ಮಧುಚಂದ್ರಕ್ಕೆ ಕರೆದು ಗಂಡನ ಕೊ*ಲೆ ಮಾಡಿದ ಕಿರಾತಕ ಹೆಂಡತಿ
ಹನಿಮೂನ್ನಲ್ಲೇ ಗಂಡನ ಮ*ರ್ಡರ್

ಬಾ ನಲ್ಲೆ ಮಧುಚಂದ್ರಕೆ ಸಿನಿಮಾವನ್ನ ನೆವೆಲ್ಲಾ ನೋಡಿ ಇರ್ತೀರಾ.. ಸೇಮ್ ಟೂ ಸೇಮ್ ಈ ಸಿನಿಮಾದಂತೆಯೇ ಮೇಘಾಲಯದಲ್ಲಿ ಒಂದು ಕೊಲೆನಡೆದಿದೆ. ಆದರೆ ಇದು ಸ್ವಲ್ಪ ಡಿಫೆರೆಂಟ್ ಅಷ್ಟೇ. ಈ ಸಿನಿಮಾದಲ್ಲಿ ಆಗತಾನೇ ಹೊಸದಾಗಿ ಮದುವೆಯಾದ ಪತ್ನಿಯನ್ನು ಪತಿ ಆಳವಾದ ಕಂದಕಕ್ಕೆ ತಳ್ಳಿ ಪ್ರಾಣ ತೆಗೆಯುತ್ತಾನೆ. ಆದ್ರೆ ಈ ಕೇಸ್ನಲ್ಲಿ ಪತಿಯನ್ನೇ ಕಂದಕ್ಕೆ ತಳ್ಳಿದ್ದು ಹೆಂಡತಿ.
ಮಧ್ಯಪ್ರದೇಶದ ಇಂದೋರ್ನ ರಾಜಾ ರಘುವಂಶಿ ಅವರು ಸೋನಮ್ ರಘುವಂಶಿ ಅವರನ್ನು ಮೇ 11 ಅದ್ದೂರಿಯಾಗಿ ವಿವಾಹವಾಗಿದ್ದರು ಇದಾದ ಬಳಿಕ ಮೇ 20 ರಂದು ನವದಂಪತಿಗಳು ಮೇಘಾಲಯಕ್ಕೆ ಹನಿಮೂನ್ ಗೆಂದು ತೆರಳಿದ್ದಾರೆ. ಇದಾದ ಬಳಿಕ ಮೇ.23 ರಂದು ನವದಂಪತಿಗಳು ನಾಪತ್ತೆಯಾಗಿದ್ರು. ಇದ್ರಿಂದ ಗಾಬರಿಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ರು. ಜೂನ್ 2 ರಂದು ಪೊಲೀಸರು ರಾಜಾ ಅವರ ಶವ ಪತ್ತೆ ಹಚ್ಚಿದ್ದರು. ರಾಜಾ ರಘುವಂಶಿ ಅವರ ಮೃತದೇಹ ಮೇಘಾಲಯದ ಪೂರ್ವ ಖಾಸಿ ಬೆಟ್ಟ ಪ್ರದೇಶವಾದ ವೀಸಾವ್ಡಾಂಗ್ ಜಲಪಾತದ ಆಳದ ಕಂದಕದಲ್ಲಿ ಪತ್ತೆಯಾಗಿತ್ತು.. ಜೊತೆಗೆ ಕಪ್ಪು ಬಣ್ಣದ ಜಾಕೆಟ್, ಮಾತ್ರೆ ಚೀಟಿಗಳು, ಸ್ಮಾರ್ಟ್ ಫೋನ್ ಪತ್ತೆಯಾಗಿತ್ತು.. ಆದರೆ ಪತ್ನಿ ಸೋನಮ್ ಮಾತ್ರ ನಾಪತ್ತೆಯಾಗಿದ್ದ. ಸೋನಮ್ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಅದು ಕ್ರಿಮಿನಲ್ಸ್ಗಳಿರುವ ಪ್ರದೇಶ ಹೀಗಾಗಿ ಯಾರೋ ಇಬ್ಬರಿಗೂ ಏನೋ ಮಾಡಿರಬಹುದು ಎಂದು ಊಹಿಸಲಾಗಿತ್ತು. ಮೃತದೇಹದಿಂದ ಚಿನ್ನದ ಉಂಗುರ ಹಾಗೂ ಕತ್ತಿನ ಸರ ನಾಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿತ್ತು. ಕೊಲೆ ನಡೆದ ಒಂದು ದಿನದ ನಂತರ ಆ ಪ್ರದೇಶದಿಂದ ರಕ್ತದ ಕಲೆಯುಳ್ಳ ಮಚ್ಚನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಇದೆಲ್ಲವೂ ಪತ್ನಿ ಸೋನಮ್ ಪ್ಲ್ಯಾನ್ ಆಗಿತ್ತು.
