ತಾಪಮಾನ ಏರಿಕೆಯಿಂದಾಗಿ ಕರಗುತ್ತಿದೆ ಅಮರನಾಥದ ಶಿವಲಿಂಗ!

ತಾಪಮಾನ ಏರಿಕೆಯಿಂದಾಗಿ ಕರಗುತ್ತಿದೆ ಅಮರನಾಥದ ಶಿವಲಿಂಗ!

ಅಮರನಾಥ ಹಿಂದೂ ಧರ್ಮದ ಪವಿತ್ರ ಮತ್ತು ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಕೆಲವರು ಅಮರನಾಥವನ್ನು ಸ್ವರ್ಗದ ದಾರಿ ಎಂದು ಕರೆದರೆ, ಕೆಲವರು ಮೋಕ್ಷದ ಸ್ಥಳ ಎಂದು ಕರೆಯುತ್ತಾರೆ. ಹೀಗಾಗಿಯೇ ಲಕ್ಷಾಂತರ ಜನರು ಅಮರನಾಥ ಯಾತ್ರೆ ಕೈಗೊಂಡು ಶಿವನ ದರ್ಶನ ಪಡೆಯುತ್ತಾರೆ. ಇದೀಗ ಭಕ್ತರಿಗೆ ಶಾಕಿಂಗ್‌ ಸುದ್ದಿಯೊಂದಿದೆ. ನೈಸರ್ಗಿಕವಾಗಿ ರೂಪುಗೊಂಡ ಶಿವಲಿಂಗ ಕರಗುತ್ತಿದೆಯಂತೆ!

ಪ್ರಸಕ್ತ ಸಾಲಿನ ಅಮರನಾಥ ಯಾತ್ರೆ ಜು. 1 ರಂದು ಆರಂಭಗೊಂಡಿದ್ದ, ಆಗಸ್ಟ್‌ 31 ರಂದು ಮುಕ್ತಾಯಗೊಳ್ಳಲಿದೆ. ಆದರೆ ಯಾತ್ರೆ ಮುಕ್ತಾಯಗೊಳ್ಳುವ ಮುನ್ನವೇ ಹೆಚ್ಚಿದ ತಾಪಮಾನದಿಂದಾಗಿ ಗುಹೆಯಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಶಿವಲಿಂಗ ಕರಗುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ತೋಟ ಘಾಟಿಯಲ್ಲಿ ಭಾರಿ ಭೂಕುಸಿತ – ರಿಷಿಕೇಶ – ಬದರಿನಾಥ ಹೆದ್ದಾರಿ ಸಂಪೂರ್ಣ ಬಂದ್‌

ಐಸ್ ಸ್ಟಾಲಗ್ಮೈಟ್ ಸಾಮಾನ್ಯವಾಗಿ ಶ್ರಾವಣ ಮಾಸ ಅಂದರೆ ಜುಲೈ-ಆಗಸ್ಟ್ ನಲ್ಲಿ ಮಂಜುಗಡ್ಡೆಯ ಶಿವಲಿಂಗವನ್ನು ರೂಪಿಸುತ್ತದೆ. ಒಂದು ತಿಂಗಳ ನಂತರ ಅದು ಕರಗಲು ಪ್ರಾರಂಭಿಸುತ್ತದೆ. ಈ ವರ್ಷ ಶಿವಲಿಂಗವು ತಾಪಮಾನ ಏರಿಕೆಯಿಂದ ಜುಲೈ ವೇಳೆಗೆ ಕರಗಲು ಪ್ರಾರಂಭಿಸಿದೆ. ಆಗಸ್ಟ್ ಆರಂಭದಲ್ಲಿ ಬಹುತೇಕ ಕರಗಿದೆ.   ಜುಲೈ 1 ರಂದು ಅನಂತನಾಗ್ ಜಿಲ್ಲೆಯ ಪಹಲ್ಹಾಮ್ ಟ್ರ್ಯಾಕ್ ಮತ್ತು ಗಂದರ್ಬಾಲ್ ಜಿಲ್ಲೆಯ ಬಾಲ್ಟಾಲ್ ಎರಡೂ ಮಾರ್ಗಗಳು ಏಕಕಾಲದಲ್ಲಿ ಯಾತ್ರೆ ಆರಂಭವಾಗಿದೆ. ಆಗಸ್ಟ್ 17 ರವರೆಗೆ ಬರೋಬ್ಬರಿ 4,38,733 ಭಕ್ತಾದಿಗಳು ಭೇಟಿ ನೀಡಿದ್ದಾರೆ.

ಯಾತ್ರೆಗೆ ಸಂಬಂಧಿಸಿದ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ. ಆಗಸ್ಟ್ 15 ರಂದು ಕುಂಕುಮ ವಸ್ತ್ರದಲ್ಲಿ ಸುತ್ತಿರುವ ಶಿವನ ಪವಿತ್ರ ಗದೆ ಛಾರಿ ಮುಬಾರಕ್‌ನ್ನು ಅದರ ಉಸ್ತುವಾರಿ ಮಹಂತ್ ದೀಪೇಂದ್ರ ಗಿರಿ ಅವರು ಐತಿಹಾಸಿಕ ಶಂಕರಾಚಾರ್ಯ ದೇವಸ್ಥಾನಕ್ಕೆ ಹರಿಯಲಿ ಅಮವಾಸ್ಯೆಯ ಸಂದರ್ಭದಲ್ಲಿ ಪ್ರಾರ್ಥನೆಗಾಗಿ ಹೊತ್ತೊಯ್ದರು. ಮರುದಿನ ಛಾರಿ ಮುಬಾರಕ್ ಅನ್ನು ಹರಿ ಪರ್ಬತ್ ಹಿಲ್ಸ್‌ನಲ್ಲಿರುವ ಶಾರಿಕಾ ಭವಾನಿ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು. ಪವಿತ್ರ ಗದೆಯನ್ನು ಮಹಾಂತರು ಆಗಸ್ಟ್ 31 ರಂದು ಶ್ರಾವಣ ಪೂರ್ಣಿಮೆಯ ಮುಂಜಾನೆ ಪವಿತ್ರ ಅಮರನಾಥ ಗುಹೆಗೆ ಹೊತ್ತೊಯ್ಯುವರು. ಅಲ್ಲಿ ಗದೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

suddiyaana