ಹೋಟೆಲ್ ಉದ್ಯಮಿಯಾದ ಮೊಹಮ್ಮದ್ ಸಿರಾಜ್ – ಟೀಮ್ ಇಂಡಿಯಾ ವೇಗಿ ಬದುಕಿನಲ್ಲಿ ಹೊಸ ಇನ್ನಿಂಗ್ಸ್

ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಬದುಕಿನಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ. ತಮ್ಮ ತವರು ಹೈದರಾಬಾದ್ನಲ್ಲಿ ‘ಜೋಹರ್ಫಾ’ ಎಂಬ ಹೆಸರಿನ ರೆಸ್ಟೋರೆಂಟ್ ತೆರೆದಿದ್ದಾರೆ. ಈ ಮೂಲಕ ಡಿಎಸ್ಪಿ ಸಾಹೇಬರು ಉದ್ಯಮ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ:ವಿರಾಟ್ ಇದ್ದಾಗ ವೈಭವ.. ಇಲ್ಲದಿದ್ದಾಗ ಸೈಲೆಂಟ್ – ಸೈಡ್ ಲೈನ್ ಆಗ್ತಾರಾ ಮೊಹಮ್ಮದ್ ಸಿರಾಜ್?
ಟೀಮ್ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಹೈದರಾಬಾದ್ನಲ್ಲಿ ‘ಜೋಹರ್ಫಾ’ ಎಂಬ ಹೆಸರಿನ ತಮ್ಮ ಮೊದಲ ರೆಸ್ಟೋರೆಂಟ್ ತೆರೆದಿದ್ದಾರೆ. ಹೈದರಾಬಾದ್ನ ಹೃದಯಭಾಗದಲ್ಲಿರುವ ಜೋಹರ್ಫಾ ರೆಸ್ಟೋರೆಂಟ್, ಪ್ರಸಿದ್ಧ ಚೀನೀ ಭಕ್ಷ್ಯಗಳೊಂದಿಗೆ ಮೊಘಲಾಯಿ, ಪರ್ಷಿಯನ್ ಮತ್ತು ಅರೇಬಿಯನ್ ಆಹಾರವನ್ನು ಗ್ರಾಹಕರಿಗೆ ಒದಗಿಸುತ್ತದೆ.
ನನಗೆ ಗೌರವ ನೀಡಿದ ನಗರಕ್ಕೆ ಏನನ್ನಾದರೂ ಮರಳಿ ನೀಡಲು ಮುಂದಾಗಿದ್ದೇನೆ ಎಂದು ಸಿರಾಜ್ ಹೇಳಿದ್ದಾರೆ. ಈ ರೆಸ್ಟೋರೆಂಟ್ ತನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದು ಸಿರಾಜ್ ಹೇಳಿದರು. “ಜೋಹರ್ಫಾ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಹೈದರಾಬಾದ್ ನನಗೆ ನನ್ನ ಗುರುತನ್ನು ನೀಡಿದೆ. ಈ ರೆಸ್ಟೋರೆಂಟ್ ಈ ನಗರಕ್ಕೆ ಏನನ್ನಾದರೂ ಮರಳಿ ನೀಡುವ ನನ್ನ ಮಾರ್ಗವಾಗಿದೆ. ಇಲ್ಲಿ ಜನರು ಒಟ್ಟಿಗೆ ಸೇರಬಹುದು, ಆಹಾರವನ್ನು ಸೇವಿಸಬಹುದು ಮತ್ತು ಮನೆಯಲ್ಲಿರುವಂತೆ ಅನುಭವ ಪಡೆಯಬಹುದು” ಎಂದು ಸಿರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ರೆಸ್ಟೋರೆಂಟ್ ಅನುಭವಿ ಅಡುಗೆಯವರ ತಂಡವನ್ನು ಹೊಂದಿದೆ.
ಈ ಅಡುಗೆಯವರು ಸಾಂಪ್ರದಾಯಿಕ ರೀತಿಯಲ್ಲಿ ಅಡುಗೆ ಮಾಡುವಲ್ಲಿ ಪರಿಣಿತರು. ಅವರು ತಾಜಾ ಮತ್ತು ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸುತ್ತಾರೆ. ಈ ಹೆಜ್ಜೆಯೊಂದಿಗೆ, ಸಿರಾಜ್ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇವರೆಲ್ಲರೂ ಈ ಹಿಂದೆ ಆಹಾರ ಮತ್ತು ಹೋಟೆಲ್ ಉದ್ಯಮದಲ್ಲಿ ಹೂಡಿಕೆ ಮಾಡಿದ್ದಾರೆ.

ನೋಡಿರಿ

