ್ನೋದೇ ಇಂಟ್ರಸ್ಟಿಂಗ್ ವಿಚಾರ. ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದ್ದರೂ ಪವಿತ್ರಾಗೌಡ ಯಾವ ಸಿನಿಮಾದಲ್ಲೂ ಸದ್ದು ಮಾಡಲೂ ಸಾಧ್ಯವಾಗಿರಲಿಲ್ಲ. ಪವಿತ್ರಾ ಗೌಡ ನಾಯಕಿ ಪಾತ್ರಗಳಿಗಾಗಿ ಆಡಿಷನ್‌ ಕೊಡುತ್ತಲೇ ಇದ್ದರು. ನಂತರ ದರ್ಶನ್ ಹೀರೋ ಆಗಿ ನಟಿಸಿದ್ದ ಜಗ್ಗುದಾದ ಸಿನಿಮಾಕ್ಕೂ ಆಡಿಷನ್ ಕೊಡಲು ಬಂದಿದ್ರು. ಆದ್ರೆ, ಸಿನಿಮಾಕ್ಕೆ ಸೆಲೆಕ್ಟ್ ಆಗಿಲ್ಲ. ಬಟ್. ದರ್ಶನ್ ಹಾರ್ಟ್‌ನಲ್ಲಿ ಚಿಟ್ಟೆ ಬಿಟ್ಟು ಖಾಯಂ ಆಗಿ ದರ್ಶನ್ ರಿಯಲ್ ಲೈಫ್​ಗೆ ಹೀರೋಯಿನ್ ಆಗಿ ಸೆಲೆಕ್ಟ್ ಆಗಿದ್ರು. ಇಲ್ಲೊಂದು ವಿಚಾರ ಗಮನಿಸಬೇಕು. ಆಗ ದರ್ಶನ್ ಕೂಡಾ ವಿಜಯಲಕ್ಷ್ಮೀ ಜೊತೆ ಮದುವೆಯಾಗಿ ಮಗನಿಗೆ ತಂದೆಯಾಗಿದ್ದರು. ಇತ್ತ ಪವಿತ್ರಾಗೌಡ ಕೂಡಾ ಸಂಜಯ್ ಸಿಂಗ್ ಮದುವೆಯಾಗಿ ಮಗಳಿಗೆ ತಾಯಿಯಾಗಿದ್ದರು. ಆದ್ರೆ, ಇಬ್ಬರಿಗೂ ಮತ್ತೊಂದು ಬಾರಿ ಪ್ರೀತಿಯಾಗಿತ್ತು. ಹೀಗೆ ಪದೆ ಪದೆ ಪ್ರೀತಿಯಾಗಿ ಸಂಸಾರ ಹಾಳು ಮಾಡಿಕೊಳ್ಳಲು ಇವರಿಗೆ ಮಾತ್ರ ಸಾಧ್ಯ ಬಿಡಿ. ಇದೇ ಹಾಳು ಪ್ರೀತಿಯೇ ಈಗ ಜೈಲೂಟದವರೆಗೂ ಬಂದು ನಿಂತಿರೋದು.

ಇನ್ನು ಪವಿತ್ರಾಗೌಡ ಮತ್ತು ದರ್ಶನ್ ಪ್ರೀತಿ ಪುರಾಣ ಹೊರಜಗತ್ತಿಗೆ ಅಷ್ಟಾಗಿ ಗೊತ್ತಾಗಿರಲಿಲ್ಲ. ಆದ್ರೆ, ಪ್ರೀತಿಯನ್ನು ಮುಚ್ಚಿಟ್ಟುಕೊಂಡು ಬದುಕೋದು ಪವಿತ್ರಾಗೌಡಗೆ ಬೇಕಾಗೂ ಇರಲಿಲ್ಲ. ದರ್ಶನ್‌ ಜೊತೆ ಅತ್ಯಾಪ್ತವಾದ ಫೋಟೋವನ್ನು ಪವಿತ್ರಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡೋಕೆ ಶುರುಮಾಡಿದ್ರು. ಪವಿತ್ರಾಗೌಡಳ ಇದೇ ದುರಂಹಂಕಾರ ದರ್ಶನ್‌ ಹಾಗೂ ವಿಜಯಲಕ್ಷ್ಮೀ ದಾಂಪತ್ಯದಲ್ಲಿನ ಗಲಾಟೆಗೂ ಕಾರಣವಾಯಿತು. ನಂತರ ಕುರುಕ್ಷೇತ್ರ ಸಿನಿಮಾ ಸೆಟ್ಟಿಂಗ್‌ಗೆ ರಾಜಾರೋಷವಾಗಿ ನಾನೇ ದರ್ಶನ್ ಪತ್ನಿ ಅಂತಾ ಬಂದು ಕೂರುತ್ತಿದ್ದರು ಪವಿತ್ರಾಗೌಡ. ದರ್ಶನ್‌ ಅವರ ಕುಟುಂಬದ ಸದಸ್ಯರ ಜತೆಗೂ ತಮ್ಮ ಫೋಟೋಗಳನ್ನು ಹಂಚಿಕೊಳ್ಳೋಕೆ ಶುರುಮಾಡಿದ್ರು. ‘ದರ್ಶನ್‌ ಜೊತೆಗೆ 10 ವರ್ಷದ ಸಂಬಂಧ’ ಎಂದು ಹೇಳಿಕೊಂಡಿರೋ ಫೋಟೋ ಪವಿತ್ರ ಗೌಡ ಮತ್ತು ವಿಜಯ ಲಕ್ಷ್ಮೀ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ಗೂ ಕಾರಣವಾಗಿತ್ತು.