ಹನಿಮೂನ್ನಲ್ಲೇ ಗಂಡನ ಮರ್ಡರ್
ಹನಿಮೂನ್ಗೆ ಬಂದ ಜೋಡಿಗಳನ್ನು ಯಾರೂ ಅಪಹರಿಸಿದ್ದಲ್ಲ. ದುಷ್ಕರ್ಮಿಗಳೂ ಜೀವ ತೆಗೆದು ಬಿಸಾಡಿಲ್ಲ. ಬದಲಾಗಿ ರಾಜಾ ರಂಘುವಂಶಿಯ ಪತ್ನಿಯೇ ಮಾಡಿದ ಮಾಸ್ಟರ್ ಪ್ಲಾನ್ ಎಂದು ಗೊತ್ತಾಗಿದೆ. ಇದೀಗ ಮೇಘಾಲಯದ ಪೊಲೀಸರಿಗೆ ಪತ್ನಿ ಸೋನಂ ಶರಣಾಗಿದ್ದಾಳೆ. ಪತಿಯನ್ನು ತಾನೇ ಮುಗಿಸಿರೋದಾಗಿ ಆಕೆ ಹೇಳಿಕೊಂಡಿದ್ದಾಳೆ.. ಈಕೆಯೇ ಗಂಡನ ಕಥೆ ಮುಗಿಸಿದ್ಲು. ಸುಪಾರಿ ಹಂತಕರಿಂದ ಪತ್ನಿ ಸೋನಂ ಗಂಡನ ಕೊಲೆಗೆ ಸಂಚು ಮಾಡಿರುವುದಾಗಿ ಗೊತ್ತಾಗಿದೆ. ಉತ್ತರ ಪ್ರದೇಶದ ಗಾಜಿಪುರದಲ್ಲಿ ಸೋನಂ ಪತ್ತೆಯಾಗಿದ್ದು, ಅಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಈಕೆಯ ಜೊತೆಇನ್ನೂ ಮೂವರು ಆರೋಪಿಗಳನ್ನು ಪೊಲೀಸರು ಲಾಕ್ ಮಾಡಿದ್ದಾರೆ. ರಘುವಂಶಿಯನ್ನು ಕೊಲ್ಲಲು ಸೋನಂ ತಮಗೆ ಸುಪಾರಿ ನೀಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಅಕ್ರಮ ಸಂಬಂಧ, ಗಂಡನಿಗೆ ಸ್ಕೇಚ್
ರಾಜಾ ರಘುವಂಶಿ ಹತ್ಯೆಗೆ ಕಾರಣವೇನು ಅಂತ ನೋಡ್ತಾ ಹೋದ್ರೆ ಅಕ್ರಮ ಸಂಬಂಧ. ಸೋನಮ್ಗೆ ಬೇರೆಯೊಬ್ಬರ ಜತೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಪತಿಯನ್ನು ಕೊಲೆ ಮಾಡಲು ಸ್ಕೇಚ್ ಹಾಕಿದ್ಲು. ಈ ಹನಿಮೂನ್ ಟ್ರಿಪ್ನ್ನು ರಾಜಾನನ್ನು ಕೊಲ್ಲುವುದಕ್ಕಾಗಿಯೇ ಪ್ಲ್ಯಾನ್ ಮಾಡಿದ್ದಳು ಅನ್ನೋದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
x: ಬಾಡಿಗೆ ಸ್ಕೂಟರ್ನಲ್ಲಿ ಸುತ್ತಾಟ
