ಒಡಿಶಾ ರೈಲ್ವೆ ದುರಂತ: 51 ಗಂಟೆಗಳ ಬಳಿಕ ಮೊದಲ ರೈಲು ಸಂಚಾರ – ಭಾವು​ಕ​ರಾದ ಸಚಿವ ವೈಷ್ಣವ್‌

ಒಡಿಶಾ ರೈಲ್ವೆ ದುರಂತ: 51 ಗಂಟೆಗಳ ಬಳಿಕ ಮೊದಲ ರೈಲು ಸಂಚಾರ – ಭಾವು​ಕ​ರಾದ ಸಚಿವ ವೈಷ್ಣವ್‌

ಒಡಿಶಾ: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಒಡಿಶಾ ರೈಲು ದುರಂತದಿಂದಾಗಿ 288 ಜನರು ಸಾವನ್ನಪ್ಪಿದ್ದರು. 900 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇದೀಗ ದುರಂತ ನಡೆದು ಕೇವಲ ಎರಡೇ ದಿನದಲ್ಲಿ ಎಕ್ಸ್​ಪ್ರೆಸ್​ವೇ ದುರಸ್ತಿಗೊಂಡಿದ್ದು ಪ್ಯಾಸೆಂಜರ್​ ರೈಲುಗಳು ಸಂಚರಿಸಲು ಶುರು ಮಾಡಿವೆ. ಈ ರೈಲು ಸಂಚಾರ ಆರಂಭ ಮಾಡು​ತ್ತಿ​ದ್ದಂತೆ ದುರ್ಘ​ಟನಾ ಸ್ಥಳದ ಹಳಿಯ ಪಕ್ಕ​ದಲ್ಲೇ ನಿಂತಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ರೈಲ್ವೆ ಅಧಿ​ಕಾ​ರಿ​ಗಳು, ದುರಸ್ತಿ ಸಿಬ್ಬಂದಿ ಹಾಗೂ ಸಾರ್ವ​ಜ​ನಿ​ಕರು ಭಾವು​ಕ​ರಾಗಿ ರೈಲಿ​ನತ್ತ ಕೈಬೀಸಿ ಹರ್ಷ ವ್ಯಕ್ತ​ಪ​ಡಿ​ಸಿ​ದ​ರು. ಇದೇ ವೇಳೆ ಅಶ್ವಿನಿ ವೈಷ್ಣವ್‌ ಅವರು ದೇವ​ರ​ನ್ನು ನೆನೆ​ಯುತ್ತ ಸಾಗು​ತ್ತಿದ್ದ ರೈಲಿಗೆ ಕೈಮು​ಗಿ​ದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಯಾವಾಗ? – ಟ್ರಸ್ಟ್‌ ಹೇಳಿದ್ದೇನು?  

ಭಾನು​ವಾರ ರಾತ್ರಿ ಸಂಚ​ರಿ​ಸಿದ ರೈಲು ಕಲ್ಲಿ​ದ್ದಲು ಹೊತ್ತ ಗೂಡ್ಸ್‌ ರೈಲಾ​ಗಿದ್ದು, ವಿಶಾ​ಖ​ಪ​ಟ್ಟ​ಣ​ದಿಂದ ಆಗ​ಮಿ​ಸಿತ್ತು. ಇದು ರೂರ್‌​ಕೆ​ಲಾ ಉಕ್ಕು ಘಟ​ಕ​ದತ್ತ ಪ್ರಯಾಣ ಬೆಳೆ​ಸಿತು. ಇದೇ ಮಾರ್ಗ​ದಲ್ಲಿ ಬೆಂಗಳೂ​ರು-ಹೌರಾ ರೈಲಿಗೆ ಕೋರ​ಮಂಡಲ್‌ ಎಕ್ಸ್‌​ಪ್ರೆ​ಸ್‌ ಡಿಕ್ಕಿ ಹೊಡೆ​ದಿ​ತ್ತು. ಬಹುಶಃ  ಇಂದಿನಿಂದ ಪ್ರಯಾ​ಣಿಕ ರೈಲುಗಳು ಸಂಚಾರ ಆರಂಭಿ​ಸುವ ನಿರೀ​ಕ್ಷೆ​ಯಿ​ದೆ.

ಈ ಬಗ್ಗೆ ಮಾಧ್ಯ​ಮ​ಗಳ ಜತೆ ಮಾತ​ನಾ​ಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣ​ವ್‌, ‘ಕೇ​ವಲ 51 ತಾಸಿ​ನಲ್ಲಿ ಎರಡೂ ಬದಿಯ ಹಳಿ ದುರಸ್ತಿ ಪೂರ್ಣ​ಗೊ​ಳಿ​ಸ​ಲಾ​ಗಿ​ದೆ. ಇನ್ನು ರೈಲು ಸಂಚಾರ ಸಹಜ ಸ್ಥಿತಿಗೆ ಮರ​ಳಲಿದೆ. ಈಗಿ​ನಿಂದಲೇ ಸಂಚಾರ ಆರಂಭ​ವಾ​ಗ​ಲಿ​ದೆ ಎಂದ​ರು.

ಹೌರಾದಿಂದ ಚೆನ್ನೈ/ಬೆಂಗಳೂರು ಕಡೆ ಬರುವ ಹಾಗೂ ಹೌರಾ (Howrah) ಕಡೆ ಹೋಗುವ ಎರಡೂ ಮಾರ್ಗಗಳ ಹಳಿ ದುರಸ್ತಿ ಶನಿ​ವಾರ ರಾತ್ರಿ ಆರಂಭ​ವಾ​ಗಿತ್ತು. ಮೊದಲು ಹಳಿ ಜೋಡಿ​ಸಿದ ಕಾರ್ಮಿ​ಕರು, ನಂತರ ಸಿಗ್ನ​ಲಿಂಗ್‌ ಹಾಗೂ ವಿದ್ಯು​ದೀ​ಕರಣ ವ್ಯವಸ್ಥೆ ಸರಿ​ಪ​ಡಿ​ಸಿ​ದ​ರು.

suddiyaana