ಪಾಕಿಸ್ತಾನ ಎರಡು ಪೀಸ್- ಬೀದಿಗಳಲ್ಲಿ ಉ*ಗ್ರರ ಹೆ*ಣ
ಶತ್ರುದೇಶಕ್ಕೆ ಇದೆಂಥಾ ಗತಿ!!

ಪಾಕಿಸ್ತಾನ ಎರಡು ಪೀಸ್- ಬೀದಿಗಳಲ್ಲಿ ಉ*ಗ್ರರ ಹೆ*ಣಶತ್ರುದೇಶಕ್ಕೆ ಇದೆಂಥಾ ಗತಿ!!

ಪಾಕಿಸ್ತಾನದಲ್ಲಿ ಭಾರತದ  ಶತ್ರುಗಳ ನಿರ್ಮೂಲನೆ ಮುಂದುವರೆದಿದೆ. ಪಾಕಿಸ್ತಾನದಲ್ಲಿ ಅಪರಿಚಿತ ಬೈಕ್ ಸವಾರ ಉಂಟುಮಾಡಿದ ಹಾನಿ ಇನ್ನೂ ನಿಂತಿಲ್ಲ. ಬೈಕ್‌ನಲ್ಲಿ ಬಂದ ಬಂದೂಕುಧಾರಿಯೊಬ್ಬ ಭಯೋತ್ಪಾದಕನನ್ನು ಕೊಂದಿದ್ದಾನೆ. ಆ ಭಯೋತ್ಪಾದಕನ ಹೆಸರು ಮೌಲಾನಾ ಕಾಶಿಫ್ ಅಲಿ. ಈತ ಕುಖ್ಯಾತ ಭಯೋತ್ಪಾದಕ ಸಂಘಟನೆ ಕಮಾಂಡರ್ ಆಗಿದ್ದ. ಬೈಕ್‌ನಲ್ಲಿ ಬಂದ ಬಂದೂಕುಧಾರಿಗಳು ಗ್ಯಾಂಗ್ ನಾಯಕ ಮೌಲಾನಾ ಕಾಶಿಫ್ ಅಲಿಯನ್ನು ಗುಂಡಿಕ್ಕಿ ಕೊಂದಿದ್ದಾರೆ .. .

ಮೌಲಾನಾ ಯುವಕರನ್ನು ಭಯೋತ್ಪಾದನೆಯತ್ತ ಸೆಳೆಯುತ್ತಿದ್ದ ಮತ್ತು ಅವರಿಗೆ ತರಬೇತಿ ನೀಡುತ್ತಿದ್ದ ಎಂದು ಹೇಳಲಾಗಿದೆ. ಕಾಶಿಫ್ ಅಲಿ ಅನೇಕ ಮಸೀದಿಗಳು ಮತ್ತು ಮದರಸಾಗಳ ಉಸ್ತುವಾರಿ ವಹಿಸಿದ್ದ ಎನ್ನಲಾಗಿದೆ.

 ಜಿಹಾದಿ ಉಪನ್ಯಾಸ ನೀಡುತ್ತಿದ್ದ ಕಾಶಿಫ್

ಈತ ಭಯೋತ್ಪಾದನೆಯನ್ನು ಕಲಿಸುತ್ತಿದ್ದ.. ಅಲ್ಲದೇ  ಪಾಕ್‌ ಯುವಕರನ್ನು ತನ್ನ ಸ್ವಂತ ಉದ್ದೇಶಕ್ಕಾಗಿ ದಾರಿ ತಪ್ಪಿಸುತ್ತಿದ್ದ.. ಅವರನ್ನ ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸಿಕೊಳ್ಳುತ್ತಿದ್ದ. ಇದಲ್ಲದೆ, ಅವರು ಭಯೋತ್ಪಾದನಾ ತರಬೇತಿ ಕೇಂದ್ರಗಳಲ್ಲಿ ಜಿಹಾದಿ ಉಪನ್ಯಾಸಗಳನ್ನು ನೀಡುತ್ತಿದ್ದ. ಕಾಶಿಫ್ ಅಲಿ ಭಯೋತ್ಪಾದಕ ಸಂಘಟನೆ ಲಷ್ಕರ್‌ನ ಮುಂಭಾಗದ ರಾಜಕೀಯ ಸಂಘಟನೆಯಾದ ಪಿಎಂಎಂಎಲ್‌ನೊಂದಿಗೆ ಸಹ ಸಂಬಂಧ ಹೊಂದಿದ್ದ ಎಂದು ವರದಿ ತಿಳಿಸಿದೆ.

 ಅವ್ಯವಸ್ಥೆ ಆಗರವಾದ ಪಾಕಿಸ್ತಾನ  

ಭಯೋತ್ಪಾದಕ ಕಾಶಿಫ್ ಅಲಿಯ ಹತ್ಯೆಯ ನಂತರ, ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಅನೇಕ ಸಂಘಟನೆಗಳು ಪಾಕಿಸ್ತಾನ ಸರ್ಕಾರವನ್ನು ತೀವ್ರವಾಗಿ ಟೀಕಿಸಿದವು. ಇದರೊಂದಿಗೆ, ಕಾಶಿಫ್ ಅಲಿಯ ಹಂತಕರನ್ನು ತಕ್ಷಣ ಬಂಧಿಸಬೇಕೆಂದು ಅವರು ಒತ್ತಾಯಿಸಿದ್ವು. ಇಷ್ಟೇ ಅಲ್ಲ, ಕಾಶಿಫ್ ಅಲಿಯ ಹಂತಕರನ್ನು ಆದಷ್ಟು ಬೇಗ ಬಂಧಿಸುವಂತೆ ಸಾಮಾಜಿಕ ಮಾಧ್ಯಮದ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದರು. ಅಂತಹ ಒಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಕಾಶಿಫ್ ಅಲಿ ಮಾಡಿದ ಏಕೈಕ ತಪ್ಪು ಅವರು ಪಾಕಿಸ್ತಾನವನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ.

