ಪಾಕ್ ಪರ ಘೋಷಣೆ ಆರೋಪ: ಕೈಕೈ ಮಿಲಾಯಿಸಲು ಮುಂದಾದ ಸದಸ್ಯರು – ಗಲಾಟೆ ನಿಲ್ಲಿಸಲು ಮಾರ್ಷಲ್‌ಗಳ ಎಂಟ್ರಿ!

ಪಾಕ್ ಪರ ಘೋಷಣೆ ಆರೋಪ: ಕೈಕೈ ಮಿಲಾಯಿಸಲು ಮುಂದಾದ ಸದಸ್ಯರು – ಗಲಾಟೆ ನಿಲ್ಲಿಸಲು ಮಾರ್ಷಲ್‌ಗಳ ಎಂಟ್ರಿ!

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಾಸೀರ್‌ ಹುಸೇನ್‌ ಅವರ ಬೆಂಬಲಿಗರಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ವಿಧಾನ ಪರಿಷತ್ ಮತ್ತು ವಿಧಾನ ಸಭೆ ಕಲಾಪದಲ್ಲಿ ಕೂಡ  ವಾಗ್ವಾದ ತಾರಕಕ್ಕೇರಿದೆ.

ವಿಧಾನ ಪರಿಷತ್‌ ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ಮಧ್ಯೆ ಈ ಪ್ರಕರಣದ ಸಂಬಂಧ ಚರ್ಚೆಯಾಗಿದೆ. ಈ ವೇಳೆ ಎರಡು ಪಕ್ಷದ ನಾಯಕರ ನಡುವೆ ಗದ್ದಲ ತಾರಕಕ್ಕೇರಿದೆ. ಬಿಜೆಪಿಯವರು ಸದನದ  ಬಾವಿಗಿಳಿದು ಏರುಧ್ವನಿಯಲ್ಲಿ ಕಾಂಗ್ರೆಸ್ ನಾಯಕರತ್ತ ಬಂದಾಗ ಮಾರ್ಷಲ್‌ಗಳು ಬಂದು ಗಲಾಟೆಯನ್ನು ತಡೆದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ ಕ್ರಮ ಕೈಗೊಳ್ಳುತ್ತೇವೆ – ಸಿಎಂ ಸಿದ್ಧರಾಮಯ್ಯ

ಎಲ್ಲಾ ಕಡೆ ಚರ್ಚೆ ಆಗ್ತಿದೆ. ವಿಧಾನಸೌಧದ ಪೋಲೀಸ್ ಠಾಣೆ ಯಲ್ಲಿ ಸುಮೊಟೋ ಕೇಸ್ ದಾಖಲಾಗಿದೆ. ಇಷ್ಟಾದರೂ ಸರ್ಕಾರ ಕ್ರಮ ಕ್ಕೆ ಮುಂದಾಗಿಲ್ಲ. ಈ ರೀತಿಯ ನಿಷ್ಕ್ರಿಯ ಸರ್ಕಾರ, ದೇಶದ್ರೋಹಿ ಸರ್ಕಾರ ನೋಡಿಲ್ಲ ಎಂದು ರವಿಕುಮಾರ್ ಹೇಳಿದರು.  ಈ ಮಾತಿಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪರಿಷತ್ ನಲ್ಲಿ ಗದ್ದಲ ಜೋರಾಗಿಯೇ ನಡೆಯಿತು. ಇದಕ್ಕೆ ಸಭಾಪತಿ ದೇಶದ್ರೋಹಿ ಸರ್ಕಾರ ಪದವನ್ನು ಕಡತದಿಂದ ತೆಗೆಸಿದರು. ಇವರು ದೇಶದ್ರೋಹಿ ಸರ್ಕಾರ ಅಂತಾ ಹೇಳಿದ್ದಾರೆ. ಇವರ ಪ್ರಧಾನಿ ಮೋದಿಗೆ ಧೈರ್ಯ ಇದ್ದರೆ, ಸರ್ಕಾರದ ಮೇಲೆ ಕ್ರಮ ತೆಗೆದುಕೊಳ್ಳಲು ಹೇಳಿ ಎಂದು ಹರಿಪ್ರಸಾದ್ ಹೇಳಿದರು.

