ಲಂಕಾ ಸರಣಿಯಲ್ಲಿ ಸೂರ್ಯನ ಮುಂದಿರೋ ಸವಾಲುಗಳೆಷ್ಟು?

ಲಂಕಾ ಸರಣಿಯಲ್ಲಿ ಸೂರ್ಯನ ಮುಂದಿರೋ ಸವಾಲುಗಳೆಷ್ಟು?

ಬಲಿಷ್ಠ ತಂಡದೊಂದಿಗೆ ಶ್ರೀಲಂಕಾಗೆ ಹಾರಿರುವ ಟೀಂ ಇಂಡಿಯಾ ಟಿ-20 ಹಾಗೂ ಏಕದಿನ ಸರಣಿ ಗೆಲ್ಲೋ ಉತ್ಸಾಹದಲ್ಲಿದೆ. ಜಸ್ಟ್ ಇನ್ನೆರಡು ದಿನಗಳಲ್ಲೇ ಟಿ-20 ಕದನ ಶುರುವಾಗಲಿದೆ. ಈ ಸರಣಿ ಆಟಗಾರರ ಜೊತೆಗೆ ನೂತನ ಕೋಚ್ ಗೌತಮ್ ಗಂಭೀರ್​ಗೂ ಕೂಡ ತುಂಬಾನೇ ಮಹತ್ವದ್ದಾಗಿದೆ. ಅದ್ರಲ್ಲೂ ಸೂರ್ಯಕುಮಾರ್ ಯಾದವ್ ಮೇಲೆ ತುಂಬಾನೇ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜೊತೆ ಜೊತೆಗೆ ಸಾಲು ಸಾಲು ಸವಾಲುಗಳು ಸೂರ್ಯನ ಮುಂದಿವೆ. ಜುಲೈ 27 ರಿಂದ ಇಂಡೋ-ಲಂಕಾ ಚುಟುಕು ದಂಗಲ್​ ಆರಂಭಗೊಳ್ಳಲಿದ್ದು, ಮೆನ್​ ಇನ್​​ ಬ್ಲೂ ಪಡೆ ಈಗಾಗ್ಲೇ ಸಿಂಹಳೀಯರ ನಾಡಿಗೆ ಕಾಲಿಟ್ಟಿದೆ. ಗಂಭೀರ್ ಉಸ್ತುವಾರಿಯಲ್ಲಿ ಈಗಾಗ್ಲೇ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಇಲ್ಲಿಂದಲೇ ಸೂರ್ಯಕುಮಾರ್ ಯಾದವ್​​​ ಫುಲ್​ಟೈಮ್​​ ಟಿ20 ಕ್ಯಾಪ್ಟನ್ ಆಗಿ ಅಧಿಕೃತವಾಗಿ ಚಾರ್ಜ್​ ತೆಗೆದುಕೊಳ್ಳಲಿದ್ದಾರೆ. ಮೊದಲ ಟಾಸ್ಕ್​​ನಲ್ಲೇ ಸ್ಕೈಗೆ ಸಾಲು ಸಾಲು ಚಾಲೆಂಜಸ್​ಗಳಿದ್ದು, ಹೇಗೆ ಫೇಸ್ ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿಯೂ ಹುಟ್ಟಿಕೊಂಡಿದೆ.

ಇದನ್ನೂ ಓದಿ: ಪಾಕ್ ಗೆ ಬರುವಂತೆ ಭಾರತವನ್ನು ಒಪ್ಪಿಸಿ ಎಂದು ICC ಬೆನ್ನು ಬಿದ್ದ PCB

ಸೂರ್ಯನಿಗೆ ಸಾಲು ಸಾಲು ಸವಾಲು!

