ಶಿವನನ್ನು ಯಾವ ಹೂವುಗಳಿಂದ ಪೂಜಿಸಿದರೆ ಏನು ಪ್ರಯೋಜನ ಗೊತ್ತಾ?

ಶಿವನನ್ನು ಯಾವ ಹೂವುಗಳಿಂದ ಪೂಜಿಸಿದರೆ ಏನು ಪ್ರಯೋಜನ  ಗೊತ್ತಾ?

ಶಿವನನ್ನು ದೇವಾದಿ ದೇವ ಮಹಾದೇವನೆಂದು ಕರೆಯಲಾಗುತ್ತದೆ. ಶಿವನನ್ನು ಪೂಜಿಸುವುದು, ಶಿವನ ಧ್ಯಾನವನ್ನು ಮಾಡುವುದು ಯಾವಾಗಲೂ ಶುಭ ಮತ್ತು ಮಂಗಳಕರ ಫಲವನ್ನು ನೀಡುತ್ತದೆ. ಶಿವನನ್ನು ಸರಳವಾಗಿ ಪೂಜಿಸಿದರೂ ಅವನು ಶೀಘ್ರದಲ್ಲೇ ಸಂತುಷ್ಟನಾಗುತ್ತಾನೆ. ನೀವು ಶಿವನನ್ನು ಶುದ್ಧ ಮನಸ್ಸಿನಿಂದ ಪೂಜಿಸಿದರೆ ನಿಮ್ಮ ಇಷ್ಟಾರ್ಥಗಳನ್ನೆಲ್ಲಾ ಶಿವನು ಈಡೇರಿಸುತ್ತಾನೆ. ಶಿವನನ್ನು ಆತನಿಗೆ ಪ್ರಿಯವಾದ ಹೂವುಗಳಿಂದ ಪೂಜಿಸುವುದು ತುಂಬಾನೇ ಮುಖ್ಯವೆಂದು ರುದ್ರ ಸಂಹಿತೆಯಲ್ಲಿ ವಿವರಿಸಲಾಗಿದೆ. ಶಿವನನ್ನು ಯಾವ ಹೂವುಗಳಿಂದ ಪೂಜಿಸಿದರೆ ಏನು ಪ್ರಯೋಜನ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ..

ಶಿವನಿಗೆ ಚಂಪಾ ಹೂವುಗಳೆಂದರೆ ತುಂಬಾನೇ ಪ್ರಿಯ. ಶಿವನಿಗೆ ಚಂಪಾ ಹೂವುಗಳನ್ನು ಅರ್ಪಿಸಿ ಆತನನ್ನು ಪೂಜಿಸುವುದರಿಂದ ಅವನು ಬಹುಬೇಗನೇ ನಿಮ್ಮ ಇಷ್ಟಾರ್ಥಗಳನ್ನೆಲ್ಲಾ ಪೂರೈಸುತ್ತಾನೆ. ಶಿವ ಪುರಾಣದಲ್ಲಿ ಉಲ್ಲೇಖಿಸಿರುವ ಪ್ರಕಾರ, ಯಾವ ವ್ಯಕ್ತಿ ಶಿವನನ್ನು ಒಂದು ಲಕ್ಷ ಚಂಪಾ ಹೂವುಗಳಿಂದ ಪೂಜಿಸುತ್ತಾನೋ ಅವನು ತನ್ನ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ವರವನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಲಾಗಿದೆ.

ಶಿವನಿಗೆ ಪ್ರಿಯವಾದ ಇನ್ನೊಂದು ಹೂವು ಮತ್ತು ಎಲೆಯೆಂದರೆ ಅದುವೇ ಶಮಿ. ಶಿವನಿಗೆ ಮಾತ್ರವಲ್ಲ, ಶನಿಯನ್ನು ಪೂಜಿಸುವಾಗಲೂ ಶಮಿಯನ್ನು ಅರ್ಪಿಸಲಾಗುತ್ತದೆ. ಶಿವಪೂಜೆಯಲ್ಲಿ ಶಮಿ ಎಲೆಯನ್ನು ಬಳಸಿ ಶಿವನನ್ನು ಪೂಜಿಸಿದರೆ ಖಂಡಿತ ನೀವು ಶಿವನ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ಯಾವ ವ್ಯಕ್ತಿ ಒಂದು ಲಕ್ಷ್ಮಿ ಶಮಿಯಿಂದ ಶಿವನ ಆರಾಧನೆಯನ್ನು ಮಾಡುತ್ತಾನೆ. ಶಿವನಿಗೆ ಈ ಹೂವನ್ನು ಅರ್ಪಿಸುತ್ತಾನೋ ಅವನು ಮರಣಾ ನಂತರ ನೇರವಾಗಿ ಮೋಕ್ಷವನ್ನು ಪಡೆದುಕೊಳ್ಳುತ್ತಾನೆ ಎನ್ನುವ ನಂಬಿಕೆಯಿದೆ.

