ಅತ್ತಿಗೆ, ಇಬ್ಬರು ಮಕ್ಕಳನ್ನು ಕೊಚ್ಚಿ ಕೊಂದ ಮೈದುನ – ಚಿಕ್ಕಪ್ಪ ಅಂತಾ ಪ್ರೀತಿಯಿಂದ ಕರೆಯುತ್ತಿದ್ದ ಮಕ್ಕಳನ್ನೇ ಕೊಂದ್ಯಲ್ಲೋ ಕಟುಕ..!

ಅತ್ತಿಗೆ, ಇಬ್ಬರು ಮಕ್ಕಳನ್ನು ಕೊಚ್ಚಿ ಕೊಂದ ಮೈದುನ – ಚಿಕ್ಕಪ್ಪ ಅಂತಾ ಪ್ರೀತಿಯಿಂದ ಕರೆಯುತ್ತಿದ್ದ ಮಕ್ಕಳನ್ನೇ ಕೊಂದ್ಯಲ್ಲೋ ಕಟುಕ..!

ಆತನ ಅಣ್ಣ ದೂರ ದುಬೈನಲ್ಲಿ ದುಡಿಯುತ್ತಿದ್ದಾನೆ. ಈತನಿಗೂ ಕೇವಲ 35 ವರ್ಷ. ಆದರೆ, ಅದೆಂಥಾ ದ್ವೇಷವೋ.. ಅಣ್ಣನ ಹೆಂಡತಿಯನ್ನು ಕೊಚ್ಚಿ ಕೊಂದಿದ್ದಾನೆ. ಅಷ್ಟಕ್ಕೆ ಸುಮ್ಮನಾಗಲಿಲ್ಲ ಆ ಪಾಪಿ. ಬಾಳಿ ಬದುಕಬೇಕಾದ ಇಬ್ಬರು ಮುದ್ದಾದ ಮಕ್ಕಳನ್ನು ಕೂಡಾ ಕೊಚ್ಚಿ ಕೊಂದಿದ್ದಾನೆ ಕಟುಕ.

ಇದನ್ನೂ ಓದಿ: ಚಾಡಿ ಮಾತು ಕೇಳಿ ಸೊಸೆ ಸಾಯುವಂತೆ ಮಾಡಿದ ಪಾಪಿಗಳು..! – ಐಶ್ವರ್ಯಾ ಸಾವಿಗೆ ಕಾರಣರಾದವರನ್ನು ಬಂಧಿಸಿದ ಪೊಲೀಸರು

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದ ಜನ ಬೆಚ್ಚಿಬಿದ್ದಿದ್ದರು. ಒಂದೇ ಮನೆಯಲ್ಲಿ ಮೂವರ ಕೊಲೆ ನಡೆದಿತ್ತು. ಅದು ಕೂಡಾ ಕೊಲೆಗಾರ ಕೂಡಾ ಹೊರಗಿನವನು ಅಲ್ಲ. ತಮ್ಮನೇ ತನ್ನ ಅಣ್ಣನ ಹೆಂಡತಿ ಮತ್ತು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿದ್ದ. ತನ್ನ ಅಣ್ಣನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಮೈದುನನೇ ಕೊಚ್ಚಿ ಕೊಂದಿದ್ದ. 32 ವರ್ಷದ ಗೀತಾ ಮತ್ತು ಇವರ ಮಕ್ಕಳಾದ 10 ವರ್ಷದ ಅಕುಲ್ , 7 ವರ್ಷದ ಅಂಕಿತಾ 7 ಕೊಲೆಯಾದ ದುರ್ದೈವಿಗಳು. 35 ವರ್ಷದ ಕುಮಾರಗೌಡ ಮೂವರನ್ನು ಕೊಲೆ ಮಾಡಿ ಪರಾರಿಯಾಗಿರುವ ಮೈದುನ. ಅಮ್ಮನಂತಿರುವ ಅತ್ತಿಗೆಯನ್ನು ಕೊಂದ ಪಾಪಿಗೆ ಮಕ್ಕಳ ಮೇಲೂ ಅದೆಂಥಾ ದ್ವೇಷವೋ.. ಚಿಕ್ಕಪ್ಪ ಚಿಕ್ಕಪ್ಪ ಅಂತಾ ಕರೆಯುತ್ತಿದ್ದ ಮುದ್ದು ಕಂದಮ್ಮಗಳ ರಕ್ತವನ್ನು ಚೆಲ್ಲಿದಾನೆಂದರೆ ಈತ ಕಟುಕನೇ ಇರಬೇಕು.

ಮೃತ ಗೀತಾಳ ಪತಿ ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊನ್ನೇಗೌಡನ ವ್ಯವಹಾರವನ್ನೆಲ್ಲಾ ಕುಮಾರಗೌಡನೇ ನೋಡಿಕೊಳ್ಳುತ್ತಿದ್ದನಂತೆ. ಈ ಬಾರಿ ಊರಿಗೆ ಬಂದಾಗ ಹೊನ್ನೇಗೌಡ ವ್ಯವಹಾರವನ್ನು ತನ್ನ ಪತ್ನಿ ಗೀತಾಳ ಹೆಸರಿನಲ್ಲಿ ನಡೆಸುವಂತೆ ಹೇಳಿದ್ದನಂತೆ. ಇದೇ ಸಿಟ್ಟಲ್ಲಿಯೇ ಅಣ್ಣನ ಪತ್ನಿ ಮತ್ತು ಮಕ್ಕಳನ್ನು ಈತ ಕೊಲೆ ಮಾಡಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಾನಗಲ್ ಠಾಣಾ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Sulekha