ಪಾರು ಸೀರಿಯಲ್ ಮುಕ್ತಾಯ – ಜನರ ಮನಗೆದ್ದ ಅಖಿಲಾಂಡೇಶ್ವರಿ

ಪಾರು ಸೀರಿಯಲ್ ಮುಕ್ತಾಯ – ಜನರ ಮನಗೆದ್ದ ಅಖಿಲಾಂಡೇಶ್ವರಿ

ಇತ್ತೀಚೆಗಷ್ಟೇ ಹಿಟ್ಲರ್ ಕಲ್ಯಾಣ ಸೀರಿಯಲ್ ಎಂಡ್ ಆಗಿತ್ತು. ಇದೀಗ ಪಾರು ಸೀರಿಯಲ್ ಸರದಿ. ಕಳೆದ ಆರು ವರ್ಷಗಳಿಂದ ಮನರಂಜನೆ ನೀಡುತ್ತಾ ಬಂದಿರುವ ಪಾರು ಸೀರಿಯಲ್ ಕೊನೆಯ ಹಂತಕ್ಕೆ ಬಂದು ನಿಂತಿದೆ. ಪಾರು ಧಾರಾವಾಹಿಯ ಅಂತಿಮ ಸಂಚಿಕೆ ಪ್ರಸಾರವಾಗುತ್ತಿದೆ. ಪಾರು ಸೀರಿಯಲ್ ತಂಡ ಕೂಡಾ ಕೊನೇ ದಿನದ ಸಂಚಿಕೆ ಮುಗಿಸಿದ ಮೇಲೆ ಕೇಕ್ ಕಟ್ ಮಾಡಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ.

ಇದನ್ನೂ ಓದಿ:ಚೈತ್ರಾ ಆಚಾರ್‌ ಸಿಕ್ಕಾಪಟ್ಟೆ ಬೋಲ್ಡ್‌ – ಪಡ್ಡೆ ಹುಡುಗರ ಹೃದಯ ಕದ್ದ ನಟಿ

ಕಳೆದ ಆರು ವರ್ಷಗಳಿಂದ ಪ್ರಸಾರವಾಗುತ್ತಿರುವ ಜನಪ್ರಿಯ ಪಾರು ಸೀರಿಯಲ್ ಶೀಘ್ರದಲ್ಲೇ ಮುಕ್ತಾಯವಾಗಲಿದೆ. 2018 ರಿಂದ ಆರಂಭವಾಗಿ 2024ರ ತನಕ ಬರೋಬ್ಬರಿ 6 ವರ್ಷಗಳ ಕಾಲ, ಉತ್ತಮ ಕಥೆ, ಚಿತ್ರಕಥೆಯೊಂದಿಗೆ, ಟ್ವಿಸ್ಟ್ ನೀಡುತ್ತಾ ಜನರನ್ನು ರಂಜಿಸುತ್ತಾ ಬಂದಿದ್ದ ಧಾರಾವಾಹಿ ಪಾರು. ಆರು ವರ್ಷಗಳಿಂದಲೂ ತನ್ನ ಕಥೆಯಿಂದ ಜನರನ್ನು ಸೆಳೆಯುತ್ತಲೇ ಬಂದಿದೆ. ಮೋಕ್ಷಿತಾ ಪೈ ಪಾರು ಪಾತ್ರದಲ್ಲಿ, ವಿನಯ ಪ್ರಸಾದ್ ಅಖಿಲಾಂಡೇಶ್ವರಿ ಪಾತ್ರದಲ್ಲಿ ವೀಕ್ಷಕರ ಮನಗೆದ್ದಿದ್ದರು.

