ಕೆಂಡಸಂಪಿಗೆ ಸೀರಿಯಲ್‌ನಲ್ಲಿ ಅತ್ತೆ ‘ಪದ್ಮಾ’ ಪಾತ್ರದಾರಿ ಬದಲು – ದೊಡ್ಡಣ್ಣನ ಪತ್ನಿ ಪಾತ್ರದಲ್ಲಿ ಜ್ಯೋತಿ ಬಂಟ್ವಾಳ ಎಂಟ್ರಿ

ಕೆಂಡಸಂಪಿಗೆ ಸೀರಿಯಲ್‌ನಲ್ಲಿ ಅತ್ತೆ ‘ಪದ್ಮಾ’ ಪಾತ್ರದಾರಿ ಬದಲು – ದೊಡ್ಡಣ್ಣನ ಪತ್ನಿ ಪಾತ್ರದಲ್ಲಿ ಜ್ಯೋತಿ ಬಂಟ್ವಾಳ ಎಂಟ್ರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಧಾರಾವಾಹಿ ಕೆಂಡಸಂಪಿಗೆ ಕಥೆ ಈಗ ಪ್ರೇಕ್ಷಕರ ಮನಗೆದ್ದಿದೆ. ಹೆಂಡತಿ ಸುಮನಾ ಕಂಡರೆ ಉರಿದುಬೀಳುತ್ತಿದ್ದ ಗಂಡ ತೀರ್ಥಂಕರ್ ಪ್ರಸಾದ್ ಇದೀಗ ನಿಧಾನವಾಗಿ ಬದಲಾಗುತ್ತಿದ್ದಾನೆ. ಗರ್ಭಿಣಿ ಆಗಿರುವ ಸುಮನಾ ಬಗ್ಗೆ ತೀರ್ಥಂಕರ್ ಪ್ರಸಾದ್ ಕಾಳಜಿ ವಹಿಸುತ್ತಿದ್ದಾನೆ. ಗಂಡ ಹೇಗೆ ಇದ್ದರೂ ಸುಮನಾ ಮೇಲೆ ಅತ್ತೆ ಮಾವನಿಗೆ ವಿಪರೀತ ಕಾಳಜಿ ಮತ್ತು ಪ್ರೀತಿ. ಇದು ಸೀರಿಯಲ್ ಪ್ರಿಯರ ಮನಗೆದ್ದಿದೆ. ಅತ್ತೆಗಂತೂ ಸೊಸೆ ಅಂದರೆ ತುಂಬಾ ಪ್ರೀತಿ. ಅತ್ತೆ ಪದ್ಮಾ ತನ್ನ ಸೊಸೆ ಸುಮನಾಳನ್ನು ನೋಡಿಕೊಳ್ಳುತ್ತಿರುವ ರೀತಿ ನೋಡಿ ಅತ್ತೆ ಸೊಸೆ ಅಂದರೆ ಹೀಗಿರಬೇಕು ಅಂದುಕೊಂಡವರೇ ಹೆಚ್ಚು. ಇದೀಗ ಅತ್ತೆಯಾಗಿ ಎಲ್ಲರ ಮನಗೆದ್ದಿದ್ದ ಪದ್ಮಾ ಪಾತ್ರಧಾರಿ ಬದಲಾಗಿದ್ದಾರೆ.

ಇದನ್ನೂ ಓದಿ: ಗಿಣಿರಾಮ ಮಹಾ ಮುಕ್ತಾಯ – ಆಯಿ ಸಾಹೇಬರ ಅಂತ್ಯದೊಂದಿಗೆ ಧಾರಾವಾಹಿ ಕೊನೆಗೊಳ್ಳುತ್ತಾ?

ಕೆಂಡಸಂಪಿಗೆ ಸೀರಿಯಲ್‌ನ ಪದ್ಮಾ ಪಾತ್ರಕ್ಕೆ ನಟಿ ಜ್ಯೋತಿ ಬಂಟ್ವಾಳ ಬಣ್ಣ ಹಚ್ಚಿದ್ದಾರೆ. ‘ಕೆಂಡಸಂಪಿಗೆ’ ಸೀರಿಯಲ್ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಸಾಧನಾ ಮತ್ತು ಸುಮನಾ ಮಧ್ಯೆ ಉತ್ತಮ ಸೊಸೆ ಯಾರು ಎಂದು ಕೇಶವ ಪ್ರಸಾದ್ ಹಾಗೂ ಪತ್ನಿ ಪದ್ಮ ಪರೀಕ್ಷೆ ಮಾಡುತ್ತಿದ್ದಾರೆ. ಹೀಗಿರುವಾಗಲೇ, ಪದ್ಮ ಪಾತ್ರಧಾರಿ ಚೇಂಜ್ ಆಗಿದ್ದಾರೆ. ಕಾರಣಾಂತರಗಳಿಂದ ಪದ್ಮ ಪಾತ್ರಧಾರಿ ಬದಲಾಗಿದ್ದು, ಇದೀಗ ‘ಪದ್ಮ’ ಆಗಿ ಜ್ಯೋತಿ ಬಂಟ್ವಾಳ ಕಾಣಿಸಿಕೊಳ್ಳುತ್ತಿದ್ದಾರೆ. ‘ಪದ್ಮ’ ಪಾತ್ರಕ್ಕೆ ಹಿಂದೆ ಅಭಿನಯಿಸುತ್ತಿದ್ದವರೇ ಸೂಕ್ತವಾಗಿದ್ದರು, ಅವರೇ ಚೆನ್ನಾಗಿ ಅಭಿನಯಿಸುತ್ತಿದ್ದರು, ಪಾತ್ರಧಾರಿಯ ಬದಲಾವಣೆ ಮಾಡಬೇಡಿ’’ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಹಾಕುತ್ತಿದ್ದಾರೆ. ಕೇಶವ ಪ್ರಸಾದ್ ಆಗಿ ದೊಡ್ಡಣ್ಣ, ಕೇಶವ ಪ್ರಸಾದ್ ಪತ್ನಿ ಪದ್ಮ ಆಗಿ ಜ್ಯೋತಿ ಬಂಟ್ವಾಳ, ಕೇಶವ ಪ್ರಸಾದ್ ಹಿರಿಯ ಸೊಸೆ ಸಾಧನಾ ಆಗಿ ಅಮೃತಾ ರಾಮಮೂರ್ತಿ, ಕೇಶವ ಪ್ರಸಾದ್ ಎರಡನೇ ಸೊಸೆ ಸುಮನಾ ಆಗಿ ಕಾವ್ಯ ಶೈವ, ಕೇಶವ ಪ್ರಸಾದ್ ಎರಡನೇ ಪುತ್ರ ತೀರ್ಥಂಕರ್ ಪ್ರಸಾದ್ ಆಗಿ ಆಕಾಶ್ ನಟಿಸುತ್ತಿದ್ದಾರೆ.

suddiyaana