ಹೆಚ್.ಡಿ ಕುಮಾರಸ್ವಾಮಿಯೇ ಸಿಎಂ..! – ಭವಿಷ್ಯ ನುಡಿದ ಭೈರವ ಹೆಸರಿನ ಶ್ವಾನ..!

ಹೆಚ್.ಡಿ ಕುಮಾರಸ್ವಾಮಿಯೇ ಸಿಎಂ..! – ಭವಿಷ್ಯ ನುಡಿದ ಭೈರವ ಹೆಸರಿನ ಶ್ವಾನ..!

ಫಿಫಾ ವಿಶ್ವಕಪ್‌ ಟೈಮ್‌ನಲ್ಲಿ ಯಾವ ತಂಡ ಚಾಂಪಿಯನ್ ಆಗುತ್ತೆ ಎಂದು ಆಕ್ಟೋಪಸ್ ಮತ್ತು ಹಂದಿ ಭವಿಷ್ಯ ನುಡಿದಿರುವುದನ್ನು ಕೇಳಿರುತ್ತೀರಿ. ಈ ಬಾರಿ ಕರ್ನಾಟಕದಲ್ಲಿ ಎಲೆಕ್ಷನ್ ಟೈಮ್. ಹೀಗಾಗಿ ಎಲ್ಲರಿಗೂ ಯಾರ ಸರ್ಕಾರ ಬರುತ್ತೆ?, ಯಾರು ಸಿಎಂ ಆಗುತ್ತಾರೆ ಅನ್ನೋ ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ಕರ್ನಾಟಕದ ಮುಂದಿನ ಸಿಎಂ ಯಾರು ಎನ್ನುವ ಬಗ್ಗೆ ಶ್ವಾನವೊಂದು ಭವಿಷ್ಯ ನುಡಿದಿದೆ.

ಇದನ್ನೂ ಓದಿ:  ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಚರ್ಚೆಯಂತೂ ಜೋರಾಗಿಯೇ ಸಾಗಿದೆ. ಮೇ 13ಕ್ಕೆ ಎಲ್ಲ ಕುತೂಹಲಕ್ಕೂ ತೆರೆ ಬೀಳಲಿದೆ. ಆದಷ್ಟು ಬೇಗ ಗೊತ್ತಾಗಬೇಕು ಅಂತಾ ಕುತೂಹಲ ಇದ್ದವರಿಗೆ ಶ್ವಾನವೊಂದು ಭವಿಷ್ಯ ನುಡಿದಿದೆ. ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಲ ಭೈರವನ ಪ್ರತಿ ರೂಪ ಶ್ವಾನ ಭವಿಷ್ಯ ನುಡಿದಿದೆ. ಮಂಡ್ಯದ ಅಶೋಕನಗರದ ನಿವಾಸಿ ಗೋಪಿ ಎನ್ನುವರ ಭೈರವ ಹೆಸರಿನ ಶ್ವಾನವು ಹೆಚ್.ಡಿ ಕುಮಾರಸ್ವಾಮಿಯವರ ಭಾವ ಚಿತ್ರ ಸೂಚಿಸುವ ಮೂಲಕ ಮುಂದಿನ ಮುಖ್ಯಮಂತ್ರಿ ಎನ್ನುವ ಸುಳಿವು ನೀಡಿದೆ. ಗೋಪಿ ಅವರು ಕಾಲಭೈರವನ ಭಕ್ತರು. ಪ್ರತಿ ಸೋಮವಾರವೂ ಸಹ ಇವರ ಕುಟುಂಬ ಕಾಲಭೈರವನ ಪೂಜೆ ಮಾಡಿಕೊಂಡು ಬಂದಿದೆ. ಅಲ್ಲದೇ ದೇವಸ್ಥಾನಕ್ಕೆ ತಮ್ಮ ಶ್ವಾನವನ್ನೂ ಸಹ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಅದರಂತೆ ತಮ್ಮ ಶ್ವಾನಕ್ಕೆ ವಿಶೇಷ ಪೂಜೆ ಸಲ್ಲಿಸಿ ಈ ಬಾರಿ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದನ್ನು ಬಸವರಾಜ ಬೊಮ್ಮಾಯಿ, ಹೆಚ್.ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಅವರ ಮೂರು ಫೋಟೋಗಳನ್ನು ಇಟ್ಟು ಅಪ್ಪಣೆ ಕೇಳಿದ್ದಾರೆ. ಈ ವೇಳೆ ಶ್ವಾನ ಹೆಚ್.ಡಿ ಕುಮಾರಸ್ವಾಮಿ ಅವರ ಫೋಟೋವನ್ನು ಎತ್ತಿ ತೋರಿಸಿದೆ. ಈ ಮೂಲಕ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎನ್ನುವ ಭವಿಷ್ಯ ನುಡಿದೆ. ಈ ಹಿಂದೆ ಸಹ ಈ ಶ್ವಾನದಂತೆ ಹಲವು ಪವಾಡಗಳು ನಡೆದಿವೆಯಂತೆ. ಪುನಿತ್ ರಾಜ್ ಕುಮಾರ್ ಸಾಯುವುದಕ್ಕೂ ಮುನ್ನ ಪ್ರತಿ ದಿನ ಅವರ ಫೋಟೋ ಹಿಡಿದುಕೊಳ್ಳುತ್ತಿತ್ತಂತೆ. ಹೀಗೆ ಗೋಪಿ ಅವರ ಶ್ವಾನ ನೀಡುತ್ತಿರುವ ಸೂಚನೆಗಳು ನಿಜವಾಗುತ್ತಿವೆ ಎನ್ನಲಾಗಿದೆ. ಇದೀಗ ಕುಮಾರಸ್ವಾಮಿ ಫೋಟೋವನ್ನು ಎತ್ತಿ ಹಿಡಿಯುವ ಮೂಲಕ ಮುಂದಿನ ಸಿಎಂ ಎನ್ನುವ ಸೂಚನೆಯನ್ನು ನೀಡಿದೆ. ಕಳೆದ ಎರಡು ವರ್ಷಗಳಿಂದ ಶ್ವಾನ ನುಡಿದ ಭವಿಷ್ಯ ನಿಜವಾಗುತ್ತಿದೆಯಂತೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶ್ವಾನದ ಭವಿಷ್ಯ ನಿಜವಾಗಲಿದೆಯೇ ಕಾದು ನೋಡಬೇಕು.

suddiyaana