ಧಾರಾವಾಹಿ ಮುಗಿಯುವ ಬಗ್ಗೆ ಜೀ ಕನ್ನಡ ತನ್ನ ಸೋಷಿಯಲ್ ಮೀಡಿಯಾ ಪೇಜಿನಲ್ಲಿ ಹೇಳಿ ಕೊಂಡಿತ್ತು. ಈಗ ಸೀರಿಯಲ್ ತಂಡ ಸೀರಿಯಲ್ ನ ಕೊನೆಯ ದಿನ ಕೇಕ್ ಕತ್ತರಿಸುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಪಾರು ಸೀರಿಯಲ್ ನಿನ್ನೆಗೆ ಮುಗಿಯಿತು. ಸೀರಿಯಲ್ ನಟರು, ಟೆಕ್ನೀಶಿಯನ್ ಎಲ್ಲರೂ ಒಂದೇ ಜೇನುಗೂಡಿನಂತೆ ಇದ್ದೆವು. ಪ್ರೇಕ್ಷಕರೇ ನಿಮ್ಮ ಪ್ರೀತಿಯಿಂದ ಇಷ್ಟೇಲ್ಲಾ ಜನಪ್ರಿಯತೆ ಪಡೆಯಲು ಸಾಧ್ಯವಾಯಿತು, ನಿಮಗೆ ಕೋಟಿ ನಮನಗಳು ಎಂದು ಸೋಶಿಯಲ್ ಮೀಡಿಯಾದಲ್ಲಿ ನಟಿ ಸಿತಾರಾ ಬರೆದುಕೊಂಡಿದ್ದಾರೆ.

ಇನ್ನು ಕಥೆಯ ಬಗ್ಗೆ ಹೇಳೋದಾದರೆ ಸೀರಿಯಲ್ ನಲ್ಲಿ ಪಾರು ಮತ್ತು ಜನನಿ ನಡುವೆ ಶತ್ರುತ್ವ ಮೂಡಿದೆ. ಜನನಿ ಮಗು ಹುಟ್ಟುವಾಗಲೇ ಸಾವನ್ನಪ್ಪಿದ್ದು ಪಾರು ತನ್ನ ಮಗುವನ್ನು ಆಕೆಗೆ ನೀಡಿದ್ದಾಳೆ, ಆದರೆ ಆ ವಿಷ್ಯ ಆಕೆಗೂ ಗೊತ್ತಿಲ್ಲ. ತನ್ನ ಮಗು ಪಾರು ಹತ್ತಿರ ಹೋಗದೇ ತನ್ನ ಬಳಿಯೇ ಇರುವಂತೆ ಮಾಡುತ್ತಿದ್ದಾಳೆ ಜನನಿ. ಇದರಿಂದ ಪಾರುಗೆ ನೋವಾಗಿದೆ. ಅಕ್ಕ ತಂಗಿಯರ ಒಳ ಜಗಳವನ್ನು ಸರಿ ಮಾಡಲು ನಿರ್ಧರಿಸಿರುವ ಅಖಿಲಾಂಡೇಶ್ವರಿ ಜನನಿಗೆ ಬುದ್ಧಿ ಕಲಿಸಲು ಪಾರು ಮಾಡುತ್ತಿರುವ ಮನೆ ಕೆಲಸವನ್ನು ಜನನಿಗೆ ಹಾಗೂ ಜನನಿ ಮಾಡುತ್ತಿರುವ ಆಫೀಸ್ ಜವಾಬ್ಧಾರಿಯನ್ನು ಪಾರು ನೋಡಿಕೊಳ್ಳುವಂತೆ ಮಾಡಿದ್ದಾರೆ.

ಜನನಿ ಗಂಡ ಪ್ರೀತು ಕೂಡ ಹಲವು ಸಮಯದಿಂದ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲೇ ಇಲ್ಲ.ಇದೀಗ ನೋಡಿದ್ರೆ ಸೀರಿಯಲ್ ಕೊನೆಯ ಎಪಿಸೋಡ್ ಶೂಟಿಂಗ್ ನಲ್ಲಿ ಪ್ರೀತು ಕಾಣಿಸಿಕೊಂಡಿದ್ದಾರೆ.

Sulekha