ಇಂದು ಮಹಾಲಯ ಅಮಾವಾಸ್ಯೆ – ಈ ದಿನ ಏನು ಮಾಡಬೇಕು.? ಏನು ಮಾಡಬಾರದು.?

ಇಂದು ಮಹಾಲಯ ಅಮಾವಾಸ್ಯೆ.. ಮಹಾಲಯ ಅಮಾವಾಸ್ಯೆಯು ಪಿತೃ ಪಕ್ಷದ ಅಂತ್ಯವನ್ನು ಸೂಚಿಸುವ ದಿನವಾಗಿದೆ. ಒಂದೆಡೆ ಮಹಾಲಯ ಅಮಾವಾಸ್ಯೆ ಪಿತೃ ಪಕ್ಷದ ಮುಕ್ತಾಯವನ್ನು ಸೂಚಿಸಿದರೆ, ಮತ್ತೊಂದೆಡೆ ಭೂಮಿಗೆ ದುರ್ಗಾ ದೇವಿಯ ಆಹ್ವಾನಕ್ಕಾಗಿ ನವರಾತ್ರಿ ಹಬ್ಬವನ್ನು ಆಚರಿಸಲಾಗುವುದು. ಇದನ್ನು ದೇಶದ ಎಲ್ಲಾ ಭಾಗಗಳಲ್ಲೂ ಆಚರಿಸಲಾಗುತ್ತದೆಯೋ ಬಂಗಾಳದಲ್ಲಿ ದುರ್ಗಾ ಪೂಜೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಈ ದಿನದಂದು, ಭಕ್ತರು ತಮ್ಮ ಪೂರ್ವಜರನ್ನು ಗೌರವಿಸಲು ತರ್ಪಣ ಆಚರಣೆಗಳನ್ನು ಮಾಡುತ್ತಾರೆ, ಹಿಂದಿನ ತಪ್ಪುಗಳಿಗೆ ಕ್ಷಮೆ ಯಾಚಿಸುತ್ತಾರೆ ಮತ್ತು ದೈವಿಕ ಆಶೀರ್ವಾದಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ. ಕಳೆದ 15 ದಿನಗಳಿಂದ ಪಿತೃಗಳಿಗೆ ಅನ್ನ ನೀರನ್ನ ಕೊಟ್ಟಿದ್ದು, ಇಂದು ಇದು ಮುಕ್ತಾಯ ಆಗಲಿದೆ.
ಇದನ್ನೂ ಓದಿ: ಬಿಸಿ ನೀರಿನಲ್ಲಿ ಸ್ನಾನ ಮಾಡ್ತೀರಾ? – ಎಚ್ಚರ ಈ ಸಮಸ್ಯೆ ನಿಮ್ಮನ್ನ ಕಾಡಬಹುದು!
ಮಹಾಲಯ ಅಮಾವಾಸ್ಯೆಯನ್ನು ನವರಾತ್ರಿ ಮತ್ತು ದುರ್ಗಾ ಪೂಜೆಗೆ ಆಹ್ವಾನದ ದಿನವೆಂದು ಪರಿಗಣಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ, ಈ ದಿನದಂದು ದುರ್ಗಾ ದೇವಿಯು ಭೂಮಿಗೆ ಇಳಿಯುತ್ತಾಳೆ ಎಂದು ನಂಬಲಾಗಿದೆ. ಆಧ್ಯಾತ್ಮಿಕವಾಗಿ, ಇದು ಪೂರ್ವಜರಿಗೆ ಕೃತಜ್ಞತೆಯನ್ನು ಮತ್ತು ಕತ್ತಲೆಯಿಂದ ಭಕ್ತಿ ಮತ್ತು ಹಬ್ಬಗಳ ಬೆಳಕಿಗೆ ಪರಿವರ್ತನೆಯನ್ನು ಸಂಕೇತಿಸುತ್ತದೆ.
ಮಹಾಲಯ ಅಮಾವಾಸ್ಯೆ ದಿನ ಏನು ಮಾಡಬೇಕು.? ಏನು ಮಾಡಬಾರದು.?
ಮಹಾಲಯ ಅಮಾವಾಸ್ಯೆ ದಿನದಂದು ತಿಳಿದೋ ಅಥವಾ ತಿಳಿಯದೆಯೋ ಯಾರ ಮನಸ್ಸಿಗೂ ನೋವುಂಟು ಮಾಡಬಾರದು. ನಿಮ್ಮ ಮನಸ್ಸಿನಲ್ಲಿ ಕೋಪ, ದ್ವೇಷ ಅಥವಾ ಮಾನಸಿಕ ನೋವನ್ನು ಇಟ್ಟುಕೊಳ್ಳಬೇಡಿ. ಶುಚಿತ್ವವನ್ನು ಪೂರ್ವಜರಿಗೆ ಗೌರವದ ಸಂಕೇತವೆಂದು ಪರಿಗಣಿಸಲಾಗಿರುವುದರಿಂದ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಿ. 2025 ಮಹಾಲಯ ಅಮಾವಾಸ್ಯೆಯ ದಿನದಂದು ನಾವು ಈ ಮೇಲಿನ ಶುಭ ಮುಹೂರ್ತದಲ್ಲೇ ನಮ್ಮ ಪಿತೃಗಳಿಗೆ ಪಿಂಡದಾನವನ್ನು ಮಾಡಬೇಕು. ಪಿತೃ ಪಕ್ಷದ 15 ದಿನಗಳ ಅವಧಿಯಲ್ಲಿ ನಿಮಗೆ ಪಿತೃಗಳ ಶ್ರಾದ್ಧ ಅಥವಾ ಪಿಂಡದಾನ ಮಾಡಲು ಸಾಧ್ಯವಾಗದೇ ಇದ್ದರೆ ಇವತ್ತು ಆ ಕೆಲಸವನ್ನು ಮಾಡುವುದು ಉತ್ತಮ.

ನೋಡಿರಿ

