ಬಯಲಾಯ್ತು ಪಾಕಿಸ್ತಾನದ ಮತ್ತೊಂದು ಸಂಚು – ಭಯೋತ್ಪಾದಕರನ್ನು ಭಾರತದ ಗಡಿಯಲ್ಲಿ ಛೂ ಬಿಟ್ಟ ಪಾಕ್..!

ಬಯಲಾಯ್ತು ಪಾಕಿಸ್ತಾನದ ಮತ್ತೊಂದು ಸಂಚು – ಭಯೋತ್ಪಾದಕರನ್ನು ಭಾರತದ ಗಡಿಯಲ್ಲಿ ಛೂ ಬಿಟ್ಟ ಪಾಕ್..!

ತನ್ನ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನ ಹತ್ತಿಕ್ಕೋದು ಬಿಟ್ಟು ಪಾಕಿಸ್ತಾನ ಸೇನೆ ಭಾರತ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯ ಉಗ್ರರನ್ನ ನಿಯೋಜನೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಎಲ್​ಒಸಿಯುದ್ದಕ್ಕೂ ಪಾಕ್​ ಸೇನೆ ಭಾರಿ ಸಂಖ್ಯೆಯಲ್ಲಿ ಉಗ್ರರನ್ನ ಜಮಾವಣೆ ಮಾಡಿದೆ.

ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅರೆಸ್ಟ್ – ಪಾಕಿಸ್ತಾನದಲ್ಲಿ ಭುಗಿಲೆದ್ದ ಭಯಾನಕ ಹಿಂಸಾಚಾರ

ಭಯೋತ್ಪಾದಕರನ್ನ ಭಾರತದೊಳಕ್ಕೆ ಛೂ ಬಿಡಲು ಸ್ಕೆಚ್ ಹಾಕಿದೆ ಅಂತಾ ಗುಪ್ತಚರ ಇಲಾಖೆ ಎಚ್ಚರಿಸಿದೆ. ಭಾರತ-ಪಾಕ್ ಗಡಿಯಲ್ಲಿರುವ ನೀಲಮ್ ಕಣಿವೆ, ಲೀಪಾ ಕಣಿವೆ ಮತ್ತು ಝೇಲಮ್ ಕಣಿವೆಯಲ್ಲಿ ಉಗ್ರರ ಲಾಂಚ್​​ಪ್ಯಾಡ್​​ಗಳಿದ್ದು, ಪ್ರತಿ ಗ್ರೂಪ್​​ನಲ್ಲೂ 10 ರಿಂದ 20 ಮಂದಿ ಭಯೋತ್ಪಾದಕರಿದ್ದಾರೆ ಅಂತಾ ಭಾರತೀಯ ಇಂಟೆಲಿಜೆನ್ಸ್ ಏಜೆನ್ಸಿ ಮಾಹಿತಿ ನೀಡಿದೆ. ಮೇ 23 ಮತ್ತು 24ಕ್ಕೆ ಕಾಶ್ಮೀರದಲ್ಲಿ ಜಿ-20 ವಿಶೇಷ ಸಭೆ ನಡೆಯಲಿದ್ದು, ಈ ವೇಳೆ ದಾಳಿ ನಡೆಸೋಕೆ ಸಂಚು ನಡೀತಿದೆ.

suddiyaana