ಉತ್ತರ ಭಾರತದಲ್ಲಿ ಟೊಮ್ಯಾಟೊ ದುಬಾರಿ – ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಿಂದ ಸಂಗ್ರಹಿಸುವಂತೆ ‘ಕೇಂದ್ರ’ ಸೂಚನೆ!

ಉತ್ತರ ಭಾರತದಲ್ಲಿ ಟೊಮ್ಯಾಟೊ ದುಬಾರಿ – ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಿಂದ ಸಂಗ್ರಹಿಸುವಂತೆ ‘ಕೇಂದ್ರ’ ಸೂಚನೆ!

ನವದೆಹಲಿ: ಉತ್ತರ ಭಾರತದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಸಾಕಷ್ಟು ಹಾನಿಯಾಗಿದೆ. ಕೋಟ್ಯಂತರ ಮೌಲ್ಯದ ವಸ್ತುಗಳು ಹಾನಿಯಾಗಿದೆ. ಜನರು ಮಹಾಮಳೆಯ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ಸಾವಿರಾರು ಜನರು ಹೊಟ್ಟೆಗೆ ಹಿಟ್ಟಿಲ್ಲದೆ ದಿನ ದೂಡುವಂತಹ ಸ್ಥಿತಿಯನ್ನು ಮಹಾಮಳೆ ಸೃಷ್ಟಿಸಿದೆ. ಮಹಾಮಳೆಯಿಂದ ನಲುಗಿರುವ ಉತ್ತರ ಭಾರತದಲ್ಲಿ ನಿತ್ಯ ಬಳಕೆಯ ದಿನಸಿ, ತರಕಾರಿ ದರಗಳೂ ಕೂಡ ಗಗನಕ್ಕೇರುತ್ತಿದೆ.  ಪ್ರಮುಖವಾಗಿ ಟೊಮ್ಯಾಟೊ ದರ ದ್ವಿಶತಕ ಗಡಿ ದಾಟಿದೆ.

ಇದನ್ನೂ ಓದಿ: ಚಿನ್ನದ ಬೆಲೆಯಿದ್ದರೂ 1 ಕೆಜಿ ಟೊಮ್ಯಾಟೊಗೆ ಬರೀ 20 ರೂಪಾಯಿ – ವ್ಯಾಪಾರಿಯಿಂದ ಬಂಪರ್ ಆಫರ್

ಉತ್ತರ ಭಾರತದಲ್ಲಿ ಸುರಿಸಾವಿರಾರು ಜನರು ಬದುಕು ಮೂರಾಬಟ್ಟೆಯಾಗಿದೆ. ಜನರು ಸರಿಯಾದ ಊಟ, ನಿದ್ದೆ ಇಲ್ಲದೇ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇದೀಗ ಉತ್ತರ ಭಾರತದ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಉತ್ತರ ಭಾರತದಲ್ಲಿ ಟೊಮ್ಯಾಟೊ ದರ ಮತ್ತಷ್ಟು ಏರಿಕೆಯಾಗಿದ್ದು, ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಟೊಮ್ಯಾಟೊ ದರ 200ರ ಗಡಿ ದಾಟಿದೆ. ಕಳೆದ ಒಂದು ತಿಂಗಳಿಂದ ಟೊಮ್ಯಾಟೊ ದರ ಗಗನ ಮುಖಿಯಾಗಿದ್ದು, ಇದೀಗ ದರ ನಿಯಂತ್ರಣದ ನಿಟ್ಟಿನಲ್ಲಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮ್ಯಾಟೊಗಳನ್ನು ಖರೀದಿಸುವಂತೆ ಕೇಂದ್ರ ಸರ್ಕಾರವು ಬುಧವಾರ ಸಹಕಾರಿ ಸಂಸ್ಥೆಗಳಾದ ನಾಫೆಡ್ ಮತ್ತು ಎನ್‌ಸಿಸಿಎಫ್‌ಗೆ ನಿರ್ದೇಶನ ನೀಡಿದೆ. ಜುಲೈ 14 ರಿಂದ ದೆಹಲಿ-ಎನ್‌ಸಿಆರ್ ಪ್ರದೇಶದ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಚಿಲ್ಲರೆ ಮಳಿಗೆಗಳ ಮೂಲಕ ಟೊಮ್ಯಾಟೊ ದಾಸ್ತಾನುಗಳನ್ನು ವಿತರಿಸಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ ದೇಶದ ಹಲವು ಭಾಗಗಳಲ್ಲಿ ಟೊಮ್ಯಾಟೊ ಚಿಲ್ಲರೆ ಬೆಲೆಗಳು ಕೆಜಿಗೆ 200 ರೂ ಗಡಿ ದಾಟಿದ್ದು, ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ದಕ್ಷಿಣದ ರಾಜ್ಯಗಳಿಂದ ಟೊಮ್ಯಾಟೊ ಖರೀದಿ ಮಾಡಲು ಮುಂದಾಗಿದೆ.

ಸಚಿವಾಲಯದ ಪ್ರಕಾರ, ಚಾಲ್ತಿಯಲ್ಲಿರುವ ಬೆಲೆಗಳು ಅಖಿಲ ಭಾರತ ಸರಾಸರಿಗಿಂತ ಹೆಚ್ಚಿರುವ ಕೇಂದ್ರಗಳಲ್ಲಿ ಕಳೆದ ಒಂದು ತಿಂಗಳಿನಿಂದ ಚಿಲ್ಲರೆ ಬೆಲೆಯಲ್ಲಿನ ಸಂಪೂರ್ಣ ಹೆಚ್ಚಳದ ಆಧಾರದ ಮೇಲೆ ಟೊಮ್ಯಾಟೊಗಳನ್ನು ಬಿಡುಗಡೆ ಮಾಡಲು ಉದ್ದೇಶಿತ ಕೇಂದ್ರಗಳನ್ನು ಗುರುತಿಸಲಾಗಿದೆ. ಗುರುತಿಸಲಾದ ಕೇಂದ್ರಗಳ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವ ರಾಜ್ಯಗಳಲ್ಲಿನ ಪ್ರಮುಖ ಬಳಕೆಯ ಕೇಂದ್ರಗಳನ್ನು ಮಧ್ಯಸ್ಥಿಕೆಗೆ ಮತ್ತಷ್ಟು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದೆ.

suddiyaana