ಬರದಲ್ಲಿ ಬೆಳೆ ಉಳಿಸಲು ರೈತರ ಪರದಾಟ –  ಈರುಳ್ಳಿ ಬೆಲೆಗೆ ಗ್ರಾಹಕರು ಕಣ್ಣೀರು!

ಬರದಲ್ಲಿ ಬೆಳೆ ಉಳಿಸಲು ರೈತರ ಪರದಾಟ –  ಈರುಳ್ಳಿ ಬೆಲೆಗೆ ಗ್ರಾಹಕರು ಕಣ್ಣೀರು!

ಬೆಂಗಳೂರು: ರಾಜ್ಯದಲ್ಲಿ ಅನಿಯಮಿತ ಮಳೆ ಮತ್ತು ಅನಾವೃಷ್ಟಿಯಿಂದಾಗಿ ಈ ವರ್ಷದ ಈರುಳ್ಳಿ ಉತ್ಪಾದನೆ ಮೇಲೆ ಹೊಡೆತ ಬಿದ್ದಿದೆ. ಇನ್ನೊಂದೆಡೆ  ಮಹಾರಾಷ್ಟ್ರದ ನಾಸಿಕ, ಸೊಲ್ಲಾಪುರದಿಂದ ರಾಜ್ಯಕ್ಕೆ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುವಂತಿದೆ.

ಇದನ್ನೂ ಓದಿ: ನವದಂಪತಿಗಳಿಗೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ಭಾಗ್ಯ – ಆದರೆ ಷರತ್ತು ಅನ್ವಯ!

ಕಳೆದ ಎರಡು ವರ್ಷಗಳಿಂದ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗದ ಕಾರಣ ಈ ವರ್ಷ ಅನೇಕ ಸಾಮಾನ್ಯ ಈರುಳ್ಳಿ ಬೆಳೆಗಾರರು ಇತರೆ ಬೆಳೆ ಬೆಳೆಯಲು ಪ್ರಾರಂಭಿಸಿದ್ದರು. ಇದಲ್ಲದೆ ಮಳೆ ಕೊರತೆಯಿಂದಾಗಿ ಬೆಳೆಯೂ ಸರಿಯಾಗಿ ರೈತರ ಕೈ ಸೇರಿಲ್ಲ.ಇನ್ನೊಂದೆಡೆ ಮಹಾರಾಷ್ಟ್ರದ ನಾಸಿಕ, ಸೊಲ್ಲಾಪುರದಿಂದ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಬೇಡಿಕೆ ಹೆಚ್ಚಳದಿಂದ ಈರುಳ್ಳಿ ಬೆಲೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ.

ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆಯಾದರೆ ಕ್ವಿಂಟಾಲ್‌ಗೆ 8000 ರಿಂದ 9000 ರೂ.ಗೆ ಏರುವ ಸಾಧ್ಯತೆಯಿದೆ. ಇದರಿಂದಾಗಿ ಚಿಲ್ಲರೆ ವ್ಯಾಪಾರಿಗಳು ಕೆಜಿಗೆ 100 ರಿಂದ 120 ರೂ. ವರೆಗೆ ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಸಗಟು ವ್ಯಾಪಾರಿಗಳು ಅಭಿಪ್ರಾಯಪಡುತ್ತಿದ್ದಾರೆ. ಹೀಗಾಗಿ  ಇದೀಗ ದಿಢೀರ್‌ ಬೆಲೆ ಏರಿಕೆಯಿಂದ ಎಲ್ಲರೂ ಚಡಪಡಿಸುವಂತಾಗಿದೆ.

Shwetha M