ರವಿಕುಮಾರ್ ಮಾತನಾಡುವಾಗ ಅಬ್ದುಲ್ ಜಬ್ಬಾರ್ ಮದ್ಯಪ್ರವೇಶ ಮಾಡಿ” ರವಿಕುಮಾರ್ ಬಾಯಿ ಬಿಟ್ಟರೆ ಬೆಂಕಿ ಹಚ್ಚೋದೇ ಕೆಲಸ. ಅವನ ಬಾಯಿ ಬಂದ್ ಮಾಡಿಸಿ” ಎಂದು ಹೇಳಿದ್ದಾರೆ. ಇವರ ಮಾತಿಗೆ ರೊಚ್ಚಿಗೆದ್ದ ರವಿಕುಮಾರ್ ಏಯ್ ಏಕವಚನ ದಲ್ಲಿ ಮಾತಾಡಿದ್ರೆ ಸರಿ ಇರಲ್ಲ ಎಂದು ತಮ್ಮ ಸ್ಥಳದಿಂದ ಎದ್ದು ಹೊಡೆಯುವಂತೆ ಮುಂದೆ ಬಂದರು. ಇವರಿಗೆ ಬಿಜೆಪಿಯ ಇತ ನಾಯಕರು ಸಾಥ್ ನೀಡಿದರು. ಕೈಕೈ ಮಿಲಾಯಿಸುವಂತ ಪರಿಸ್ಥಿತಿ ನಿರ್ಮಾಣವಾಯ್ತು. ಪರಿಸ್ಥಿತಿ ಕೈಮೀರಿ ಹೋಗುವುದನ್ನು ತಪ್ಪಿಸಲು ಸಭಾಪತಿ ಕೂಡಲೇ ಮಾರ್ಷಲ್ ಗಳನ್ನು ಒಳಗೆ ಕರೆಯಿಸಿ ಪರಿಷತ್ ಕಲಾಪ ಹತ್ತು ನಿಮಿಷಗಳ ಕಾಲ ಮುಂದೂಡಿದ್ದಾರೆ.

ಬಳಿಕ ಮತ್ತೆ ಕಲಾಪ ಆರಂಭವಾಯ್ತು. ಸದನದಲ್ಲಿ ಬೇಕಾಬಿಟ್ಟಿ ಮಾತನಾಡಿದ್ರೆ ಬಹಳ ಬೇಜಾರ್ ಆಗುತ್ತೆ. ಇದೇ ರೀತಿ ನಡೆದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತೆ. ಸಭಾಪತಿ ಹೇಳಿದ್ರೂ ಕೇಳೋದಿಲ್ಲ ಎಂದರೆ, ಇದನ್ನ ನಾನು ಸಹಿಸೋದಿಲ್ಲ ಎಂದು ಸಭಾಪತಿ ಹೇಳಿದ್ರು.  ದೇಶದ ಗೌರವದ ಪ್ರಶ್ನೆ ಬಂದಾಗಕ್ಷಮೆ ಕೇಳಲು ನನಗೆ ತೊಂದರೆ ಇಲ್ಲ. ಆದ್ರೆ ನಮ್ಮ‌ ಶತ್ರು ದೇಶ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದರೆ ಹೇಗೆ ಸಹಿಸಿಕೊಳ್ಳಲಿ. ಸದಸ್ಯರು ಏಕವಚನದಲ್ಲಿ ನನ್ನ ಬಗ್ಗೆ ಮಾತನಾಡಿದ್ದಾರೆ ಎಂದು ರವಿಕುಮಾರ್ ಹೇಳಿದರು.  ರವಿ ಕುಮಾರ್ ಬಗ್ಗೆ ಹೇಳಿದ ಮಾತಿಗೆ ನಾನು ವಾಪಸ್ ತಗೆದುಕೊಳ್ಳುತ್ತೇನೆ ಎಂದು ಜಬ್ಬರ್‌ ತಮ್ಮ ಮಾತನ್ನು ಹಿಂತೆಗೆದುಕೊಂಡರು. ದೇಶ ದ್ರೋಹಿ ಸರ್ಕಾರ ಅಂದಿದ್ದನ್ನ ವಾಪಸ್ ತಗೆದುಕೊಳ್ಳಿ ಎಂದು ಸಭಾಪತಿ ರವಿಕುಮಾರ್ ಅವರಿಗೆ ಮನವಿ ಮಾಡಿದ್ರು. ನನ್ನ ಹೇಳಿಕೆ  ಹೇಗೆ ವಾಸಪ್ ತೆಗದುಕೊಳ್ಳಲಿ ಎಂದ ರವಿಕುಮಾರ್, ಇದನ್ನ ನಾನು ದೇಶಭಕ್ತ ಸರ್ಕಾರ ಎಂದು ಕರೆಯಬೇಕಾ ಎಂದು ವ್ಯಂಗ್ಯವಾಡಿದ್ದಾರೆ.

Shwetha M