ಮೇ 11 ರಂದು ವಿವಾಹವಾದ ದಂಪತಿಗಳು ಮೇ 20 ರಂದು ಮೇಘಾಲಯಕ್ಕೆ ಹನಿಮೂನ್ಗೆ ತೆರಳಿದ್ದರು. ಅವರು ಮೇ 22 ರಂದು ಬಾಡಿಗೆ ಸ್ಕೂಟರ್ನಲ್ಲಿ ಮೌಲಾಖಿಯಾತ್ ಗ್ರಾಮಕ್ಕೆ ಬಂದಿದ್ದರು. ಮೇ 24 ರಂದು, ಶಿಲ್ಲಾಂಗ್ನಿಂದ ಸೊಹ್ರಾಗೆ ಹೋಗುವ ರಸ್ತೆಯ ಕೆಫೆಯ ಬಳಿ ಅವರ ಸ್ಕೂಟರ್ ಕೈಬಿಟ್ಟಿರುವುದು ಕಂಡುಬಂದಿದೆ, ನಂತರ ದಂಪತಿಗಳಿಗಾಗಿ ಹುಡುಕಾಟ ಪ್ರಾರಂಭವಾಯಿತು. ಪ್ರಕರಣದ ತನಿಖೆಗಾಗಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು.
ತನಿಖೆಯಲ್ಲಿ ಪೊಲೀಸರ ನಿರ್ಲಕ್ಷ್ಯ ಎಂದಿದ್ದ ಸೋನಂ ತಂದೆ
ನನ್ನ ಮಗಳು ಅಪಹರಣಕ್ಕೊಳಗಾಗಿದ್ದಾಳೆ. ಮೇಘಾಲಯ ಪೊಲೀಸರು ಈ ಬಗ್ಗೆ ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಮೊದಲಿನಿಂದಲೂ ನಿರ್ಲಕ್ಷ್ಯ ವಹಿಸಿದ್ದಾರೆ. ಅವರು ನಾಪತ್ತೆಯಾದ ದಿನದಿಂದಲೂ ಸೇನೆಯನ್ನು ನಿಯೋಜಿಸಲು ಪ್ರಯತ್ನಿಸುತ್ತಿದ್ದೆ. ಅದನ್ನು ಸಮಯಕ್ಕೆ ಮಾಡಿದ್ದರೆ, ಅವರು ಸುರಕ್ಷಿತವಾಗಿ ಪತ್ತೆಯಾಗುತ್ತಿದ್ದರು ಎಂದು ಸೋನಂ ತಂದೆ ದೇವಿ ಸಿಂಗ್ ರಘುವಂಶಿ ಮೊದಲು ಹೇಳಿದ್ದರು.
ಸೋನಮ್ ನಿರಪರಾಧಿ, ಪೊಲೀಸರ ಕಥೆ ಸುಳ್ಳು
ಸೋನಂ ದೇವಿ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಮ್ಮ ಮಗಳು ನಿರಪರಾಧಿ, ಅವಳು ಮುಗ್ಧೆ ನನ್ನ ಮಗಳು ತನ್ನ ಗಂಡನನ್ನು ಕೊಲ್ಲಲು ಯಾರನ್ನಾದರೂ ನೇಮಿಸುತ್ತಾಳೆ ಎಂಬುದೇ ನಂಬಲಾಗದ ವಿಷಯ. ಅವರು ಇಬ್ಬರೂ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹ ಮಾಡಿಕೊಂಡಿದ್ದರು. ಮೇಘಾಲಯ ಪೊಲೀಸರು, ಹನಿಮೂನ್ ಗೆಂದು ಬಂದ ದಂಪತಿಗಳ ಪತಿಯ ಶವ ಜೂನ್ 2ರಂದು ಚಿರಾಪುಂಜಿಯ ಬಳಿ ಪತ್ತೆಯಾಗಿದೆಯೆಂದು ಮತ್ತು