ಇಲ್ಲಿ ಪವಿತ್ರಾಗೌಡಗೆ ತಾನೇ ದರ್ಶನ್ ಪತ್ನಿ ಎಂದು ಹೇಳಿಕೊಳ್ಳೋ ಚಟ. ವಿಜಯಲಕ್ಷ್ಮೀಗೆ ತನ್ನ ಮಗನ ಸಲುವಾಗಿಯಾದ್ರೂ ಈ ಸಂಬಂಧ ಹೊರಜಗತ್ತಿಗೆ ಗೊತ್ತಾಗಬಾರದು ಎಂಬ ಹಠ, ಇಬ್ಬರ ನಡುವೆ ಜಗಳ ನಡೆದರೂ ದರ್ಶನ್ ಮಾತ್ರ ಸೈಲೆಂಟ್ ಬಾಬಾ. ಅತ್ತ ಮಗಳಿಗೆ ಅದೇನ್ ನ್ಯಾಯ ಸಿಕ್ಕಿತೋ, ಇತ್ತ ಮಗನಿಗೆ ಅದೆಂಥಾ ನೋವಾಗಿತ್ತೋ ಈ ಅನೈತಿಕ ಪ್ರೀತಿ, ಎರಡನೇ ಸಂಬಂಧ, ಎರಡನೇ ಮದುವೆ ನಡುವೆ ಅಕ್ಷರಶಃ ಬಲಿಪಶುಗಳಾಗಿದ್ದು ಆ ಎಳೇ ಕಂದಮ್ಮಗಳು. ಈಗ ಮಕ್ಕಳು ದೊಡ್ಡವರಾಗಿದ್ದಾರೆ. ಆದ್ರೆ, ತಾನೊಬ್ಬ ಹೀರೋ ಅನ್ನೋದನ್ನೂ ಮರೆದು ದರ್ಶನ್ ಕೊಲೆ ಮಾಡೋ ಮಟ್ಟಕ್ಕೂ ಇಳಿದಿದ್ದಾರೆ. ಇದನ್ನೆಲ್ಲಾ ನೋಡಿ ಮಕ್ಕಳು ಹೇಗೆ ಎದುರಿಸ್ತಾರೋ. ಜೊತೆಗೆ ರಿಯಲ್ ಅಪ್ಪ ಜೊತೆಗಿಲ್ಲ, ಎರಡನೇ ಅಪ್ಪ ಕಂಬಿ ಹಿಂದೆ ಸೇರಿದ್ದಾನೆ. ಅಮ್ಮನೇ ಇದೆಲ್ಲಕ್ಕೂ ಕಾರಣವಾಗಿರೋದು ಮಗಳ ಮನಸಿಗೆ ಅದೆಷ್ಟು ನೋವು ಕೊಟ್ಟಿದ್ಯೋ. ಪವಿತ್ರಾಗೌಡ ಇಲ್ಲಿ ಎಲ್ಲಾ ಅವಾಂತರಕ್ಕೂ ಕಾರಣವಾಗಿದ್ದು ಮಾತ್ರ ಸುಳ್ಳಲ್ಲ. ಪ್ರೀತಿ ಮಾಡಿದ್ರೆ ಮಾಡಲಿ, ಈ ಜಗತ್ತಲ್ಲಿ ಪ್ರೀತಿ ಯಾರನ್ನು ಯಾವಾಗ ಬೇಕಾದರೂ ಮಾಡಬಹುದು. ಆದ್ರೆ, ಪ್ರೀತಿಗೆ ಕಳಂಕ ತರುವ ಕೆಲಸ ಮಾಡೋದು ಮಾತ್ರ ತಪ್ಪು. ಈಗ ಪವಿತ್ರಾ ಗೌಡ ಮಾಡಿದ್ದು ಅದನ್ನೇ. ದರ್ಶನ್ ಏನು ಎಂಥವನು ಅಂತಾ ಗೊತ್ತಿದ್ದ ಮೇಲೂ ಪ್ರಚೋದಿಸಿದ್ದು ಎಷ್ಟರಮಟ್ಟಿಗೆ ಸರಿ. ದರ್ಶನ್ ಕೂಡಾ ಪೊಲೀಸ್ ಕಸ್ಟಡಿಯಲ್ಲಿದ್ದುಕೊಂಡೇ ನನ್ನ ಈ ಪರಿಸ್ಥಿತಿಗೆ ನೀನೇ ಕಾರಣ ಅಂತಾ ಪವಿತ್ರಾಗೌಡ ಮೇಲೆ ಮುನಿಸಿಕೊಂಡಿದ್ದಾರಂತೆ. ಪವಿತ್ರಾಗೌಡ ಪಕ್ಕದಲ್ಲೇ ನಿಂತು ಕಣ್ಣೀರು ಹಾಕಿದ್ರೂ ಕೂಡಾ ದರ್ಶನ್ ಕಣ್ಣೆತ್ತಿಯೂ ನೋಡುತ್ತಿಲ್ಲ ಎನ್ನಲಾಗ್ತಿದೆ. ಕೆಟ್ಟ ಮೇಲೆ ಬುದ್ದಿ ಬಂದರೆ ಪ್ರಯೋಜನವಿಲ್ಲ. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು. ಆದ್ರೆ, ಈ ಮಧ್ಯೆ ಏನೂ ತಪ್ಪು ಮಾಡದ ಮುಗ್ಧ ಮಕ್ಕಳು ಅನುಭವಿಸುವ ಯಾತನೆಗೆ ದೇವರೇ ಧೈರ್ಯಕೊಡಬೇಕು.

Shwetha M

Leave a Reply

Your email address will not be published. Required fields are marked *