ಲಂಕಾ ಸರಣಿ ಮೂಲಕ ಟೀಂ ಇಂಡಿಯಾ ಟಿ-20 ಫಾರ್ಮೆಟ್​ಗೆ ಫುಲ್ ಟೈಮ್​ ಕ್ಯಾಪ್ಟನ್​​​​ ಆಗಿ ಆಯ್ಕೆಯಾದ ಸೂರ್ಯಕುಮಾರ್ ಯಾದವ್​​​ಗೆ ಹೆಚ್ಚು ತಂಡ ಮುನ್ನಡೆಸಿದ ಅನುಭವವಿಲ್ಲ. ಹಂಗಾಮಿ ಕ್ಯಾಪ್ಟನ್​ ಆಗಿ ಈವರೆಗೆ 7 ಪಂದ್ಯಗಳಲ್ಲಿ ಭಾರತ ತಂಡವನ್ನ ಮುನ್ನಡೆಸಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ತಂಡದ ಚುಕ್ಕಾಣಿ ಹಿಡಿದಿರೋ ಸೂರ್ಯನ ಮುಂದೆ ಸಾಮರ್ಥ್ಯ ನಿರೂಪಿಸೋ ಚಾಲೆಂಜ್​ ಇದೆ. ಹಾರ್ದಿಕ್​ ಪಾಂಡ್ಯ ಬದಲಾಗಿ ನಾಯಕತ್ವ ಸೂರ್ಯನಿಗೆ ಸಿಕ್ಕಿರೋದ್ರಿಂದ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡು ತಾನು ನಾಯಕತ್ವಕ್ಕೆ ಅರ್ಹ ಎಂಬ ಸಂದೇಶವನ್ನು ರವಾನಿಸಬೇಕಿದೆ. ಅದ್ರಲ್ಲೂ ಮಾಜಿ ಕ್ಯಾಪ್ಟನ್ ರೋಹಿತ್​ ಶರ್ಮಾರ ಚಾರ್ಮ್ ಕಂಟಿನ್ಯೂ ಮಾಡಬೇಕಾದ ಒತ್ತಡ ಇದೆ. ರೋಹಿತ್​​ ಕಳೆದ 3 ವರ್ಷಗಳಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಯಾವುದೇ ವಿವಾದಕ್ಕೆ ಎಡೆ ಮಾಡಿಕೊಡದೇ ಪ್ಲೇಯರ್ಸ್​ ಕ್ಯಾಪ್ಟನ್​ ಆಗಿ ಗುರುತಿಸಿಕೊಂಡಿದ್ದರು. ಇದೀಗ ಆ ಪರಂಪರೆಯನ್ನ ಉಳಿಸಿ, ಬೆಳೆಸುವ ಸವಾಲು ಸ್ಕೈ ಮುಂದಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕ್ಯಾಪ್ಟನ್ಸಿ ಜೊತೆ ಫಾರ್ಮ್​ ಕೂಡ ಬ್ಯಾಲೆನ್ಸ್ ಮಾಡಿಕೊಳ್ಳಬೇಕಿದೆ. ಬ್ಯಾಟಿಂಗ್​ನಲ್ಲಿ ಸೂರ್ಯನ ಸ್ಥಿರ ಪ್ರದರ್ಶನ ಭಾರತಕ್ಕೆ ಅತಿ ಅವಶ್ಯಕ. ಕ್ಯಾಪ್ಟನ್ಸಿಯಿಂದ ಪರ್ಫಾಮೆನ್ಸ್ ಮೇಲೆ ಎಫೆಕ್ಟ್​​ ಆಗದಂತೆ ನೋಡಿಕೊಳ್ಳಬೇಕಿದೆ. ಹೇಳಿ ಕೇಳಿ ಟೀಂ ಇಂಡಿಯಾ ಹಿರಿಯ ಹಾಗೂ ಕಿರಿಯ ಆಟಗಾರರಿಂದ ಕೂಡಿದೆ. ಹಾರ್ದಿಕ್​ ಪಾಂಡ್ಯ, ಅಕ್ಷರ್ ಪಟೇಲ್​ರಂತ ಸೀನಿಯರ್​ ಪ್ಲೇಯರ್ಸ್​ ಜತೆ ಯಶಸ್ವಿ ಜೈಸ್ವಾಲ್​​​, ರಿಂಕು ಸಿಂಗ್​​​ ರಂತ ಹಲವು ಯುವ ಆಟಗಾರರ ದಂಡಿದೆ. ಇವರ ನಡುವೆ ಸಮನ್ವಯತೆ ಸಾಧಿಸೋದು ಸ್ಕೈಗೆ ಬಿಗ್ಗೆಸ್ಟ್​ ಚಾಲೆಂಜ್ ಆಗಿದೆ. ಇನ್ನು ಈ ಎಲ್ಲಾ ಚಾಲೆಂಜ್​ಗಳಿಗಿಂತ ದೊಡ್ಡ ಚಾಲೆಂಜ್ ಅಂದ್ರೆ ಕಿಂಗ್ ಕೊಹ್ಲಿ ಹಾಗೂ ರೋಹಿತ್​ ಶರ್ಮಾರಂತ ದಿಗ್ಗಜ ಆಟಗಾರರು ಟಿ20 ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದಾರೆ. ಇಬ್ಬರೂ ತಂಡಕ್ಕೆ ಆಧಾರ ಸ್ತಂಭವಾಗಿದ್ರು. ಇವರಿಲ್ಲದೇ ಭಾರತ ತಂಡ ಮೊದಲ ಸರಣಿ ಆಡುತ್ತಿದೆ. ಆನ್​ಫೀಲ್ಡ್​ ಇರಬಹುದು, ಆಫ್​ ದ ಫೀಲ್ಡ್​ ಇರಬಹುದು. ಡ್ರೆಸ್ಸಿಂಗ್​ ರೂಮ್​ನಲ್ಲಿ ಜೋಡೆತ್ತುಗಳ ಕೊರತೆ ಕಾಡೇ ಕಾಡುತ್ತೆ. ಆಟದ ಜೊತೆ ಅವರ ಅನುಭವವನ್ನ ತಂಡ ಕಳೆದುಕೊಳ್ಳಲಿದ್ದು, ನ್ಯೂ ಕ್ಯಾಪ್ಟನ್ ಇದನ್ನ ಹೇಗೆ ನಿಭಾಯಿಸ್ತಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.

