ಶನಿ ದೋಷಗಳಿಂದ ಮುಕ್ತಿ ಪಡೆಯಬೇಕಾ? – ಶನಿವಾರ ಹನುಮಂತನ ಆರಾಧನೆಯನ್ನ ಹೀಗೆ ಮಾಡಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳವಾರ ಮತ್ತು ಶನಿವಾರವನ್ನು ಆಂಜನೇಯ ಸ್ವಾಮಿಯ ಆರಾಧನೆಗೆ ಅತ್ಯಂತ ಪ್ರಶಸ್ತವಾದ ದಿನಗಳೆಂದು ಪರಿಗಣಿಸಲಾಗಿದೆ. ಈ ದಿನಗಳಲ್ಲಿ ಭಕ್ತಿಯಿಂದ ಹನುಮಂತನನ್ನು ಪೂಜಿಸುವುದರಿಂದ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಬೇಕಾದ ಧೈರ್ಯ, ಶಕ್ತಿ ಮತ್ತು ಆತ್ಮಬಲ ಲಭಿಸುತ್ತದೆ. ವಿಶೇಷವಾಗಿ ನವಗ್ರಹಗಳಲ್ಲಿನ ಮಂಗಳ ಮತ್ತು ಶನಿ ದೋಷಗಳಿಂದ ಮುಕ್ತಿ ಪಡೆಯಲು ಹನುಮಂತನ ಆರಾಧನೆಯು ರಾಮಬಾಣದಂತೆ ಕೆಲಸ ಮಾಡುತ್ತದೆ.
ಜೀವನದಲ್ಲಿ ಅನಿರೀಕ್ಷಿತ ಅಡೆತಡೆಗಳು ಅಥವಾ ಶತ್ರುಗಳ ಕಾಟವಿದ್ದರೆ, ‘ಓಂ ನಮೋ ಹನುಮತೇ ರುದ್ರಾವತಾರಾಯ…’ ಎಂಬ ಮಂತ್ರವನ್ನು ಪಠಿಸುವುದು ಶುಭದಾಯಕ. ಇದು ವ್ಯಕ್ತಿಯ ಸುತ್ತ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ ಮತ್ತು ದುಷ್ಟ ಶಕ್ತಿಗಳಿಂದ ದೂರವಿರಿಸುತ್ತದೆ.
ಆರೋಗ್ಯ ಮತ್ತು ಮಾನಸಿಕ ಶಾಂತಿಗಾಗಿ
ದೈಹಿಕವಾಗಿ ಅಸ್ವಸ್ಥರಾದವರು ‘ಓಂ ಹನುಮತೇ ನಮಃ’ ಎಂಬ ಸರಳ ಮಂತ್ರವನ್ನು ದಿನವೂ ಜಪಿಸುವುದರಿಂದ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಹಾಗೆಯೇ ‘ಮಂಗಳ ಭವನ ಅಮಂಗಳಹಾರೀ…’ ಚೌಪಾಯಿಯನ್ನು ಪಠಿಸುವುದರಿಂದ ಮನಸ್ಸಿನ ಅಶಾಂತಿ ದೂರವಾಗಿ ಶಾಂತಿ ನೆಲೆಸುತ್ತದೆ.

ನೋಡಿರಿ

