ಯಾರೀ ಸೈಕೋ‌ ಜಯಂತ್? – ಯಾವ ಕೋರ್ಸ್ ತರಬೇತಿ ಕೊಡ್ತಾರೆ ಗೊತ್ತಾ?

ಯಾರೀ ಸೈಕೋ‌ ಜಯಂತ್? – ಯಾವ ಕೋರ್ಸ್ ತರಬೇತಿ ಕೊಡ್ತಾರೆ ಗೊತ್ತಾ?

ಜೀ ಕನ್ನಡದಲ್ಲಿ ಪ್ರಸಾರ ಆಗ್ತಾ ಇರೋ ಧಾರಾವಾಹಿ ಲಕ್ಷ್ಮೀ ನಿವಾಸ  ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಿದೆ. ಮಧ್ಯಮ ವರ್ಗದ ದಂಪತಿಯ ಕಥೆಯನ್ನು ವೀಕ್ಷಕರು ಇಷ್ಟಪಟ್ಟು ನೋಡ್ತಿದ್ದಾರೆ.. ಆದ್ರೇ ಈ ಸೀರಿಯಲ್ ನಲ್ಲಿ ಬರೋ ಜಯಂತ್ ಪಾತ್ರ ನೋಡಿ ಜನ ತಲೆ ಕೆಡಿಸಿಕೊಂಡಿದ್ದಾರೆ.. ಆರಂಭದಲ್ಲಿ ಈ ಪಾತ್ರ ಇಷ್ಟಪಡ್ತಿದ್ದ ವೀಕ್ಷಕರು, ಈಗ ಇಂತವರೂ ಇರ್ತಾರಾ ಅಂತಾ ಬೈತಿದ್ದಾರೆ..

ಇದನ್ನೂ ಓದಿ: ರಾಮಾಯಣ ಶೂಟಿಂಗ್‌ನ ಫೋಟೋ ಲೀಕ್‌ – ಶೂಟಿಂಗ್‌ ವೇಳೆ ಮೊಬೈಲ್‌ ನಿಷೇಧ

ಲಕ್ಷ್ಮೀ‌ ನಿವಾಸ ಸೀರಿಯಲ್ ಈಗ ಮನೆಮಾತಾಗಿದೆ.  ಟಿಆರ್‌ಪಿ ರೇಸ್ ನಲ್ಲೂ ಈ ಧಾರಾವಾಹಿ ಮುಂದಿದೆ. ಧಾರಾವಾಹಿ ಕಥೆ ಮುಂದೇನು ಅಂತಾ ಕುತೂಹಲ ದಿನನಿತ್ಯ ಕಾಡುವಂತೆ ಮಾಡಿದೆ. ಪ್ರೇಕ್ಷಕರು ಧಾರಾವಾಹಿ ನೋಡಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಈ ಸೀರಿಯಲ್ ಪಾತ್ರವರ್ಗದಿಂದಲೂ ಪ್ರಸಿದ್ಧಿ ಪಡೆದಿದೆ. ಧಾರಾವಾಹಿಯಲ್ಲಿ  ಕಲಾವಿದರ ಆ್ಯಕ್ಟಿಂಗ್ ಬಗ್ಗೆ ಮೆಚ್ಚುಗೆ ಕೇಳಿ ಬರುತ್ತಿದೆ. ಸಹಜ ಅಭಿನಯದ ಮೂಲಕ ಎಲ್ಲರೂ ಗಮನ ಸೆಳೆಯುತ್ತಿದ್ದಾರೆ. ಧಾರಾವಾಹಿಯಲ್ಲಿ ಜಯಂತ್ ಆಗಿ ಕಾಣಿಸಿಕೊಂಡಿರುವ ತರುಣ ವಿಶೇಷವಾಗಿ ಹೆಣ್ಮಕ್ಕಳ ಹಾಟ್ ಫೆವರೀಟ್ ಆಗಿದ್ದರು. ಅಂದ-ಚೆಂದ, ಹಾವಭಾವದಿಂದ ಹೆಂಗಳೆಯರ ಮನಕ್ಕೆ ಲಗ್ಗೆ ಇಟ್ಟಿದ್ದಾರೆ. ಆದ್ರೆ ಸೈಕೋ ಆಗಿ ಆ್ಯಕ್ಟ್ ಮಾಡ್ತಾ ಅದ್ರಲ್ಲೂ ಜಿರಳೆ ತಿನ್ನುವಂತಹ ಪಾತ್ರದಿಂದ ಅಸಹ್ಯ ಹುಟ್ಟಿಸಿದ್ದೂ ಇದೆ.. ಆದ್ರೆ‌ ಇಷ್ಟೆಲ್ಲಾ ಚೆನ್ನಾಗಿ ಆ್ಯಕ್ಟ್ ಮಾಡ್ತಿರುವ ಈ ಸುಂದರ ಯಾರು? ಅವ್ರ ಬ್ಯಾಗ್ರೌಂಡ್ ಏನು ಅಂತಾ ಜನ ಗೂಗಲ್ ನಲ್ಲಿ ಕೆದಕುತ್ತಿದ್ದಾರೆ..

ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಗಮನ ಸೆಳೆದಿರುವ  ಜಯಂತ್  ಪಾತ್ರ ನಿರ್ವಹಿಸುತ್ತಿರುವ  ಕಲಾವಿದನ ರಿಯಲ್  ಹೆಸರು ದೀಪಕ್ ಸುಬ್ರಮಣ್ಯ. 35 ವರ್ಷದ ದೀಪಕ್, ಓದಿದ್ದು ಇಂಜಿನಿಯರಿಂಗ್. ನಟನೆಗೆ ಬರುವ ಮೊದಲು ಅವರು ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು.