ಇದರಲ್ಲಿ ಸೋನಮ್ ಪಾತ್ರವಿದೆ ಎಂಬ ಆರೋಪ ಹೊರಿಸಿದ್ದಾರೆ. ಇದರಲ್ಲಿ ಸತ್ಯಾಂಶವಿಲ್ಲ. ಸೋನಮ್ ಅವರನ್ನು ಮೇಘಾಲಯದಲ್ಲಿ ಬಂಧಿಸಲೇ ಇಲ್ಲ. ಬದಲಿಗೆ, ಆಕೆ ಸ್ವಯಂ ಗಾಜಿಪುರಕ್ಕೆ ತೆರಳಿದ್ದಾಳೆ ಮತ್ತು ಅಲ್ಲಿ ರಸ್ತೆ ಬದಿಯ ಡಾಬಾದಿಂದ ತನ್ನ ಸಹೋದರನಿಗೆ ಕರೆ ಮಾಡಿದ್ದಾಳೆ. ಮೇಘಾಲಯ ಪೊಲೀಸರು ಈಗಾಗಲೇ ತಾವು ಇಚ್ಛಿಸುವ ರೀತಿಯಲ್ಲಿ ಕಥೆ ಹೆಣೆದು, ಅದನ್ನು ಸಾರ್ವಜನಿಕರಿಗೆ ನಂಬಿ ಬಯಸುತ್ತಿದ್ದಾರೆ. ಆದರೆ ಸತ್ಯವೇ ಬೇರೆ. ನನ್ನ ಮಗಳ ಮೇಲೆ ನನ್ನಿಗೆ ಸಂಪೂರ್ಣ ನಂಬಿಕೆ ಇದೆ ಎಂದು ದೇವಿ ಸಿಂಗ್ ನುಡಿದಿದ್ದಾರೆ.
ಸಿಸಿ ಟಿವಿಯಲ್ಲಿ ಹೆಂಡತಿಯ ಕಳ್ಳಾಟ ಬಯಲು
ಇನ್ನೂ ಮರ್ಡರ್ ಆದ ದಿನ ಸೋನಂ ಮೊಬೈಲ್ ತಗೊಂಡು ಸ್ಕೂಟರ್ ಬಿಟ್ಟು ಪದೇ ಪದೇ ದೂರ ಹೋಗ್ತಾ ಇದ್ದಳು. ಯಾರ ಜೊತೆನೋ ಇಂಪಾರ್ಟೆಂಟ್ ಮಾತಾಡ್ಬೇಕು ಅಂತ ಟ್ರೈ ಮಾಡ್ತಿದ್ರು.. ಅವರ ಚಡಪಡಿಕೆ ಮತ್ತು ಪದೇ ಪದೇ ಓಡಾಟ ಸಸ್ಪೆನ್ಸ್ ಪ್ರಶ್ನೆಗಳನ್ನ ಹುಟ್ಟುಹಾಕಿತ್ತು. ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು. ಸ್ವಲ್ಪ ಹೊತ್ತಿನ ನಂತರ ಸೋನಂ ರಾಜಾ ಹತ್ರ ಬಂದು ಫೋನ್ನಲ್ಲಿ ಏನೋ ತೋರಿಸ್ತಾರೆ. ರಾಜಾ ಫೋನ್ ಸ್ಕ್ರೀನ್ ನೋಡ್ತಾರೆ. ಆಮೇಲೆ ಇಬ್ಬರೂ ಸ್ಕೂಟರ್ನಲ್ಲಿ ಹೊರಟು ಹೋಗ್ತಾರೆ. ಈ ಎಲ್ಲಾ ಮಾಹಿತಿ ಇಟ್ಕೊಂಡು ಸಂಪೂರ್ಣ ತನಿಖೆ ಮಾಡಿದ ಖಾಕಿ, ಕೊಲೆ ಪಾತಕಿ ಹೆಂಡತಿಯನ್ನ ಅರೆಸ್ಟ್ ಮಾಡಿದ್ದಾರೆ. ಯಾರು ಕೂಡ ಊಹಿಸಲು ಸಾಧ್ಯವಾಗದ ಕೇಸ್ನ್ನ ಪೊಲೀಸರು ಪತ್ತೆ ಹಚ್ಚಿದ್ದು, ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.