ಬಾ.. ಔಟಿಂಗ್‌ ಹೋಗೋಣ ಅಂದ್ದಿದ್ದಕ್ಕೆ ಒಲ್ಲೆ ಎಂದ ಪ್ರೇಯಸಿ.. – ಸಿಟ್ಟಿಗೆದ್ದ ಪಾಗಲ್‌ ಪ್ರೇಮಿ ಮಾಡಿದ್ದೇನು ಗೊತ್ತಾ?

ಬಾ.. ಔಟಿಂಗ್‌ ಹೋಗೋಣ ಅಂದ್ದಿದ್ದಕ್ಕೆ ಒಲ್ಲೆ ಎಂದ ಪ್ರೇಯಸಿ.. – ಸಿಟ್ಟಿಗೆದ್ದ ಪಾಗಲ್‌ ಪ್ರೇಮಿ ಮಾಡಿದ್ದೇನು ಗೊತ್ತಾ?

ಪ್ರೀತಿ ಇದೊಂದು ಪವಿತ್ರವಾದ ಬಂಧ. ಅದ್ಭುತವಾದ ಅನುಭವ. ಪ್ರೀತಿಲಿ ಗೆದ್ದೋರು ಪ್ರೀತಿಯ ಸಂಬಂಧವನ್ನು ಪವಿತ್ರ ಅಂದ್ರೆ, ಪ್ರೀತಿಲಿ ಸೋತೋರು, ಪ್ರೀತಿ ಮಾಡದವರು ಅದನ್ನ ವಿಚಿತ್ರ ಅಂತಾರೆ. ಆದರೆ ಪ್ರತಿಯೊಬ್ಬರ ಜೀವನದಲ್ಲಿ ಒಂದು ಬಾರಿಯಾದರೂ ಪ್ರೀತಿ ಆಗಿರುತ್ತದೆ. ಹಿಂದೆಲ್ಲಾ ಪ್ರೀತಿಯಲ್ಲಿ ಬಿದ್ದವರು ಕದ್ದುಮುಚ್ಚಿ ಓಡಾಡುತ್ತಿದ್ದರು. ಯಾರೂ ನೋಡಬಾರದು, ಯಾರಿಗೂ ಗೊತ್ತಾಗಬಾರದು ಅಂತಾ ಪ್ರೀತಿಯನ್ನು ಗೌಪ್ಯವಾಗಿ ಇಡುತ್ತಿದ್ದರು. ಆದರೆ ಈಗೀಗ ಟ್ರೆಂಡ್‌ ಬದಲಾಗಿದೆ. ತನ್ನ ಸಂಗಾತಿಯೊಂದಿಗೆ ಊರುರೂ ಸುತ್ತುತ್ತಾರೆ. ಸಮಯ ಎಷ್ಟೇ ಆಗಲಿ, ಎಂತಹ ಸಂದರ್ಭ ಇರಲಿ. ಮೀಟ್‌ ಆಗ್ತಿಯಾ.. ನಿನ್ನ ನೋಡ್ಬೇಕು ಅಂತಾ ಹೇಳಿದ ಕೂಡಲೇ ತನ್ನ ಪ್ರೇಮಿ ಇರುವ ಕಡೆ ಹೋಗಿ ಭೇಟಿ ಆಗ್ತಾರೆ. ಇಲ್ಲೊಬ್ಬ ಪಾಗಲ್‌ ಪ್ರೇಮಿ ತನ್ನ ಪ್ರೇಯಸಿಯನ್ನು ಔಟಿಂಗ್‌ ಹೋಗೋಣ ಅಂತಾ ಹೇಳಿದ್ದಾಳೆ. ಆದ್ರೆ ಆಕೆ ಇದಕ್ಕೆ ಒಲ್ಲೆ ಎಂದಿದ್ದಾಳೆ. ಇದ್ರಿಂದ ಸಿಟ್ಟಿಗೆದ್ದ ಆತ ಪಿಜಿ ಮೇಲೆ ಕಲ್ಲೆಸೆದು ಧರ್ಮೇದೇಟು ತಿಂದಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮತ್ತೊಂದು ಅಗ್ನಿ ಅವಘಡ! – ಮನೆಯ ಸಿಲಿಂಡರ್​ ಸ್ಫೋಟ

ಹೌದು, ತನ್ನ ಲವರ್ ಔಟಿಂಗ್ ಬರಲಿಲ್ಲ ಅಂತಾ ಆಕೆ ಕೆಲಸ ಮಾಡುತ್ತಿದ್ದ ಕಟ್ಟಡಕ್ಕೆ ಯುವಕನೊಬ್ಬ ಕಲ್ಲು ತೂರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗದಲ್ಲಿ ನಡೆದಿದೆ. ಕಲ್ಲೆಸೆತದಿಂದ ಕಟ್ಟಡದ ಗಾಜು ಪುಡಿಯಾಗಿದ್ದರಿಂದ ಸಾರ್ವಜನಿಕರು ಯುವಕನಿಗೆ ಧರ್ಮದೇಟು ನೀಡಿದ್ದಾರೆ.

ಸುಳ್ಯ ನಿವಾಸಿ ವಿವೇಕ್ (18) ಸುರೇಶ್ ಶೆಟ್ಟಿ ಎಂಬುವವರು ಮಂಗಳೂರಿನಲ್ಲಿ ನಡೆಸುತ್ತಿದ್ದಾರೆ. ಈ ಪಿಜಿಯಲ್ಲಿ ಯುವತಿಯೊಬ್ಬಳು ಕೆಲಸ ಮಾಡುತ್ತಿದ್ದಳು. ಈ ಯುವತಿಯೊಂದಿಗೆ ಯುವಕ ಪ್ರೀತಿಯಲ್ಲಿ ಬಿದ್ದಿದ್ದ. ಅದರಂತೆ ನಿನ್ನೆ (ನವೆಂಬರ್ 3) ಸಂಜೆ ಔಟಿಂಗ್​ಗೆ ಬರುವಂತೆ ಕರೆ ಮಾಡಿದ್ದಾನೆ. ಆದರೆ, ಯುವತಿ ಔಟಿಂಗ್ ಬರಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪ್ರಿಯಕರ ವಿವೇಕ್, ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ. ಘಟನೆಯಲ್ಲಿ ಕಟ್ಟಡದ ಗಾಜು ಪುಡಿಯಾಗಿದ್ದು, ಸಾರ್ವಜನಿಕರು ವಿವೇಕ್​ನನ್ನು ಹಿಡಿದು ಥಳಿಸಿದ್ದಾರೆ.

Shwetha M