ಮಾತಾಡದೇ ಕನ್ನಡಿಗರ ಮನಗೆದ್ದ ಮಾದೇವ – ವಿಲನ್ ಆಗಿ ಶ್ರುತಿ ಅಬ್ಬರ, ಖಡಕ್ ಖಾಕಿಯಾಗಿ ಮಾಲಾಶ್ರೀ ಖದರ್

ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೇ ಚಿತ್ರಕ್ಕಾಗಿ ಪ್ರೇಕ್ಷಕರು ಕಾಯುತ್ತಿರುವಾಗಲೇ ಮಾದೇವ ಚಿತ್ರ ಎಲ್ಲರ ಮನಗೆದ್ದಿದೆ. ಮಾದೇವ ಚಿತ್ರಕ್ಕೆ ಸಿನಿಮಾ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ವಿನೋದ್ ಪ್ರಭಾಕರ್ ಕೂಡಾ ತಮ್ಮ ವೃತ್ತಿ ಬದುಕಿನಲ್ಲಿ ಸಕ್ಸಸ್ಗಾಗಿ ಕಾಯುತ್ತಿದ್ದರು. ಮಾದೇವನ ಮೂಲಕ ವಿನೋದ್ ಪ್ರಭಾಕರ್ ಕೂಡಾ ಸಕ್ಸಸ್ ಸಿಗುವ ಲಕ್ಷಣಗಳು ಕಾಣುತ್ತಿದೆ.
ಇದನ್ನೂ ಓದಿ: ಭಾವನಾಗೆ ಸೈಕೋ ಜಯಂತ್ ಬಲೆ.. ಸಿದ್ದೇಗೌಡರಿಗಾಗಿ ಇದೆಂಥಾ ತ್ಯಾಗ? – ಅಕ್ಕನ ರಕ್ಷಿಸ್ತಾಳಾ ಜಾನು?
ಸ್ಯಾಂಡಲ್ವುಡ್ನಲ್ಲಿ ಮಾದೇವನ ಜಪ ಶುರುವಾಗಿದೆ. ಮಾದೇವ ಸಿನಿಮಾದಲ್ಲಿ ಊಹಿಸಲು ಆಗದ.. ಕುತೂಹಲಭರಿದ ಕ್ಲೈಮ್ಯಾಕ್ಸ್ ಇದೆ. ಜೊತೆಗೆ ಸಿನಿಮಾದ ಕೊನೆಯಲ್ಲಿ ಯಾರೂ ನಿರೀಕ್ಷಿಸದ ಟ್ವಿಸ್ಟ್ ಕೂಡಾ ಇದೆ. ಇದೇ ವಿಚಾರವೇ ಮಾದೇವ ಸಿನಿಮಾ ಸಕ್ಸಸ್ಗೂ ಕಾರಣವಾಗುತ್ತಿದೆ. ಮಾದೇವ ಕಲ್ಲು ಹೃದಯದ ಮನುಷ್ಯ. ಮಾತು ಇಲ್ಲ. ಮೌನವೇ ಎಲ್ಲ. ಜೈಲಿನಲ್ಲಿ ಹ್ಯಾಂಗ್ ಮ್ಯಾನ್ ಆಗಿಯೇ ಕೆಲಸ. ಈತನ ಬದುಕಿನಲ್ಲಿ ಪಾರ್ವತಿ ತಂಗಾಳಿಯಾಗಿ ಬರುತ್ತಾಳೆ. ಈಕೆ ಮಾದೇವನ ಬದುಕಲ್ಲಿ ಬಂದ್ಮೇಲೆ ಏನೆಲ್ಲಾ ಆಗುತ್ತದೆ ಅನ್ನೋದೇ ಸಿನಿಮಾ ಕಥೆ.
ಮಾದೇವ ಚಿತ್ರದಲ್ಲಿ ಎಂಡಿಂಗ್ ಬೇರೆನೇ ಇದೆ. ಆದರೆ, ಇದನ್ನ ಹ್ಯಾಪಿ ಎಂಡಿಂಗ್ ಅಂತ ಹೇಳೋಕೆ ಆಗೋದಿಲ್ಲ. ಹಾಗಂತಾ ಎಂಡಿಂಗ್ ಮಾತ್ರ ಸೂಪರ್ ಆಗಿದೆ. ವಿನೋದ್ ಪ್ರಭಾಕರ್ ಅಭಿನಯಕ್ಕೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಭಾವನೆಗಳೇ ಇಲ್ಲದೆ ನಟಿಸೋದು ಅಷ್ಟು ಸುಲಭವೇನೂ ಅಲ್ಲ. ಅದನ್ನ ವಿನೋದ್ ಪ್ರಭಾಕರ್ ಚೆನ್ನಾಗಿ ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ಸೋನಲ್ ಮೊಂಥೆರೋ ಚೆಂದ ಕಾಣ್ತಾರೆ. ಮಾದೇವನ ಹಿಂದೆ ಸುತ್ತುವ ಪಾರ್ವತಿ ಆಗಿಯೇ ಇಲ್ಲಿ ಕಾಣಿಸಿಕೊಂಡಿದ್ದಾರೆ.
ಡೈರೆಕ್ಟರ್ ನವೀನ್ ರೆಡ್ಡಿ ಈ ಮಾದೇವನ ಕಥೆಯನ್ನ 1980 ರ ಕಾಲಘಟ್ಟದಲ್ಲಿಯೇ ಹೇಳಿದ್ದಾರೆ. ಅದಕ್ಕೇನೆ ಅದನ್ನ ಬಿಂಬಿಸೋಕೆ ಇಲ್ಲೊಂದು ರೈಲ್ವೆ ಸ್ಟೇಷನ್ ಕ್ರಿಯೇಟ್ ಮಾಡಿದ್ದಾರೆ. ಆ ದಿನಗಳ ರೈಲು ಕೂಡ ಇಲ್ಲಿ ಇದೆ. ರೈಲಿನಲ್ಲಿಯೇ ಬಹುತೇಕ ದೃಶ್ಯಗಳನ್ನ ತೆಗೆದಿದ್ದಾರೆ. ಆದರೆ, ಇಲ್ಲಿ ಕಥೆ ಅಂತ ಬಂದಾಗ, ಗಲ್ಲು ಶಿಕ್ಷೆಗೆ ಗುರಿಯಾದ ಕ್ರಿಮಿನಲ್ ಒಬ್ಬನ ತಾಯಿ, ಹ್ಯಾಂಗ್ಮ್ಯಾನ್ ಬಳಿ ಬಂದು ಮಗನ ಜೀವ ಉಳಿಸುವಂತೆ ಕೇಳೋದು ವಿಭಿನ್ನವಾಗಿದೆ.
ನಟಿ ಶೃತಿ ಅವರು ಇಲ್ಲಿ ಅಮ್ಮನ ಪಾತ್ರ ಮಾಡಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ವಿಲನ್ ಕೂಡಾ ಶ್ರುತಿಯೇ. ಮಾಲಾಶ್ರೀ ಪೊಲೀಸ್ ಆಫೀಸರ್ ಆಗಿದ್ದಾರೆ. ಇವರಿಗೆ ಇಲ್ಲಿ ಫೈಟ್ ಮತ್ತು ಸಖತ್ ಡೈಲಾಗ್ ಇವೆ. ಬಾಲಾ ಅವರ ಕ್ಯಾಮರಾವರ್ಕ್ ಚೆನ್ನಾಗಿದೆ. ಒಟ್ಟಾರೆ, ಒಂದು ಒಳ್ಳೆ ಕಥೆ ಇರೋ ಮಾದೇವ ಸಿನಿಮಾ ಕನ್ನಡಿಗರ ಮನ ಗೆದ್ದಿದೆ. ಚಿತ್ರಮಂದಿರಕ್ಕೆ ಅಭಿಮಾನಿಗಳನ್ನು ಕೈ ಬೀಸಿ ಕರೆಯುತ್ತಿದ್ದಾನೆ ಮಾದೇವ.