‘ನನ್ನ ಕುತ್ತಿಗೆಗೆ ಮೂರ್ತಿಯೇ ತಾಳಿ ಕಟ್ಟಬೇಕು’ – ಪ್ರೇಮಿಗಾಗಿ ದೇವರಿಗೆ ಪತ್ರ ಬರೆದ ಪ್ರೇಯಸಿ

‘ನನ್ನ ಕುತ್ತಿಗೆಗೆ ಮೂರ್ತಿಯೇ ತಾಳಿ ಕಟ್ಟಬೇಕು’ – ಪ್ರೇಮಿಗಾಗಿ ದೇವರಿಗೆ ಪತ್ರ ಬರೆದ ಪ್ರೇಯಸಿ

ಚಾಮರಾಜನಗರ : ದೇವಸ್ಥಾನಕ್ಕೆ ಹೋದವರು ನಮಗಿಷ್ಟವಾದ ಪ್ರಾರ್ಥನೆ ಮಾಡಿಕೊಳ್ಳುವುದು ಸಾಮಾನ್ಯ. ಇನ್ನು ಕೆಲವರು ಮನಸಲ್ಲಿ ಹಲವು ರೀತಿಯ ಕೋರಿಕೆಗಳನ್ನು ಹೇಳಿಕೊಳ್ಳುತ್ತಾ ದೇವರೇ ನಾ ಹೇಳಿದ್ದು ಆದರೆ ನಿನಗೆ ಕಾಣಿಕೆ ಹಾಕ್ತೀನಿ ಅಂತಾ ಹುಂಡಿಯಲ್ಲಿ ದುಡ್ಡು ಹಾಕಿ ಬರ್ತಾರೆ. ಇನ್ನು ಕೆಲವರಂತೂ ಎಷ್ಟು ಸಲ ದೇವರಿಗೆ ಅಡ್ಡ ಬೀಳ್ತಾರೋ ಅವರಿಗೆ ಗೊತ್ತು. ದೇವರಲ್ಲಿ ತಮ್ಮ ಇಷ್ಟಾರ್ಥ ಹೇಳಿಕೊಳ್ಳುತ್ತಾ ಬೇಡಿಕೊಳ್ಳುವ ಭಕ್ತರೂ ಇದ್ದಾರೆ. ಯಾರು ಎಷ್ಟೇ ಬೇಡಿಕೊಂಡರು ಬರುವಾಗ ಕಾಣಿಕೆಗೆ ಇಂತಿಷ್ಟು ಅಂತಾ ದುಡ್ಡು ಹಾಕಿ ಬರ್ತಾರೆ. ಆದರೆ, ಮೊನ್ನೆ ಮೊನ್ನೆಯಷ್ಟೇ ಚಾಮರಾಜನಗರ ಜಿಲ್ಲೆಯಲ್ಲಿ ಒಬ್ಬ ಭಕ್ತ ಮಹಾಶಯ, ದೇವರಿಗೆ ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿದ್ದ. ಆತನಿಗೂ ಮದುವೆಯ ವಯಸ್ಸಾಗಿತ್ತು. ದೇವರ ಹತ್ತಿರ ಹುಡುಗಿ ಬೇಗ ಸಿಗುವಂತೆ ಮಾಡು ಅಂತಾ ಪ್ರಾರ್ಥಿಸಿ ಸಾಕಾಗಿ ಹೋಗಿತ್ತು. ಹೀಗಾಗಿ ನೇರವಾಗಿ ದೇವರಿಗೆ ಪತ್ರವನ್ನೇ ಬರೆದಿದ್ದ. ಬೇಗ ನನಗೆ ಹುಡುಗಿ ಹುಡುಕಿಕೊಡು ಎಂದು ಪತ್ರ ಬರೆದಿದ್ದ. ಇದೀಗ ಪ್ರಿಯಕರನಿಗಾಗಿ ಪ್ರೇಯಸಿಯೊಬ್ಬಳು ದೇವರಿಗೆ ಪತ್ರ ಬರೆದಿದ್ದಾಳೆ.

ಇದನ್ನೂ ಓದಿ:  ‘ದೇವರೇ ನನಗೆ ಹುಡುಗಿಯನ್ನು ಕರುಣಿಸು’ – ದೇವಸ್ಥಾನದ ಹುಂಡಿಯಲ್ಲಿತ್ತು ದೇವರಿಗೆ ಬರೆದ ಪತ್ರ

‘ದೇವರೇ ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರದು’ ಎಂದು ದೇವರಿಗೇ ಪ್ರೀತಿಯಿಂದ ಬೆದರಿಕೆಯೊಡ್ಡುತ್ತಾ, ಪ್ರೇಯಸಿಯೊಬ್ಬಳು ಪತ್ರ ಬರೆದಿದ್ದಾಳೆ. ದೇವರ ಬಳಿ ಮೂರ್ತಿ ನಂಗೆ ಸಿಗುವಂತೆ ಮಾಡು ಅಂತಾ ಪ್ರಾರ್ಥಿಸಿ ಸಾಕಾದ ಪ್ರೇಯಸಿ, ಕೊನೆಗೂ ದೇವರಿಗೇ ಪತ್ರ ಬರೆದು ಕಾಣಿಕೆ ಡಬ್ಬದಲ್ಲಿ ಹಾಕಿಬಿಟ್ಟಿದ್ದಾಳೆ. ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಮಾಯಮ್ಮ ದೇವಮ್ಮ ದೇವಸ್ಥಾನದ ಹುಂಡಿಯಲ್ಲಿ ಈ ಪತ್ರ ಸಿಕ್ಕಿದೆ.

ಮತ್ತೊಂದೆಡೆ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿರುವ ಕಳಸೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪರಿವಾರ ದೇವರುಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ವೇಳೆ ಮಗನ ಇಡೀ ಬದುಕನ್ನೇ ಬದಲಿಸಪ್ಪಾ ಎಂದು ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿರುವ ಪತ್ರ ವೈರಲ್ ಆಗಿತ್ತು. ಯಾಕೋ ಇತ್ತೀಚೆಗೆ ಭಕ್ತರು ದೇವರಿಗೆ ಬರೀ ಪ್ರಾರ್ಥನೆ ಮಾಡಿದರೆ ಸಾಕಾಗುವುದಿಲ್ಲ. ಪತ್ರ ಬರೆದರೆ ನೇರವಾಗಿ ದೇವರೆ ಓದಬಹುದು ಅಂತಾ ತಿಳ್ಕೊಂಡಿದ್ದಾರೋ ಏನೋ.. ಕಾಣಿಕೆ ಹಾಕುವ ಹುಂಡಿಯಲ್ಲಿ ಈಗ ಪತ್ರಗಳಂತೂ ಸಿಗುತ್ತಲೇ ಇದೆ.

suddiyaana