ಇಂಡೋ-ಲಂಕಾ ಟಿ20 ಸರಣಿ ಆರಂಭಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಸೂಪರ್​ ಶನಿವಾರ ಚುಟುಕು ದಂಗಲ್​ಗೆ ಕಿಕ್​ ಸ್ಟಾರ್ಟ್ ಸಿಗಲಿದೆ. ಈಗಾಗಲೇ ಸಿಂಹಳೀಯರ ನಾಡಿಗೆ ಕಾಲಿಟ್ಟಿರೋ ಟೀಮ್​ ಇಂಡಿಯಾ ಅಭ್ಯಾಸದ ಕಣಕ್ಕೂ ಇಳಿದಿದೆ. ಹೊಸ ಕೋಚ್​ ಗೌತಮ್​ ಗಂಭೀರ್​, ಹೊಸ ಕ್ಯಾಪ್ಟನ್​ ಸೂರ್ಯ ಕುಮಾರ್​​ ಯಾದವ್​ ಮಾರ್ಗದರ್ಶನದಲ್ಲಿ ನೆಟ್ಸ್​​ನಲ್ಲಿ ಬೆವರಿಳಿಸಿದೆ. ಸರ್​ಪ್ರೈಸ್ ರೀತಿಯಲ್ಲಿ ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ಸಿ ಪಟ್ಟಕ್ಕೇರಿದ ಸೂರ್ಯಕುಮಾರ್​ ಮುಂದಿರೋ ಹಾದಿಯಂತೂ ಸುಲಭ ಇಲ್ಲ. ಆದ್ರೆ ಈ ಹಿಂದೆ ನಡೆದಿದ್ದ ಶ್ರೀಲಂಕಾ ವಿರುದ್ಧ ಟಿ-20 ಪಂದ್ಯಗಳಲ್ಲಿ ಸೂರ್ಯಕುಮಾರ್ ಬೆಂಕಿ ಚೆಂಡಿನಂತೆ ಅಬ್ಬರಿಸಿದ್ದಾರೆ. ಶ್ರೀಲಂಕಾ ಎದುರು 5 T20 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿರುವ ಸೂರ್ಯ, 254 ರನ್​ ಕಲೆ ಹಾಕಿದ್ದಾರೆ. 1 ಶತಕ, 1 ಅರ್ಧಶತಕ ಸಿಡಿಸಿ ಮಿಂಚಿರುವ ಮಿಸ್ಟರ್​ 360 ಡಿಗ್ರಿ ಬ್ಯಾಟರ್, 17 ಬೌಂಡರಿ, 15 ಸಿಕ್ಸರ್​ ಚಚ್ಚಿದ್ದು,​​ 158.75ರ ಸ್ಟ್ರೈಕ್​ರೇಟ್​ ಹೊಂದಿದ್ದಾರೆ. ಆದ್ರೆ ಈ ಬಾರಿ ಶ್ರೀಲಂಕಾ ತಂಡ ಅಷ್ಟು ಸುಲಭಕ್ಕೆ ಶರಣಾಗಲು ಸಿದ್ಧವಿಲ್ಲ. ಸೂರ್ಯನನ್ನ ಕಟ್ಟಿ ಹಾಕಲು ಬಲಿಷ್ಟ ಬೌಲಿಂಗ್​ ಪಡೆಯನ್ನೇ ಫೀಲ್ಡ್​ಗಿಳಿಸಿದೆ. ಸೋ ಇದನ್ನೆಲ್ಲಾ ಹೇಗೆ ಮೆಟ್ಟಿ ನಿಲ್ತಾರೆ ಅನ್ನೋದನ್ನ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *