ಚಳಿಗಾಲಕ್ಕೂ ಮುನ್ನವೇ ರಾಜ್ಯದಲ್ಲಿ  `ಮದ್ರಾಸ್ ಐ’ಕಂಟಕ – ಮಕ್ಕಳೇ ಇದರ ಟಾರ್ಗೆಟ್‌!

ಚಳಿಗಾಲಕ್ಕೂ ಮುನ್ನವೇ ರಾಜ್ಯದಲ್ಲಿ  `ಮದ್ರಾಸ್ ಐ’ಕಂಟಕ – ಮಕ್ಕಳೇ ಇದರ ಟಾರ್ಗೆಟ್‌!

ಬೆಂಗಳೂರು: ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ `ಮದ್ರಾಸ್ ಐ’ಈಗ ಮಳೆಗಾಲದಲ್ಲೇ ಎಂಟ್ರಿಕೊಟ್ಟಿದ್ದು, ರಾಜ್ಯದ ಜನರನ್ನು ಆತಂಕಕ್ಕೀಡು ಮಾಡಿದೆ. ಅವಧಿಗೂ ಮುನ್ನವೇ ಈ ರೋಗ ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಕ್ಕಳೇ ಟಾರ್ಗೆಟ್‌ ಎನ್ನಲಾಗುತ್ತಿದೆ.

ಕಂಜಕ್ಟಿವೈಟಿಸ್ ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ `ಕಣ್ಣು’ ವೈರಾಣುಗಳಿಂದ ಹರಡುವ ಕಣ್ಣಿನ ಸಮಸ್ಯೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಅಥವಾ ಚಳಿ ವಾತಾವರಣದಲ್ಲಿ ಹುಟ್ಟಿಕೊಳ್ಳುವ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಉಂಟು ಮಾಡುತ್ತವೆ. ಅವಧಿಗೂ ಮುನ್ನವೇ ರಾಜ್ಯದಲ್ಲಿ ಮದ್ರಾಸ್ ಐ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿದಿನ 60 ರಿಂದ 80 ಕೇಸ್‌ಗಳು ರಾಜ್ಯದಲ್ಲಿ ದಾಖಲಾಗುತ್ತಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಮಳೆ – ಮುಂದಿನ 1 ವಾರ ರಾಜ್ಯಾದ್ಯಂತ ಹೈ ಅಲರ್ಟ್

ಜುಲೈ ಆರಂಭದಿಂದಲೂ ರಾಜ್ಯಾದ್ಯಂತ ಮಳೆ ಸುರಿಯುತ್ತಿದ್ದು, ಸೂರ್ಯನ ಕಿರಣಗಳ ದರ್ಶನ ಕಡಿಮೆಯಾಗಿದೆ. ಇದರ ಪರಿಣಾಮ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ, ಅವಧಿಗೂ ಮೊದಲೇ ಮದ್ರಾಸ್ ಐ ವೈರಾಣು ಎಂಟ್ರಿ ಕೊಟ್ಟಿದೆ. ತಮಿಳುನಾಡು, ದೆಹಲಿಯಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಇದೀಗ ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆ.

ಈ ವರ್ಷವೂ ಹಿರಿಯರಿಗಿಂತಲೂ ಹೆಚ್ಚಾಗಿ ಮಕ್ಕಳು ಮದ್ರಾಸ್‌ ಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಿಲ್ಲೆಯ ಶಾಲೆ, ಕಾಲೇಜುಗಳಲ್ಲಿಮದ್ರಾಸ್‌ಐ ಹೊಂದಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಕೆಲ ಶಾಲೆಗಳಲ್ಲಿಕಣ್ಣಿನ ಸಮಸ್ಯೆ ಇರುವ ಮಕ್ಕಳನ್ನು ಮನೆಗೆ ಕಳುಹಿಸುತ್ತಿದ್ದಾರೆ. ಶಾಲೆ ಮಾತ್ರವಲ್ಲದೆ ವಸತಿಯುತ ಶಾಲೆ, ಕಾಲೇಜುಗಳ ಹಾಸ್ಟೆಲ್‌ಗಳಲ್ಲೂಈ ಸಮಸ್ಯೆ ತೀವ್ರವಾಗಿದೆ. ಶಾಲಾ ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಒಟ್ಟಿಗೇ ಕೂರುವುದು ಹಾಗೂ ಪೆನ್‌, ಪುಸ್ತಕ ಮತ್ತಿತರ ವಸ್ತುಗಳನ್ನು ಶೇರ್‌ ಮಾಡುವುದರಿಂದ ವೈರಾಣುಗಳು ವ್ಯಾಪಕವಾಗಿ ಹರಡುತ್ತಿವೆ.

