ಲೋಕಸಭಾ ಅಖಾಡದಿಂದ ದೂರ ಉಳಿದ್ರಾ ಯತ್ನಾಳ್‌?  

ಲೋಕಸಭಾ ಅಖಾಡದಿಂದ ದೂರ ಉಳಿದ್ರಾ ಯತ್ನಾಳ್‌?  

ಲೋಕಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಭರ್ಜರಿ ಸಿದ್ದತೆ ನಡೆಸ್ತಾ ಇದೆ. ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಆದ್ರೆ ರಾಜ್ಯದ ಪ್ರಮುಖ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ಎಲ್ಲೂ ಕಾಣಿಸ್ತಾ ಇಲ್ಲ.. ಯತ್ನಾಳ್‌ ರಾಜಕೀಯ ಬಿಟ್ರಾ ಅಂತಾ ಗೊಂದಲ ಮೂಡಿತ್ತು. ಯತ್ನಾಳ್‌ ಚುನಾವಣಾ ಕಾರ್ಯದಲ್ಲಿ ಕಾಣಿಸದೇ ಇರೋದು ಈ ಪ್ರಶ್ನೆ ಉದ್ಭವಕ್ಕೆ ಕಾರಣವಾಗಿತ್ತು. ಇದೀಗ ಯತ್ನಾಳ್ ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಇದನ್ನೂ ಓದಿ: ರಾಹುಲ್‌  ಗಾಂಧಿ, ಪ್ರಿಯಾಂಕಾ ಗಾಂಧಿ ‘ನೆಪೋಟಿಸಂ ಮಕ್ಕಳು’- ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಕಂಗನಾ

ಹೌದು, ಚುನಾವಣೆ ಘೋಷಣೆಯಾದಾಗಿನಿಂದ ವಿಜಯಪುರ ಶಾಸಕ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಯತ್ನಾಳ್‌ ಅವರೇ ತಮ್ಮ ಲೊಕೇಶನ್ ಶೇರ್ ಮಾಡಿದ್ದಾರೆ.. ವಿಜಯಪುರ ನಗರಕ್ಕೆ ಹತ್ತಿರದಲ್ಲಿರುವ ಕಗ್ಗೋಡ ಎಂಬಲ್ಲಿನ  ಗೋರಕ್ಷಾ ಕೇಂದ್ರದಲ್ಲಿ ಶಾಸಕರು ಇದ್ದಾರೆ. ಅಲ್ಲಿ ಗೋಸೇವೆಯಲ್ಲಿ ತೊಡಗಿದ್ದು, ಅದ್ರ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಒಬ್ಬ ಕೋಚ್ ನ ಹಾಗೆ ಟೀ ಶರ್ಟ್, ಶಾರ್ಟ್ಸ್ ಮತ್ತು ಸ್ಪೋರ್ಟ್ಸ್ ಶೂ ಧರಿಸಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹಸುಗಳಿಗೆ ಮೇವು ಹಾಕುತ್ತಾ, ಅಕಳು ಮತ್ತು ಕರುಗಳ ಮೈಸವರುತ್ತಾ ಅವುಗಳೊಂದಿಗೆ ಮೌನ ಸಂಭಾಷಣೆಯಲ್ಲಿ ತೊಡಗಿದ್ದಾರೆ. ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಸಮರ ಸಾರಿರುವ ವಿಜಯಪುರ ಶಾಸಕ ಸದ್ಯಕ್ಕೆ ಯುದ್ಧವಿರಾಮ ಘೋಷಿಸಿರುವಂತಿದೆ.

Shwetha M