ಕಿಚ್ಚನ ಚಪ್ಪಾಳೆ ಬಗ್ಗೆ ನಮ್ರತಾ ಮತ್ತು ವಿನಯ್ ಅನುಮಾನ – ಸುದೀಪ್ ಮೇಲೆ ಇಂಥಾ ಅನುಮಾನ ಸರಿಯೇ ಬಿಗ್‌ಬಾಸ್?

ಕಿಚ್ಚನ ಚಪ್ಪಾಳೆ ಬಗ್ಗೆ ನಮ್ರತಾ ಮತ್ತು ವಿನಯ್ ಅನುಮಾನ – ಸುದೀಪ್ ಮೇಲೆ ಇಂಥಾ ಅನುಮಾನ ಸರಿಯೇ ಬಿಗ್‌ಬಾಸ್?

ವಾರದ ಕಥೆ ಕಿಚ್ಚನ ಜೊತೆ ಈ ವೀಕೆಂಡ್ ಎಪಿಸೋಡ್ ನೋಡಲು ವೀಕ್ಷಕರು ಈ ವಾರ ಕಾಯುತ್ತಿದ್ದರು. ಯಾಕೆಂದರೆ ಕಿಚ್ಚನ ಪಂಚಾಯಿತಿಯಲ್ಲಿ ನ್ಯಾಯ ಇದೆ. ಇಲ್ಲಿ ಸ್ಪರ್ಧಿಗಳಿಗೂ ಮಾತ್ರವಲ್ಲ, ಸ್ಪರ್ಧಿಗಳ ಅತಿರೇಕದ ವರ್ತನೆ ಕಂಡ ವೀಕ್ಷಕರಿಗೂ ಸಮಾಧಾನ ಸಿಗುತ್ತದೆ ಎಂಬ ನಂಬಿಕೆ. ಆದರೆ, ಕಿಚ್ಚನ ಪಂಚಾಯ್ತಿ ವೀಕ್ಷಕರಿಗೆ ಸಮಾಧಾನ ತಂದಿದೆಯೋ ಇಲ್ಲವೋ.. ಕಿಚ್ಚನ ಚಪ್ಪಾಳೆ ಬಗ್ಗೆ ನಮ್ರತಾ ಮತ್ತು ವಿನಯ್‌ಗೆ ಸಿಟ್ಟು ತರಿಸಿದೆ. ಕಿಚ್ಚ ಸುದೀಪ್ ಅವರನ್ನೇ ಅನುಮಾನಿಸಿದ್ದಾರೆ.

ಇದನ್ನೂ ಓದಿ: ವಿನಯ್ ಸೇಡಿಗೆ ಆಸ್ಪತ್ರೆ ಸೇರಿದರಾ ಸಂಗೀತಾ, ಡ್ರೋನ್ ಪ್ರತಾಪ್ – ಬಿಗ್‌ಬಾಸ್ ಮನೆಯಲ್ಲಿ ಏನಾಗುತ್ತಿದೆ?

ಬಿಗ್‌ಬಾಸ್ ಮನೆಯಲ್ಲಿ ಒಂದು ವಾರದ ಪರ್ಫಾರ್ಮೆನ್ಸ್ ಗಮನದಲ್ಲಿ ಇಟ್ಟುಕೊಂಡು ಕಿಚ್ಚನ ಚಪ್ಪಾಳೆ ಕೊಡಲಾಗುತ್ತದೆ. ಹೀಗಿರುವಾಗ, ಬಿಗ್‌ಬಾಸ್ ಮನೆಯ ಸ್ಪರ್ಧಿಗಳೇ ಈ ವಾರ ಕಿಚ್ಚನ ಚಪ್ಪಾಳೆ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಈ ವಾರದ ವೀಕೆಂಡ್ ನಲ್ಲಿ ಕಿಚ್ಚನ ಚಪ್ಪಾಳೆ ಕಾರ್ತಿಕ್ ಮಹೇಶ್ ಅವರಿಗೆ ಸಿಕ್ಕಿತ್ತು. ಕಾರ್ತಿಕ್,  ಸುದೀಪ್ ನೀಡುವ ಈ ಗೌರವವನ್ನು ಪಡೆದರು. ವಿನಯ್ ಮತ್ತು ಟೀಮ್‌ನಿಂದ ನಾನಾ ರೀತಿಯ ಹಿಂಸೆಯಲ್ಲಿ ನರಳಾಡಿದ ಕಾರ್ತಿಕ್ , ಸುದೀಪ್ ಅವರು ಕೊಟ್ಟ ಚಪ್ಪಾಳೆಯ ಗೌರವನ್ನು ಭಾವುಕರಾಗಿಯೇ ಪಡೆದಿದ್ದರು. ಆದರೆ, ಈಗ ಸುದೀಪ್ ನೀಡಿದ ಕಿಚ್ಚನ ಚಪ್ಪಾಳೆ ಬಗ್ಗೆ ನಮ್ರತಾ ಮತ್ತು ವಿನಯ್ ಫುಲ್ ಗರಂ ಆಗಿದ್ದಾರೆ. ಸುದೀಪ್ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.