ಹರಡುವ ವೇಗ ತೀವ್ರ

”ಮದ್ರಾಸ್‌ ಐಗೆ ಕಾರಣವಾಗುವ ವೈರಸ್‌ಗಳು ವೇಗವಾಗಿ ಹರಡುತ್ತವೆ. ಶಾಲೆ, ಹಾಸ್ಟೆಲ್‌ಗಳಲ್ಲಿ ಮಕ್ಕಳು ಗುಂಪು ಸೇರುವುದರಿಂದ ಹರಡುವಿಕೆ ವೇಗ ತೀವ್ರವಾಗುತ್ತದೆ. ಹಾಗಂತ ಈ ವೈರಸ್‌ಗಳು ಗಾಳಿ ಮೂಲಕ ಹರಡುವುದಿಲ್ಲ. ಸೋಂಕಿತ ಕಣ್ಣುಗಳನ್ನು ದಿಟ್ಟಿಸಿ ನೋಡಿದರೆ ಮದ್ರಾಸ್‌ ಐ ಬರುವುದಿಲ್ಲ. ನೀರು ಈ ವೈರಸ್‌ ಹರಡುವ ಮೂಲ. ಜತೆಗೆ ವಸ್ತುಗಳನ್ನು ಶೇರ್‌ ಮಾಡುವುದು, ಹೆಚ್ಚು ಜನರ ಭೇಟಿ, ಸಂಪರ್ಕದಿಂದ ಬೇಗ ವ್ಯಾಪಿಸುತ್ತದೆ. ವೈರಲ್‌ ಸಮಸ್ಯೆ ಆಗಿರುವ ಕಾರಣ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಮುನ್ನೆಚ್ಚರಿಕೆಯೇ ಮದ್ದು. ಮನೆ ಮದ್ದು ಮೊರೆ ಹೋಗದೆ ವೈದ್ಯರ ಬಳಿ ತೋರಿಸಿ ಎಂದು ವೈದ್ಯರು ತಿಳಿಸಿದ್ದಾರೆ.

ಮದ್ರಾಸ್ ಲಕ್ಷಣಗಳೇನು?

  • ಕಸ ಬಿದ್ದಾಗ ಆಗುವ ರೀತಿಯಲ್ಲೇ ಕಣ್ಣು ಚುಚ್ಚುವುದು.
  • ಬೆಳಗ್ಗೆ ಎದ್ದಾಗ ಹೆಚ್ಚು ಪಿಸುರು (ಪಿಚ್ಚು) ಬರುತ್ತದೆ. ಕಣ್ಣುಗಳು ಕೆಂಪಾಗಿ, ಕಿರಿಕಿರಿ ಹೆಚ್ಚುವುದು.
  • ಕಣ್ಣಲ್ಲಿನೀರು ಬರುವುದು.
  • ರೆಪ್ಪೆ, ಕಣ್ಣು ದಪ್ಪ ಆಗುವುದು

ಮದ್ರಾಸ್ಐಗೆ ಪರಿಹಾರ ಏನು?

  • ಸಮಸ್ಯೆ ಉಳ್ಳವರು ಇತರರಿಂದ ದೂರ ಇರಬೇಕು.
  • ವೈದ್ಯರ ಬಳಿ ತೋರಿಸಿ, ಐ ಡ್ರಾಫ್ಸ್‌ ಮಾತ್ರ ಹಾಕಬೇಕು.
  • ಸಮಸ್ಯೆ ಕಡಿಮೆ ಆಗುವವರೆಗೆ ಗಾಳಿಗೆ ಹೋಗಬಾರದು.
  • ದ್ವಿಚಕ್ರ ವಾಹನ ಓಡಿಸಬಾರದು.
  • ಸ್ಕ್ರೀನ್‌ ಟೈಮ್‌ ಕಡಿಮೆ ಮಾಡಿ ಕಣ್ಣಿಗೆ ವಿಶ್ರಾಂತಿ ಕೊಡಬೇಕು

ಮದ್ರಾಸ್ ಮುನ್ನೆಚ್ಚರಿಕೆ ಕ್ರಮಗಳು

  • ಸಮಸ್ಯೆ ಇರುವವರು ಕೆಲ ದಿನ ಪ್ರತ್ಯೇಕ ವಾಸ ಮಾಡಿ.
  • ಸಮಸ್ಯೆ ಇರುವವರು ಬಳಸಿದ ಯಾವುದೇ ವಸ್ತು ಇತರರು ಬಳಸಬೇಡಿ
  • ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಕಣ್ಣಿಗೆ ಔಷಧ ಹಾಕಬೇಡಿ
  • ಕಣ್ಣು ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಿ
  • ದಿನಕ್ಕೆ 8-10 ಬಾರಿ ಸ್ಯಾನಿಟೈಸರ್‌, ಸೋಪು ಬಳಸಿ ಕೈ ತೊಳೆದುಕೊಳ್ಳಿ

suddiyaana