ಶಿವನನ್ನು ಪೂಜಿಸಲು ಯೋಗ್ಯವಾದ ಇನ್ನೊಂದು ಹೂವೆಂದರೆ ಅದುವೇ ಧಾತುರಾ. ಧಾತುರಾವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ. ಶಿವನಿಗೆ ಧಾತುರಾವನ್ನು ದಂಪತಿಗಳು ಅರ್ಪಿಸುವುದು ತುಂಬಾನೇ ಪ್ರಯೋಜನಕಾರಿ. ಸಂತಾನ ಭಾಗ್ಯವಿಲ್ಲದ ದಂಪತಿಗಳು ಶಿವನಿಗೆ ಒಂದು ಲಕ್ಷ ಧಾತುರಾವನ್ನು ಅರ್ಪಿಸುವುದರಿಂದ ಅವರಿಗೆ ಸಂತಾನ ಭಾಗ್ಯ ಪ್ರಾಪ್ತವಾಗುತ್ತದೆ. ಪತಿ – ಪತ್ನಿಯರ ನಡುವಿನ ಸಂಬಂಧ ಮಧುರವಾಗಿರುತ್ತದೆ. ಅಷ್ಟು ಮಾತ್ರವಲ್ಲ, ಇದರಿಂದ ವ್ಯಕ್ತಿಯ ಇಷ್ಟಾರ್ಥಗಳು ಶೀಘ್ರದಲ್ಲೇ ಈಡೇರುತ್ತದೆ.

ಬಿಳಿ ಕಮಲದ ಹೂವು ಸಾಮಾನ್ಯವಾಗಿ ಎಲ್ಲಾ ಕಡೆ ಸಿಗುತ್ತದೆ. ಇದು ಕೂಡ ಶಿವನಿಗೆ ಪ್ರಿಯವಾದ ಹೂವುಗಳಲ್ಲಿ ಒಂದಾಗಿದೆ. ಶಿವ ಪುರಾಣದಲ್ಲಿ ಉಲ್ಲೇಖಿಸಿರುವ ಪ್ರಕಾರ, ಯಾವ ವ್ಯಕ್ತಿ ಶಿವನನ್ನು ಒಂದು ಲಕ್ಷ್ಮಿ ಬಿಳಿ ಕಮಲದ ಹೂವಿನಿಂದ ಪೂಜಿಸುತ್ತಾನೋ ಅವನು ಮೋಕ್ಷವನ್ನು ಪಡೆದುಕೊಳ್ಳುತ್ತಾನೆ ಎನ್ನಲಾಗಿದೆ. ಒಂದು ವೇಳೆ ನಿಮಗೆ ಬಿಳಿ ಬಣ್ಣದ ಕಮಲದ ಹೂವುಗಳು ಸಿಗದೇ ಇದ್ದರೆ ಕೆಂಪು ಬಣ್ಣದ ಕಮಲದ ಹೂವನ್ನು ಕೂಡ ಅರ್ಪಿಸಬಹುದು.

ಈ ಎರಡೂ ಹೂವುಗಳು ಶಿವನಿಗೆ ಪ್ರಿಯ. ಶಿವನನ್ನು ಒಂದು ಲಕ್ಷ ದಾಸವಾಳ ಹೂವುಗಳಿಂದ ಪೂಜಿಸಿದರೆ ಶತ್ರು ಬಾಧೆ ಇರದು. ನಿಮ್ಮ ಜೀವನದಿಂದ ಶತ್ರುಗಳು ನಾಶವಾಗುತ್ತಾರೆ. ನೀವು ಪಾರಿಜಾತ ಹೂವುಗಳನ್ನು ಅರ್ಪಿಸುವುದರಿಂದ ಶಿವನು ಭಕ್ತರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ದಯಪಾಲಿಸುತ್ತಾನೆ. ಇದಲ್ಲದೇ ಬಯಸಿದ ಜೀವನ ಸಂಗಾತಿಯನ್ನು ಕರುಣಿಸುತ್ತಾನೆ.

Kishor KV