ಬಡ ಮಹಿಳೆಯರಿಗೆ ತಿಂಗಳಿಗೆ 1000 ರೂ. ನಗದು, ಪೆಟ್ರೋಲ್‌ ಬೆಲೆ 75 ರೂ. ಡೀಸೆಲ್ 65 ರೂ! – ಮತದಾರರಿಗೆ ಡಿಎಂಕೆ ಭರ್ಜರಿ ಆಫರ್‌!

ಬಡ ಮಹಿಳೆಯರಿಗೆ ತಿಂಗಳಿಗೆ 1000 ರೂ. ನಗದು, ಪೆಟ್ರೋಲ್‌ ಬೆಲೆ 75 ರೂ. ಡೀಸೆಲ್ 65 ರೂ! – ಮತದಾರರಿಗೆ ಡಿಎಂಕೆ ಭರ್ಜರಿ ಆಫರ್‌!

ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿದೆ. ಪ್ರಚಾರದ ಕಾವು ಜೋರಾಗುತ್ತಿದೆ. ಇದೀಗ ಲೋಕಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿ ಹಾಗೂ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮತದಾರರಿಗೆ ಭರಪೂರ ಆಫರ್‌ ನೀಡಿದೆ.

ಏಪ್ರಿಲ್ 19ರಂದು ತಮಿಳುನಾಡಿನಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಹೀಗಾಗಿ ಚುನಾವಣಾ ಪ್ರಣಾಳಿಕೆ ಹಾಗೂಅಭ್ಯರ್ಥಿಗಳ ಪಟ್ಟಯನ್ನು ಒಟ್ಟಿಗೆ ರಿಲೀಸ್‌ ಮಾಡಿದೆ. ಡಿಎಂಕೆ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಇಂಡಿಯಾ ಮೈತ್ರಿಕೂಟ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಹಲವು ಮಹತ್ವದ ಬದಲಾವಣೆ ತರುತ್ತೇವೆ. ಪ್ರಮುಖವಾಗಿ ದೇಶದಲ್ಲಿ ರಾಜ್ಯ ಸರ್ಕಾರಗಳ ಆಳ್ವಿಕೆಯಲ್ಲಿ ರಾಜ್ಯಪಾಲರ ಹಸ್ತಕ್ಷೇಪ, ಮಧ್ಯಪ್ರವೇಶಕ್ಕೆ ಇರುವ ಹಕ್ಕು, ಅಧಿಕಾರಗಳನ್ನು ರದ್ದು ಮಾಡುತ್ತೇವೆ. ರಾಜ್ಯಪಾಲರ ಹಕ್ಕು ರದ್ದಿಗೆ ಸಂವಿಧಾನ ತಿದ್ದುಪಡಿಯ ಭರವಸೆಯನ್ನು ತರುತ್ತೇವೆ ಎನ್ನಲಾಗಿದೆ. ಅಲ್ಲದೆ ದೇಶಾದ್ಯಂತ ನೀಟ್ ಪರೀಕ್ಷೆಯನ್ನು ರದ್ದುಪಡಿಸುವ ಭರವಸೆಯನ್ನು ಡಿಎಂಕೆ ನಾಯಕರು ನೀಡಿದ್ದಾರೆ.

ಇದನ್ನೂ ಓದಿ: ಅಪ್ಪನಿಗೂ ಸ್ಥಾನಮಾನ.. ಮಕ್ಕಳಿಗೂ ಅಧಿಕಾರ – ಬಿಜೆಪಿ ಪಾಲಿಗೆ BSY ಶಕ್ತಿನಾ.. ದೌರ್ಬಲ್ಯನಾ?

ಡಿಎಂಕೆ ಪ್ರಣಾಳಿಕೆಯು ತನ್ನ ಪ್ರಣಾಳಿಕೆಯಲ್ಲಿ ಬಡ ಮಹಿಳೆಯರಿಗೆ ತಿಂಗಳಿಗೆ 1000 ರೂಪಾಯಿ ನಗದು ನೀಡಲಾಗುವುದು. ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (CAA) ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿಗೆ ತರುವುದಿಲ್ಲ. ಅಡುಗೆ ಗ್ಯಾಸ್ ಸಿಲೆಂಡರ್ ₹500 ರೂಪಾಯಿಗೆ ನೀಡಲಾಗುವುದು. ಪೆಟ್ರೋಲ್ ಲೀಟರ್‌ಗೆ ₹75 ಮತ್ತು ಡೀಸೆಲ್ 65 ರೂಪಾಯಿಗೆ ಮಾರಾಟ ಮಾಡಲಾಗುವುದು. ಇನ್ನು ತಮಿಳುನಾಡಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEET) ಜಾರಿಗೆ ತರುವುದಿಲ್ಲ. NEET ಪರೀಕ್ಷೆ ರದ್ದು ಹಾಗೂ ಪುದುಚೇರಿಗೆ ರಾಜ್ಯದ ಸ್ಥಾನಮಾನ ನೀಡಲಾಗುವುದು. ತಿರುಕುರಳ್ ಅನ್ನು ರಾಷ್ಟ್ರೀಯ ಪುಸ್ತಕ ಎಂದು ಘೋಷಣೆ ಮಾಡಲಾಗುವುದು. ಸಂಸತ್ ಮತ್ತು ಅಸೆಂಬ್ಲಿಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡಲಾಗುವುದು. ಕೇಂದ್ರ ಸರ್ಕಾರದ ನೇಮಕಾತಿ ಪರೀಕ್ಷೆಯಲ್ಲಿ ತಮಿಳು ಭಾಷೆಯಲ್ಲಿ ಬರೆಯಲು ಅವಕಾಶ ನೀಡಲಾಗುವುದು. ರೈಲ್ವೆ ಇಲಾಖೆಗೆ ಪ್ರತ್ಯೇಕ ಹಣಕಾಸು ನೀತಿ ಜಾರಿ ಮಾಡಲಾಗುವುದು. ಶ್ರೀಲಂಕಾದಿಂದ ಮರಳಿರುವ ತಮಿಳಿಗರಿಗೆ ಭಾರತದ ನಾಗರಿಕತ್ವ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.

ಡಿಎಂಕೆ ಅಭ್ಯರ್ಥಿಗಳ ಪಟ್ಟಿ  ಹೀಗಿದೆ..

  • ದಕ್ಷಿಣ ಚೆನ್ನೈ- ತಂಗಪಾಡ್ಯನ್
  • ಸೆಂಟ್ರಲ್ ಚೆನ್ನೈ- ದಯಾನಿಧಿ ಮಾರನ್
  • ಶ್ರೀಪೆರಂಬೂರು- ಟಿ.ಆರ್.ಬಾಲು
  • ತಿರುವಣ್ಣಾಮಲೈ- ಅಣ್ಣಾದೊರೈ
  • ನೀಲಗಿರಿ- ಎ.ರಾಜಾ
  • ತೂತುಕುಡಿ- ಕನ್ನಿಮೊಳಿ
  • ಉತ್ತರ ಚೆನ್ನೈ- ಕಲಾನಿಧಿ ವೀರಸ್ವಾಮಿ

Shwetha M