ನಕ್ಷತ್ರಾ – ಶ್ವೇತಾ ಸವಾಲ್‌ಗೆ ಪ್ರತಿ ಸವಾಲ್ – ಗೆಲ್ಲುವುದು ದುಷ್ಟರ ದುರಹಂಕಾರವೋ? ಒಳ್ಳೆಯವರ ಸ್ವಾಭಿಮಾನವೋ?

ನಕ್ಷತ್ರಾ – ಶ್ವೇತಾ ಸವಾಲ್‌ಗೆ ಪ್ರತಿ ಸವಾಲ್ – ಗೆಲ್ಲುವುದು ದುಷ್ಟರ ದುರಹಂಕಾರವೋ? ಒಳ್ಳೆಯವರ ಸ್ವಾಭಿಮಾನವೋ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷಣ’ ಧಾರಾವಾಹಿಯಲ್ಲಿ ಈಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಮೋಸದಿಂದ ಶಕುಂತಲಾ ದೇವಿಯ ಸಮಸ್ತ ಆಸ್ತಿಯನ್ನ ಶ್ವೇತಾ ಬರೆಯಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಗಂಡ ಮೌರ್ಯ, ಅತ್ತೆ ಶಕುಂತಲಾ ದೇವಿ ಸೇರಿದಂತೆ ಮನೆಯವರೆನ್ನೆಲ್ಲಾ ಶ್ವೇತಾ ಹೊರಹಾಕಿದ್ದಾಳೆ. ಸ್ವಂತ ಮನೆಯಿಂದ ಹೊರಬಂದ ಶಕುಂತಲಾ ದೇವಿ, ಮಕ್ಕಳ ಜೊತೆಗೆ ಅನ್ನಪೂರ್ಣ ಹೋಟೆಲ್ ಜಾಗಕ್ಕೆ ಬಂದಿದ್ದಾರೆ. ಈಗ ಅದನ್ನೂ ಕೂಡಾ ಶ್ವೇತಾ ಸಹಿಸುತ್ತಿಲ್ಲ.

ಇದನ್ನೂ ಓದಿ:ಗಂಡನ ವಿರುದ್ಧವೇ ತಿರುಗಿಬಿದ್ದ ಭಾಗ್ಯ – ಹೆಂಡತಿಯ ಮಾತಿನೇಟಿಗೆ ತಾಂಡವ್ ಗಡಗಡ..!

ಮನೆಯಿಂದ ಹೊರ ಹಾಕಿದರೂ ಕೂಡಾ ಶಕುಂತಲಾ ದೇವಿ ಕುಟುಂಬದ ಜೊತೆಗೆ ಚೆನ್ನಾಗಿರುವುದು ಶ್ವೇತಾಗೆ ಇಷ್ಟವಿಲ್ಲ. ಹೀಗಾಗಿ ಅನ್ನಪೂರ್ಣ ಹೋಟೆಲ್ ಕೆಡವಲು ಮುಂದಾಗಿದ್ದಾಳೆ. ಕುಟುಂಬದವರ ಜೊತೆ ಬರ್ತ್‌ಡೇ ಸೆಲೆಬ್ರೇಷನ್ ಮಾಡುತ್ತಿರುವ  ಶಕುಂತಳಾ ದೇವಿಗೆ ಇಲ್ಲೂ ಕೂಡಾ ಶ್ವೇತಾ ಮತ್ತೆ ಕಾಡುತ್ತಾಳೆ. ಅನ್ನಪೂರ್ಣ ಹೋಟೆಲ್ ಕೆಡವಲು ಕಂಟ್ರ್ಯಾಕ್ಟರ್ ಆಗಮಿಸುತ್ತಾರೆ. ಕಂಟ್ರ್ಯಾಕ್ಟರ್ ಜೊತೆಗೆ ಮೌರ್ಯ ಜಗಳಕ್ಕೆ ನಿಲ್ಲುತ್ತಾನೆ. ಸ್ಥಳಕ್ಕೆ ಪೊಲೀಸರೂ ಕೂಡ ಧಾವಿಸುತ್ತಾರೆ. ಹೋಟೆಲ್‌ನ್ನು ಕೆಡವಿ, ಎಲ್ಲರ ಖುಷಿಯನ್ನ ಹಾಳು ಮಾಡಬೇಕು ಅನ್ನೋದು ಶ್ವೇತಾಳ ಉದ್ದೇಶ. ಶ್ವೇತಾಳ ಕುತಂತ್ರಕ್ಕೆ ನಕ್ಷತ್ರ ಸಿಟ್ಟಾಗುತ್ತಾಳೆ. ನಾನು ಅನ್ನಪೂರ್ಣ ಹೋಟೆಲ್ ಕೆಡವುತ್ತೇನೆ. ನಿನಗೆ ತಾಕತ್ತು ಇದ್ದರೆ ತಡಿ’’ ಎಂದು ನಕ್ಷತ್ರಾಗೆ ಶ್ವೇತಾ ಚಾಲೆಂಜ್ ಮಾಡ್ತಾಳೆ. ನಿನಗೆ ತಾಕತ್ತು ಇದ್ದರೆ ಹೋಟೆಲ್ ಕೆಡವು ಅಂತ ನಕ್ಷತ್ರ ಕೂಡ ಸವಾಲು ಹಾಕುತ್ತಾಳೆ. ದುಷ್ಟರ ದುರಹಂಕಾರ ಗೆಲ್ಲುತ್ತೋ, ಒಳ್ಳೆಯವರ ಸ್ವಾಭಿಮಾನ ಗೆಲ್ಲುತ್ತೋ.. ನೋಡೇಬಿಡೋಣ’’ ಅಂತ ನಕ್ಷತ್ರ ಗುಡುಗುತ್ತಾಳೆ. ವೀಕ್ಷಕರು ಕೂಡಾ ಶ್ವೇತಾಳನ್ನು ಆದಷ್ಟು ಬೇಗ ನಕ್ಷತ್ರ ಸೋಲಿಸಬೇಕು ಎಂದು ಕಾಯುತ್ತಿದ್ದಾರೆ.

ಲಕ್ಷಣ ಧಾರಾವಾಹಿಯಲ್ಲಿ ನಕ್ಷತ್ರ ಆಗಿ ವಿಜಯಲಕ್ಷ್ಮೀ, ಶ್ವೇತಾ ಆಗಿ ಸುಕೃತಾ ನಾಗ್, ಶಕುಂತಲಾ ದೇವಿ ಆಗಿ ಸುಧಾ ಬೆಳವಾಡಿ, ಭೂಪತಿ ಆಗಿ ಜಗನ್ನಾಥ್ ಚಂದ್ರಶೇಖರ್, ಮೌರ್ಯ ಆಗಿ ಅಭಿಷೇಕ್ ಶ್ರೀಕಾಂತ್, ಅಜ್ಜಿ ಆಗಿ ಸುಂದರಶ್ರೀ, ಭಾರ್ಗವಿ ಆಗಿ ಪ್ರಿಯಾ ಶಠಮರ್ಷಣ ನಟಿಸುತ್ತಿದ್ದಾರೆ.

suddiyaana