ವಿನಯ್ ಹಾಗೂ ನಮ್ರತಾ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಇದನ್ನು ನೋಡಿ ವಿನಯ್ ಕೂಡಾ ಸಿಕ್ಕಾಪಟ್ಟೆ ಉರಿದುಕೊಂಡಿದ್ದಾರೆ. ನಮ್ರತಾ ಅವರಿಗಂತೂ ಇದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಿಯೇ ಇಲ್ಲ. ಶನಿವಾರದ ಎಪಿಸೋಡ್ ಮುಗಿದ ಬಳಿಕ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ನಮ್ರತಾ, ವಿನಯ್ ಹಾಗೂ ಮೈಕಲ್ ಕುಳಿತಿದ್ದರು. ಈ ವೇಳೆ ಕಿಚ್ಚನ ಚಪ್ಪಾಳೆ ಬಗ್ಗೆ ಚರ್ಚೆ ಆಗಿದೆ. ‘ಕಿಚ್ಚನ ಚಪ್ಪಾಳೆಯನ್ನು ಯಾರೂ ಇಲ್ಲ ಎಂದು ಅವರಿಗೆ ನೀಡಿದ್ರಾ ಅಥವಾ ನಿಜವಾಗಲೂ ಅವರ ಸಾಮರ್ಥ್ಯ ನೋಡಿ ಕೊಟ್ರಾ’ ಎಂದು ನಮ್ರತಾ ಪ್ರಶ್ನೆ ಮಾಡಿದ್ದಾರೆ. ಆಗ ವಿನಯ್, ‘ನಾನು ಕೆಟ್ಟದಾಗಿ ಆಡಿದೆ, ಅದಕ್ಕೆ ಕಾರ್ತಿಕ್‌ಗೆ ಸಿಕ್ತು’ ಎಂದಿದ್ದಾರೆ. ಸದ್ಯ ನಮ್ರತಾ ಹೇಳಿಕೆಗೆ ಸಾಕಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಕಿಚ್ಚನ ಚಪ್ಪಾಳೆ ಸುಖಾಸುಮ್ಮನೆ ಯಾರಿಗೂ ಸಿಗುವುದಿಲ್ಲ. ಒಂದು ವಾರದ ಪರ್ಫಾರ್ಮೆನ್ಸ್‌ ಗಮನದಲ್ಲಿ ಇಟ್ಟುಕೊಂಡು ಈ ಚಪ್ಪಾಳೆ ಕೊಡಲಾಗುತ್ತದೆ. ಹೀಗಿರುವಾಗ ಅದರ ಬಗ್ಗೆಯೇ ಅನುಮಾನ ವ್ಯಕ್ತಪಡಿಸೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ‘ನಮ್ರತಾಗೆ ಚಪ್ಪಾಳೆ ನೀಡಿದ್ದಕ್ಕೆ ಸುದೀಪ್ ಅವರಿಗೆ ವಿಷಾದ ಉಂಟಾಗಿರಬಹುದು’ ಎಂದು ಕೆಲವರು ಬರೆದುಕೊಂಡಿದ್ದಾರೆ. ಅದೇನೇ ಇರಲಿ, ವಿನಯ್ ಮತ್ತು ನಮ್ರತಾ ಇಬ್ಬರೂ ದುರಂಹಕಾರಿಗಳೇ. ತಾವು ಮಾಡಿದ್ದೇ ಸರಿ ಎಂದೇ ಭಾವಿಸುವ ಇವರಿಬ್ಬರೂ ಈಗ ಕಿಚ್ಚ ಸುದೀಪ್ ಅವರ ಬಗ್ಗೆಯೂ ಅನುಮಾನ ವ್ಯಕ್ತಪಡಿಸುವುದು ಸರಿನಾ..? ಇದಕ್ಕೂ ಬಿಗ್‌ಬಾಸ್ ಮಾತ್ರ ಉತ್ತರ ನೀಡಲು ಸಾಧ್ಯ.

Sulekha