ದೀಪಕ್ ನಟನೆ ನೋಡಿದ್ರೇನೆ ಇದೊಂದು ಪಕ್ವಗೊಂಡಿರುವ ಪ್ರತಿಭೆ ಅಂತ ಗೊತ್ತಾಗುತ್ತೆ. ದೀಪಕ್ ಒಬ್ಬ ರಂಗಭೂಮಿ ಕಲಾವಿದ. ದೀಪಕ್ ಕಳೆದ 20 ವರ್ಷಗಳಿಂದ ರಂಗಭೂಮಿಯಲ್ಲಿ ಮಿನುಗುತ್ತಿರುವ ತಾರೆ. 50ಕ್ಕೂ ಹೆಚ್ಚು ನಾಟಕಗಳಲ್ಲಿ ಅವರು ನಟಿಸಿದ್ದಾರೆ. ಸಾಕಷ್ಟು ನಾಟಕಗಳ ನಿರ್ದೇಶನ, ನಿರ್ಮಾಣ ಮಾಡಿದ್ದಾರೆ.

ದೀಪಕ್ ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ದಾಸ ಪುರಂದರದಲ್ಲಿ ನಟಿಸಿದ್ರು. ಅಲ್ಲೂ ಪ್ರತಿಭೆ ಮೆರೆದಿದ್ದರು. ಶ್ರೀನಿವಾಸ ನ ಪಾತ್ರದ ಮೂಲಕ ಅಚ್ಚು ಮೆಚ್ಚಾಗಿದ್ದರು. ಅಚ್ಚುಕಟ್ಟಾಗಿ ಸಂಭಾಷಣೆ ಮಾಡುವ ,ಮೂಲಕ ಶ್ರೀನಿವಾಸ ಎಂಬ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಈಗಲೂ ಲಕ್ಷ್ಮೀ ನಿವಾಸದ ಜಯಂತ್ ಆಗಿ, ವಿಭಿನ್ನ ಮ್ಯಾನರಿಸಂ ಮೂಲಕ ವ್ಹಾವ್ ಎಂದೆನಿಕೊಂಡಿದ್ದಾರೆ

ದೀಪಕ್ ಸುಬ್ರಮಣ್ಯ ಸಿನಿಮಾದಲ್ಲೂ ನಟಿಸಿದ್ದಾರೆ.. ಸಾಲಗಾರ, ಜಾರು ಬಂಡೆ, ಪಿಂಕಿ ಎಲ್ಲಿ..?, ಶುದ್ಧಿ, ಆಯಾನಾ, ಸಾರಾಂಶ, ಅಂಬುಜ ಸೇರಿದಂತೆ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಸದ್ಯ ದೀಪಕ್ ಮಿಸ್ಟರ್ ರಾಣಿ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಕಳೆದ ಐದಾರು ವರ್ಷಗಳಿಂದ ಅವರು ಪರ್ಫಾಮೆನ್ಸ್ ಇನ್ ರಿಯಲಿಸಂ ಎಂಬ ಕೋರ್ಸ್ ಬಗ್ಗೆ ತರಗತಿ ನೀಡುತ್ತಿದ್ದಾರೆ. ಇದು ಮೂರೂವರೆ ತಿಂಗಳ ಕೋರ್ಸ್ ಆಗಿದೆ.

ಇನ್ನು ಲಕ್ಷ್ಮೀ ನಿವಾಸದಲ್ಲಿ ಜಯಂತ್ ಮುದ್ದಾಗಿ ಕಾಣಿಸಿಕೊಂಡಿದ್ದರು. ಈ ಪಾತ್ರ ನೋಡಿದ ಹೆಣ್ಮಕ್ಕಳು ವ್ಹಾವ್ ಇಂಥ ಹುಡುಗ ಸಿಗಬಾರದಾ..‌ಅಂತಾ ಹೇಳ್ತಾ ಇದ್ರು.. ಇನ್ನು ಹೆಣ್ಣು ಹೆತ್ತವರು ಕೂಡ ಸಿಕ್ರೆ ಇಂಥ ಅಳಿಯ ಸಿಗಬೇಕಪ್ಪ.. ಅನ್ನೋ ಮಟ್ಟಿಗೆ ಜಯಂತ್ ಪಾತ್ರವಿತ್ತು. ಜಯಂತ್-ಜಾಹ್ನವಿ ಜೋಡಿ ಮುದ್ದಾಗೇನೋ ಇದೆ. ಆದ್ರೆ, ಮದುವೆಯ ನಂತರ ಅಸಲಿ ಕಥೆ ಬೇರೇನೆ ಆಗಿದೆ. ಹೌದು, ಜಯಂತ್ ವಿಪರೀತ ಪ್ರೀತಿ ತೋರೋ ಸೈಕೋ ಪತಿನಾ? ಅಥವಾ ಲಕ್ಷ್ಮೀ ನಿವಾಸದ ಜೊತೆಗೆ ಆತನಿಗೆ ನಂಟಿದ್ಯಾ? ದ್ವೇಷ ಇದ್ಯಾ ಅಂತಾ ವೀಕ್ಷಕರು ಊಹೆ ಮಾಡ್ತಾ ಇದ್ದಾರೆ.. ಸೀರಿಯಲ್ ನಲ್ಲಿ ಮುಂದೆ ಏನು ಟ್ವಿಸ್ಟ್ ಇದೆ ಅಂತಾ ಕಾದು ನೋಡ್ಬೇಕಿದೆ..

Shwetha M