ಕೇರಳದ ಗುರುವಾಯೂರಪ್ಪನಿಗೆ ಚಿನ್ನದ ಕಿರೀಟ! – ಕೃಷ್ಣ ಜನ್ಮಾಷ್ಟಮಿಗೆ ಚಿನ್ನದ ಉದ್ಯಮಿಯಿಂದ ಬಂಪರ್‌ ಕಾಣಿಕೆ!

ಕೇರಳದ ಗುರುವಾಯೂರಪ್ಪನಿಗೆ ಚಿನ್ನದ ಕಿರೀಟ! – ಕೃಷ್ಣ ಜನ್ಮಾಷ್ಟಮಿಗೆ ಚಿನ್ನದ ಉದ್ಯಮಿಯಿಂದ ಬಂಪರ್‌ ಕಾಣಿಕೆ!

ಗುರುವಾಯೂರು: ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಅನೇಕ ದೇಗುಲಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬುಧವಾರದ ಅಷ್ಟಮಿ ರೋಹಿಣಿ ದಿನದಂದು ಪ್ರಸಿದ್ಧ ಗುರುವಾಯೂರು ದೇವರಿಗೆ ಚಿನ್ನದ ಕಿರೀಟವನ್ನು ತೊಡಿಸಲಾಗುತ್ತದೆ. ಈ ವರ್ಷ ಕೇರಳದ ಚಿನ್ನದ ಉದ್ಯಮಿರೊಬ್ಬರು ಚಿನ್ನದ ಕಿರೀಟವೊಂದನ್ನು ಉಡುಗೊರೆ ನೀಡಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿ ಚಿನ್ನದ ವ್ಯಾಪಾರ ನಡೆಸುವ ಕೇರಳದ ತ್ರಿಸ್ಸೂರು ಜಿಲ್ಲೆಯ ಕೈನೂರು ತರವಾಡು ಮೂಲದ ಕೆ.ವಿ. ರಾಜೇಶ್​ ಆಚಾರ್ಯ ಅವರು ಈ ಉಡುಗೊರೆ ನೀಡುತ್ತಿದ್ದಾರೆ. ಸೆ. 6 ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಿನ್ನೆಲೆ ಅದೇ ದಿನ ಚಿನ್ನದ ಕಿರೀಟವನ್ನು ಗುರುವಾಯೂರಪ್ಪನಿಗೆ ಅರ್ಪಿಸಲಾಗುತ್ತದೆ.

ಇದನ್ನೂ ಓದಿ: ಗಣೇಶ ಚತುರ್ಥಿ ಆಚರಣೆಗೆ ಹೊಸ ರೂಲ್ಸ್‌ – ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

ಉದ್ಯಮಿ ಕೆ.ವಿ. ರಾಜೇಶ್​ ಆಚಾರ್ಯ ಅವರು ನೀಡಿರುವ ಚಿನ್ನದ ಕಿರೀಟ 38 ಸವರನ್​ ತೂಕವಿದೆ. ಜನ್ಮಾಷ್ಟಮಿ ದಿನ ಕಾಣಿಕೆಯಾಗಿ ಸ್ವೀಕರಿಸಿದ ವಸ್ತುಗಳನ್ನು ವಿಗ್ರಹದ ಮೇಲೆ ಧರಿಸಲಾಗುತ್ತದೆ ಮತ್ತು ನಂತರ ದೇವಸ್ವಂನ ರಿಜಿಸ್ಟರ್‌ನಲ್ಲಿ ದಾಖಲಿಸಲಾಗುತ್ತದೆ. ಬಳಿಕ ಸುರಕ್ಷಿತ ಲಾಕರ್‌ಗೆ ವರ್ಗಾಯಿಸಲಾಗುತ್ತದೆ.

ಕಳೆದ ತಿಂಗಳು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪತ್ನಿ ದುರ್ಗಾ ಅವರು ಗುರುವಾಯೂರಪ್ಪನವರಿಗೆ 32 ಸವರನ್​ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ಅರ್ಪಿಸಿದ್ದರು. ಅಲ್ಲದೆ, ಚಥಯಂ ದಿನದಂದು ಗುರುವಾಯೂರಪ್ಪನವರಿಗೆ ಸುಮಾರು ನೂರು ಸವರನ್​ ತೂಕದ ಚಿನ್ನದ ಕಿಂಡಿಯನ್ನು ಕಾಣಿಕೆಯಾಗಿ ಸ್ವೀಕರಿಸಲಾಯಿತು. ಇದನ್ನು ಟಿವಿಎಸ್ ಗ್ರೂಪ್ ಕಾಣಿಕೆಯಾಗಿ ನೀಡಿದೆ. ಉದ್ಯಮಿ ಡಾ. ರವಿ ಪಿಳ್ಳೈ ಅವರು 2021ರ ಸೆಪ್ಟೆಂಬರ್​ನಲ್ಲಿ 725 ಗ್ರಾಂ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು.

suddiyaana