ಮದುವೆಗೆ ಕರೆಯದ ನಾದಿನಿ – ಮನನೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ!

ಮದುವೆಗೆ ಕರೆಯದ ನಾದಿನಿ – ಮನನೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ!

ಮದುವೆ ಅಂದ ಮೇಲೆ ಸಂಭ್ರಮ ಇದ್ದೇ ಇರುತ್ತದೆ. ಬಂಧು ಮಿತ್ರರ ಮನೆಗೆ ಮದುವೆಗೆ ಆಹ್ವಾನಿಸಲಾಗುತ್ತದೆ. ಇನ್ನು ದೂರದ ಊರುಗಳಲ್ಲಿ ಇದ್ದರೆ, ಮೆಸೆಜ್‌ ಮಾಡಿ, ಕರೆ ಮಾಡಿ ಮದುವೆಗೆ ಕರೆಯಲಾಗುತ್ತದೆ. ಕೆಲವೊಂದು ಬಾರಿ ಗಡಿಬಿಡಿಯಲ್ಲಿ ಕೆಲವರನ್ನು ಮದುವೆಗೆ ಕರೆಯಲು ಮರೆತುಬಿಡೋದು ಕಾಮನ್‌.. ಇದೀಗ ಇಲ್ಲೊಬ್ಬರು ನಾದಿನಿ ಮದುವೆಗೆ ಕರೆದಿಲ್ಲ ಅಂತಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ:  ಕಮಲ ಪಾಳಯಕ್ಕೆ ಬಿಗ್‌ ಶಾಕ್‌ – ಬಿಜೆಪಿ ಎಂಎಲ್​ಸಿ ಕೆಪಿ ನಂಜುಂಡಿ ರಾಜೀನಾಮೆ

ಸಾಮಾನ್ಯವಾಗಿ ಆತ್ಮೀಯರು ಮದುವೆಗೆ ಕರೆದಿಲ್ಲ ಅಂದ್ರೆ ಬೇಜಾರು ಆಗುವುದು ಕಾಮನ್‌.. ಆದ್ರೆ ಉತ್ತರ ಪ್ರದೇಶದ ಲಕ್ನೋದಲ್ಲಿ ವ್ಯಕ್ತಿಯೊಬ್ಬ ತನ್ನ ನಾದಿನಿಯ ಮದುವೆಗೆ ತನ್ನನ್ನು ಆಹ್ವಾನಿಸಿಲ್ಲ ಎನ್ನುವ ಕಾರಣಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

47 ವರ್ಷದ ಅನಿಲ್ ವರ್ಮಾ, ಹರ್ದೋಯ್ ಕಾಸಿಂಪುರ ನಿವಾಸಿಯಾಗಿದ್ದು, ಸೇನೆಯಿಂದ ನಿವೃತ್ತರಾಗಿದ್ದರು. ಎರಡು ದಿನಗಳ ಹಿಂದೆ ಅನಿಲ್‌ ಪತ್ನಿ ವಿನೀತಾ ತನ್ನ ಅಕ್ಕನ ಮದುವೆಗೆ ಮಕ್ಕಳೊಂದಿಗೆ  ಹೋಗಿದ್ದಳು. ಮನೆಯಲ್ಲಿ ಅನಿಲ್ ಒಬ್ಬನೇ ಇದ್ದ. ಈ ವೇಳೆ ನಾದಿನಿ  ತನ್ನನ್ನು ಆಹ್ವಾನಿಸಿಲ್ಲ ಎನ್ನುವ ಕಾರಣಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.

ವಿನೀತಾ ತನ್ನ ಪತಿಗೆ ಕರೆ ಮಾಡಿದ್ದಳು. ಫೋನ್ ರಿಸೀವ್ ಮಾಡದಿದ್ದಾಗ ವಿನೀತಾ ತನ್ನ ಗಂಡನ ಯೋಗಕ್ಷೇಮ ವಿಚಾರಿಸುವಂತೆ ಮನೆಯ ಮಾಲೀಕರನ್ನು ಕೇಳಿದ್ದಳು. ಈ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.  ಈ ಭಯಾನಕ ದೃಶ್ಯವನ್ನು ನೋಡಿದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬಾಗಿಲು ಒಡೆದು ಶವವನ್ನು ಕುಣಿಕೆಯಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು. ಸದ್ಯ ಪತ್ನಿ ಹಾಗೂ ಆಕೆಯ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಅತ್ತಿಗೆಯ ಮದುವೆಗೆ ಆಹ್ವಾನ ಬಂದಿಲ್ಲ ಎಂಬ ಕಾರಣಕ್ಕೆ ಮೃತರು ಮನನೊಂದಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *