ರಾಜ್ಯದಲ್ಲಿ ಕೊರೊನಾ ರೂಪಾಂತರಿ ತಳಿ ಜೆಎನ್‌.1 ಆರ್ಭಟ – 199 ಜನರಿಗೆ ಸೋಂಕು ದೃಢ

ರಾಜ್ಯದಲ್ಲಿ ಕೊರೊನಾ ರೂಪಾಂತರಿ ತಳಿ ಜೆಎನ್‌.1 ಆರ್ಭಟ – 199 ಜನರಿಗೆ ಸೋಂಕು ದೃಢ

ಕಳೆದು ಮೂರು ವರ್ಷಗಳಿಂದ ಕೊರೊನಾ ವಿಶ್ವವನ್ನ ಬಿಟ್ಟು ಅಲುಗಾಡುತ್ತಿಲ್ಲ. ಕೊವಿಡ್ ವೈರಸ್ ಇಂದು‌ ಕಡಿಮೆ ಆಗುತ್ತೆ, ನಾಳೆ ಕಡಿಮೆ ಆಗುತ್ತೆ ಅಂತಾ ಜನರು ಕಾದು ಕುಳಿತಿದ್ದಾರೆ. ಆದ್ರೆ ಒಂದು ಮುಗಿದರೆ ಮತ್ತೊಂದು ಅನ್ನೋ ಹಾಗೇ ಪ್ರತಿ 6 ತಿಂಗಳಿಗೊಮ್ಮೆ ಹೊಸ ಹೊಸ ರೂಪದಲ್ಲಿ ಕೊರೊನಾ ಮತ್ತೆ ಬಂದು ಜನರ ಜೀವ ಹಿಂಡುತ್ತಿದೆ. ಈ ವರ್ಷ ಆರಂಭದಲ್ಲಿಯೇ ಕೊರೊನಾ JN.1 ಹೊಸ ರೂಪದಲ್ಲಿ ತಲೆ ಎತ್ತಿದೆ.  ದಿನದಿಂದ ದಿನಕ್ಕೆ ರೂಪಾಂತರಿ ತಳಿ ಜೆಎನ್‌.1 ವೈರಸ್‌ ಆರ್ಭಟ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಈವರೆಗೆ 199 ಜನರಿಗೆ ಕೊರೊನಾ ರೂಪಾಂತರಿ ತಳಿ ಜೆಎನ್‌.1 ದೃಢಪಟ್ಟಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮಂಡ್ಯದಿಂದ ಸುಮಲತಾಗೆ ಗೇಟ್‌ಪಾಸ್..! – ಹೆಚ್.ಡಿ ಕುಮಾರಸ್ವಾಮಿ ತಂತ್ರ ಫಲಿಸುತ್ತಾ?

ರಾಜ್ಯದಲ್ಲಿ ಕೊರೊನಾ ರೂಪಾಂತರ ತಳಿ ಜೆಎನ್.1 (JN.1) ವೈರಸ್​​ ವೇಗವಾಗಿ ಹಬ್ಬುತ್ತಿದೆ. ಇದುವರೆಗೆ ಜಿನೋಮ್‌ ಸೀಕ್ವೆನ್ಸ್‌ ಟೆಸ್ಟ್‌ಗೆ 601 ಸ್ಯಾಂಪಲ್ಸ್‌ಗಳ‌ ರವಾನಿಸಲಾಗಿತ್ತು. ಡಿಸೆಂಬರ್ 25ರಂದು ಹೊರ ಬಿದ್ದ ಮೊದಲ ರಿಪೋರ್ಟ್ ನಲ್ಲಿ 60 ಸ್ಯಾಂಪಲ್ ಗಳ ಪೈಕಿ 34 ಮಂದಿಗೆ ಜೆಎನ್ 1 ತಗುಲಿರೋದು ದೃಢಪಟ್ಟಿತ್ತು. ಸೋಮವಾರ ಮತ್ತೆ 202 ಮಾದರಿಗಳ ವರದಿಯಲ್ಲಿ 165 ಮಂದಿಯಲ್ಲಿ ಜೆಎನ್1 ದೃಢಪಟ್ಟಿದೆ. ಇಲ್ಲಿಯವರೆಗೆ 199 ಜನರಿಗೆ ಜೆ.ಎನ್ 1 ವೈರಸ್ ಸೋಂಕು ತಗುಲಿದೆ. 28 ಜನರಿಗೆ ಎಕ್ಸ್‌ಬಿಬಿ ಉಪ ತಳಿ ಸೋಂಕು ಇದ್ದು, 35 ಮಂದಿಯಲ್ಲಿ ಇತರೆ ರೂಪಾಂತರಿ ಸೋಂಕು ಪತ್ತೆಯಾಗಿದೆ.

ಕೋವಿಡ್‌ನ ರೂಪಾಂತರಿ ಪತ್ತೆಗೆ ಗಂಟಲ ದ್ರವದ ಮಾದರಿಗಳನ್ನಷ್ಟೇ ಜಿನೋಮ್‌ ಸೀಕ್ವೆನ್ಸಿಂಗ್‌ ಡಿಎನ್‌ಎ ಜೋಡಣೆಯ ಕ್ರಮದ ಮೂಲಕ ಪತ್ತೆ ಪರೀಕ್ಷೆ ನಡೆಸಲಾಗುತ್ತಿತ್ತು. ಆದ್ರೆ ಈಗ ಒಳಚರಂಡಿಯ ಕೊಳಚೆ ನೀರನ್ನೂ ಪರೀಕ್ಷೆಗೊಳಪಡಿಸಿ, ರೂಪಾಂತರಿ ತಳಿಗಳ ಪತ್ತೆ ಕಾರ್ಯವನ್ನ ಸರ್ಕಾರ ಕೈಗೊಂಡಿದೆ.. ರಾಜ್ಯದಲ್ಲಿ ಜೆ ಎನ್ 1 ರೂಪಾಂತರಿ ಹಿನ್ನಲೆ ನಗರದಲ್ಲಿ ಈ ತಳಿ ಹರಡುವುದರ ಪ್ರಮಾಣ ಹಾಗೂ ತಡೆಯುವ ಸಲುವಾಗಿ ಸರ್ಕಾರ ಹಾಗೂ ಬಿಬಿಎಂಪಿ ನಾನಾ ತಂತ್ರಗಳನ್ನು ಮೊರೆ ಹೋಗಿದೆ. ಈ ಭಾಗವಾಗಿ ಹಲವು ಮನೆಗಳಿಂದ ಒಳಚರಂಡಿ ಕೊಳವೆ ಮಾರ್ಗದ ಮೂಲಕ ಹರಿದು ಬಂದು ಒಂದೆಡೆ ಸೇರುವ ಕೊಳಚೆ ನೀರಿನ ಮಾದರಿಯನ್ನು ಸಂಗ್ರಹ ಮಾಡಿ, ಪರೀಕ್ಷೆಗೆ ರವಾನಿಸಲಾಗುತ್ತಿದೆ. ಈ ವರದಿ ಬಳಿಕ ಬೆಂಗಳೂರಿನಲ್ಲಿ ಹೊಸ ತಳಿ ಹರಡಿರುವ ಪ್ರಮಾಣ ಸ್ಪಷ್ಟವಾಗಲಿದೆ.

Shwetha M