ಮೂವರು ಭಯೋತ್ಪಾದಕರು ಯಾವುದಾದ ನಿಗೂಢವಾಗಿ ಹೊಗೆ ಹಾಕಿಸಿಕೊಳ್ಳುತ್ತಿದ್ದಾರೆ. ಸಂದರ್ಭಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಈ ಭಯೋತ್ಪಾದಕರಲ್ಲಿ ಇಬ್ಬರು ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಕಾಶಿಫ್ ಅಲಿ ಒಂದು ತಿಂಗಳಲ್ಲಿ ನಾಲ್ಕನೇ ಬಲಿಪಶು. ಕಾಶಿಫ್ ಅಲಿ ಹತ್ಯೆಯ ನಂತರ, ಭಯೋತ್ಪಾದಕ ಸಂಘಟನೆಯ ಉನ್ನತ ನಾಯಕರಲ್ಲಿ ಮತ್ತೊಮ್ಮೆ ಭೀತಿ ಹರಡಿದೆ. ಈ ಬಾರಿ ಅವರ ಕೋಪವೆಲ್ಲ ಪಾಕಿಸ್ತಾನ ಸರ್ಕಾರ, ಅದರ ಗುಪ್ತಚರ ಸಂಸ್ಥೆ ಮತ್ತು ಉನ್ನತ ಸೇನಾ ಅಧಿಕಾರಿಗಳ ಮೇಲಿದೆ. ಇದೇ ಕಾರಣಕ್ಕೆ ಈ ಬಾರಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕಾಶಿಫ್ ಅಲಿ ಬಗ್ಗೆ ಬಹಿರಂಗವಾಗಿ ಕಾಮೆಂಟ್ ಮಾಡಿದ್ದಾರೆ. ಹಾಗೇ  ಪಾಕ್  ಯಾರಿಗೂ ಸೇಫ್  ಅಲ್ಲ ಅನ್ನೋದು ಈ ಮೂಲಕ ಗೊತ್ತಾಗುತ್ತೆ.  ಪಾಕ್‌ನಲ್ಲಿ ಜನರಿಗೆ ಸರಿಯಾದ ಭದ್ರತೆಯೇ ಸಿಗುತ್ತಿಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಪಾಕಿಸ್ತಾನ ಎರಡು ತುಂಡಾಗಿ ಹೋಗುತ್ತೆ

ಈ  ನಡುವೆ ಪಾಕಿಸ್ತಾನದ ಸಂಸದರೊಬ್ಬರು ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಅದುವೇ ಸರ್ಕಾರ ಎಚ್ಚೇತ್ತು ಕೊಳ್ಳದಿದ್ದರೇ, ಪಾಕಿಸ್ತಾನ ಎರಡು ತುಂಡಾಗುತ್ತೆ ಎನ್ನುವುದು. ಪಾಕಿಸ್ತಾನದ ಇಸ್ಲಾಮಿಕ್ ಧಾರ್ಮಿಕ ಮುಖಂಡ ಮತ್ತು ಸಂಸದ ಮೌಲಾನಾ ಫಜ್ಲುರ್ ರೆಹಮಾನ್ ಅವರು 1971 ರಲ್ಲಿ ಪೂರ್ವ ಪಾಕಿಸ್ತಾನ ವಿಭಜನೆಯಾಗಿ ಬಾಂಗ್ಲಾದೇಶವಾಗಿ ರೂಪುಗೊಂಡದ್ದನ್ನು ಮತ್ತೊಮ್ಮೆ ಪಾಕಿಸ್ತಾನಕ್ಕೆ ನೆನಪಿಸಿದ್ದಾರೆ. ಸಂಸತ್ತಿನಲ್ಲಿ ಮಾತನಾಡಿರುವ ಅವರು, ಪಾಕಿಸ್ತಾನದಿಂದ ಬಲೂಚಿಸ್ತಾನದ ಐದರಿಂದ ಏಳು ಜಿಲ್ಲೆಗಳು ಬೇರ್ಪಟ್ಟು ಸ್ವಾತಂತ್ರ್ಯ ಘೋಷಿಸಿಕೊಳ್ಳಬಹುದು ಎಂದು ಎಚ್ಚರಿಸಿದ್ದಾರೆ. ಭಾರತ-ಪಾಕಿಸ್ತಾನ ಯುದ್ಧವನ್ನು ಉಲ್ಲೇಖಿಸಿದ ಅವರು, ಇದೇ ರೀತಿಯ ಪರಿಸ್ಥಿತಿ ಮತ್ತೆ ಉದ್ಭವಿಸಬಹುದು ಎಂದು ಎಚ್ಚರಿಸಿದರು. ಬಲೂಚಿಸ್ತಾನ್ ಜಿಲ್ಲೆಗಳು ಸ್ವಾತಂತ್ರ್ಯ ಘೋಷಿಸಿದರೆ ವಿಶ್ವಸಂಸ್ಥೆಯು ಅವರ ಸ್ವಾತಂತ್ರ್ಯವನ್ನು ಗುರುತಿಸಬಹುದು. ಇದಕ್ಕೆ ಕೋಣೆವೊಂದರಲ್ಲಿ ಕೂತು ಬೇಕಾ ಬಿಟ್ಟಿ ನಿರ್ಧಾರ ತಗೆದು ಕೊಳ್ಳುವುದೇ ಕಾರಣವೆಂದು ಹೇಳಿದ್ದಾರೆ.

Kishor KV

Leave a Reply

Your email address will not be published. Required fields are marked *