ಆಸ್ಕರ್​ ಗೆದ್ದ RRR.. ಟ್ವೀಟ್ ನಲ್ಲಿ ಶುಭಕೋರಿದ ಆಂಧ್ರ ಸಿಎಂ – ತೆಲುಗು ಬಾವುಟ ಎಂದಿದ್ದಕ್ಕೆ ಕಾಲೆಳೆದ ಅದ್ನಾನ್ ಸಾಮಿ!

ಆಸ್ಕರ್​ ಗೆದ್ದ RRR.. ಟ್ವೀಟ್ ನಲ್ಲಿ ಶುಭಕೋರಿದ ಆಂಧ್ರ ಸಿಎಂ – ತೆಲುಗು ಬಾವುಟ ಎಂದಿದ್ದಕ್ಕೆ ಕಾಲೆಳೆದ ಅದ್ನಾನ್ ಸಾಮಿ!

2023ರ ಆಸ್ಕರ್ ಅಂಗಳದಲ್ಲಿ ಭಾರತ ಎರಡು ಪ್ರಶಸ್ತಿಗಳನ್ನ ಬಾಚಿಕೊಂಡಿದೆ. ರಾಜಮೌಳಿ ನಿರ್ದೇಶನದ RRR ಸಿನಿಮಾ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಜೊತೆಗೆ ಆಸ್ಕರ್ ಪ್ರಶಸ್ತಿಯನ್ನೂ ಗೆದ್ದು ಬೀಗಿದೆ. ಈ ಪ್ರಶಸ್ತಿಗೆ ಇಡೀ ದೇಶವೇ ಸಂಭ್ರಮಿಸುತ್ತಿದೆ.

ಇದನ್ನೂ ಓದಿ : ದಿ ಎಲಿಫೆಂಟ್ ವಿಸ್ಪರರ್ಸ್ ‘ರಘು’ಗೆ ಸಖತ್ ಡಿಮ್ಯಾಂಡ್ – ವಿದೇಶದಿಂದಲೂ ಬರ್ತಿದ್ದಾರೆ ಫ್ಯಾನ್ಸ್..!

ತೆಲುಗು ಸಿನಿಮಾಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದ್ದಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸಿನಿಮಾದ ತಂಡವನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದರು. ಆದ್ರೆ ಇದೇ ಟ್ವೀಟ್‌ಗೆ ​ಬಾಲಿವುಡ್ ಗಾಯಕ ಅದ್ನಾನ್ ಸಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಆಂಧ್ರ ಸಿಎಂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದೇ ಅದ್ನಾನಿ ಅಸಮಾಧಾನಕ್ಕೆ ಕಾರಣವಾಗಿದೆ. ‘ತೆಲುಗು ಬಾವುಟ ಎತ್ತರಕ್ಕೆ ಹಾರುತ್ತಿದೆ. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ತಕ್ಕ ಮನ್ನಣೆಯನ್ನ ನೀಡುತ್ತಿರುವ ನಮ್ಮ ಜಾನಪದ ಪರಂಪರೆಯನ್ನ ತುಂಬಾ ಸುಂದರವಾಗಿ ಆಚರಿಸುವ ತೆಲುಗು ಹಾಡಿನ ಬಗ್ಗೆ ನಿಜವಾಗಿಯೂ ಹೆಮ್ಮೆ ಇದೆ ಎಂದು ಜಗನ್ ಮೋಹನ್ ರೆಡ್ಡಿ ಬರೆದುಕೊಂಡಿದ್ದರು.

ಆಂಧ್ರ ಸಿಎಂ ಟ್ವೀಟ್​ಗೆ ಬಾಲಿವುಡ್ ಗಾಯಕ ಅದ್ನಾನ್ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದು ತೆಲುಗು ಧ್ವಜನಾ. ಅಂದ್ರೆ ಬಾವುಟದ ಧ್ವಜ ಎಂದರ್ಥವೇ. ವೈ.ಎಸ್ ಜಗನ್ ಮೋಹನ್ ರೆಡ್ಡಿ ಬಾವಿಯೊಳಗಿರುವ ಪ್ರಾದೇಶಿಕ ಮನಸ್ಥಿತಿಯ ಕಪ್ಪೆ. ಅವರು ಯಾವತ್ತೂ ಸಮುದ್ರದ ಬಗ್ಗೆ ಚಿಂತಿಸಲು ಸಾಧ್ಯವಿಲ್ಲ. ಯಾಕೆಂದರೆ ತನ್ನ ಮೂಗಿನ ಕೆಳಗೆ ಮಾತ್ರ ನೋಡುತ್ತಾರೆ. ಪ್ರಾದೇಶಿಕ ವಿಭಜನೆಗಳನ್ನ ಸೃಷ್ಟಿಸಿದ್ದಕ್ಕಾಗಿ ನಾಚಿಕೆ ಪಡುತ್ತೇನೆ. ರಾಷ್ಟ್ರೀಯ ಹೆಮ್ಮೆಯನ್ನ ಬೋಧಿಸಲು ಆಗುತ್ತಿಲ್ಲ ಎಂದು ಟೀಕಿಸಿದ್ದಾರೆ.

suddiyaana