ದೊಡ್ಮನೆಯಲ್ಲಿ ಜಗದೀಶ್‌ ರಂಪಾಟ – ಬಿಗ್‌ ಬಾಸ್‌ ನಲ್ಲಿ ಗೌರವ ಅಗೌರವದ್ದೇ ಸದ್ದು?

ದೊಡ್ಮನೆಯಲ್ಲಿ ಜಗದೀಶ್‌ ರಂಪಾಟ – ಬಿಗ್‌ ಬಾಸ್‌ ನಲ್ಲಿ ಗೌರವ ಅಗೌರವದ್ದೇ ಸದ್ದು?

ಬಿಗ್ ಬಾಸ್ ಕನ್ನಡ ಸೀಸನ್‌ 11 ನಲ್ಲಿ ರಂಪಾಟ ಜೋರಾಗಿದೆ. ಲಾಯರ್ ಜಗದೀಶ್‌ ಇದೀಗ ‘ಬಿಗ್ ಬಾಸ್’ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಬಿಗ್ ಬಾಸ್‌ ಗೇ ಲಾಯರ್ ಜಗದೀಶ್‌ ಧಮ್ಕಿ ಹಾಕಿದ್ದಾರೆ. ನಾನು ಆಚೆ ಹೋಗಲಿ.. ಈ ‘ಬಿಗ್ ಬಾಸ್‌’ನ ನಾನು ಮ್ಯಾನಿಪ್ಯುಲೇಟ್‌ ಮಾಡಲಿಲ್ಲ ಅಂದ್ರೆ ನನ್ನ ಹೆಸರು ಜಗದೀಶ್‌ ಅಲ್ಲ. ನಾನು ‘ಬಿಗ್ ಬಾಸ್‌’ನ ಎಕ್ಸ್‌ಪೋಸ್ ಮಾಡ್ತೀನಿ. ನಿಮ್ಮ ಪ್ರೋಗ್ರಾಂ ಹಾಳು ಮಾಡಿಲ್ಲ ಅಂದ್ರೆ ನನ್ನ ಹೆಸರು ಬೇರೆ ಇಡು. I will Destroy your program’’ ಅಂತ ಕ್ಯಾಮರಾ ಮುಂದೆ ನಿಂತು ಕೈ ತೋರಿಸಿ ಬೆದರಿಕೆ ಹಾಕಿದ್ದಾರೆ ಲಾಯರ್ ಜಗದೀಶ್‌. ಇದೀಗ ಜಗದೀಶ್‌ ವರ್ತನೆ ಉಳಿದ ಸ್ಪರ್ಧಿಗಳಿಗೆ ಬೇಸರ ತರಿಸಿದೆ.

ಇದನ್ನೂ ಓದಿ: ದರ್ಶನ್‌ ಗೆ ಬೆಂಬಿಡದೆ ಕಾಡುತ್ತಿದೆ ಬೆನ್ನು ನೋವು! – ಸರ್ಜರಿಗೆ ಒಳಗಾಗಬೇಕಾ ನಟ?

ಹೌದು, ದೊಡ್ಮನೆಯಲ್ಲಿ ಲಾಯರ್‌ ಜಗದೀಶ್‌ ರಂಪಾಟ ಆರಂಭಿಸಿದ್ದಾರೆ.. ಜಗದೀಶ್​ ಮನೆ ಮಂದಿಯ ಜೊತೆಗೆ ಸಿಕ್ಕ ಸಿಕ್ಕ ವಿಚಾರಕ್ಕೆ ಜಗಳವೆತ್ತುತ್ತಿದ್ದಾರೆ. ಇದೀಗ 16 ಸ್ಪರ್ಧಿಗಳು ಕೂಡ ಇವರ ವರ್ತನೆಗೆ ಬೇಸತ್ತು ಹೋಗಿದ್ದಾರೆ. ಮಾತ್ರವಲ್ಲದೆ ಈ ವಿಚಾರವಾಗಿ ಜಗದೀಶ್​ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

ಮನೆಯ ಮರದ ಕಟ್ಟೆ ಬಳಿ ಅನುಷಾ, ಮೋಕ್ಷಿತಾ, ಚೈತ್ರಾ, ಗೋಲ್ಡ್​ ಸುರೇಶ್​ ಮತ್ತು ಶಿಶಿರ್​ ಚರ್ಚೆ ನಡೆಸುತ್ತಿದ್ದಾರೆ. ಗೌರವ ಕೊಟ್ಟರು ಗೌರವ ಉಳಿಸಿಕೊಳ್ಳುತ್ತಿಲ್ಲ ಎಂದು ಜಗದೀಶ್​ ಬಗ್ಗೆ ಮಾತನಾಡುತ್ತಿದ್ದಾರೆ.

ಅತ್ತ ಹಂಸಾ ಮತ್ತು ಗೌತಮಿ ಕೂಡ ಸೋಫಾ ಮೇಲೆ ಕೂಡ ಜಗದೀಶ್​ ಬಗ್ಗೆ ಚರ್ಚಿಸುತ್ತಿದ್ದಾರೆ. ಒಟ್ಟಿನಲ್ಲಿ ಲಾಯರ್​ ಜಗದೀಶ್​ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮನೆಮಂದಿಯ ಕಣ್ಣಿರಿಗೂ ಕಾರಣರಾಗಿದ್ದಾರೆ. ಸದ್ಯ ವಾರದ ಕತೆಯಲ್ಲಿ ಜಗದೀಶ್​ ಚರ್ಚೆಗೆ​ ಮುಖ್ಯ ವಿಷಯವಾಗಲಿದ್ದಾರೆ. ಕಿಚ್ಚ ಲಾಯರ್‌ ಜಗದೀಶ್‌ ಗೆ ಹೇಗೆ ಕ್ಲಾಸ್‌ ತೆಗೆದುಕೊಳ್ಳುತ್ತಾರೆ ಅಂತಾ ವೀಕ್ಷಕರು ಕೂಡ ಕಾಯುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *