ಸೈಕೋ ಜಯಂತ್ ಕಾಟ ಎಷ್ಟುದಿನ? – ಜಾಹ್ನವಿಗೂ ಬೇಡ್ವಾ ಜಯಂತ್?
ವೆಂಕಿ ಕಂಡರೆ ಭಯ ಯಾಕೆ?

ಸೈಕೋ ಜಯಂತ್ ಕಾಟ ಎಷ್ಟುದಿನ? – ಜಾಹ್ನವಿಗೂ ಬೇಡ್ವಾ ಜಯಂತ್?ವೆಂಕಿ ಕಂಡರೆ ಭಯ ಯಾಕೆ?

ಜೀ ಕನ್ನಡದಲ್ಲಿನ ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಯಂತ್ ಪಾತ್ರ ಅಂದುಕೊಂಡ ಹಾಗೆ ಇಲ್ಲ. ‘ಅತಿ ವಿನಯಂ ಧೂರ್ತ ಲಕ್ಷಣಂ’ ಎಂಬ ಮಾತನ್ನು ಬಹುಶಃ ಜಯಂತ್ ಪಾತ್ರ ನೋಡಿಯೇ ಹೇಳಿರ್ಬೋದೇನೋ ಅನ್ಸುತ್ತೆ.. ಸೈಕೋ ಪತಿ ಜಯಂತ್, ಜಾಹ್ನವಿ ಮೇಲಿನ ಅತಿಯಾದ ಪ್ರೀತಿಗೆ ಚಿತ್ರ ವಿಚಿತ್ರವಾಗಿ ಆಡುತ್ತಿದ್ದಾನೆ. ಯಾರೂ ಇಲ್ಲದ ಮನೆಯಲ್ಲಿ ಆಕೆಯನ್ನು ಒಂಟಿಯಾಗಿ ಬಂಧಿಸಿದ್ದಾನೆ. ಆಕೆಯ ಚಲನ ವಲನಗಳ ಮೇಲೂ ಕಣ್ಣಿಡ್ತಾನೆ.. ಆಕೆಯ ಜೊತೆ ಯಾರಾದ್ರೂ ಕ್ಲೋಸ್ ಆಗಿದ್ರೂ ಕೂಡ ಆತ ಸಹಿಸಲ್ಲ.. ಮಡದಿ ಫ್ರೆಂಡ್ ಅಂತಾನೂ ನೋಡದೇ ಅವ್ರಿಗೊಂದು ಗತಿ ತಂದು ಇಡ್ತಾನೆ.. ಆದ್ರೆ ಜಯಂತ್ ಒಂದು ವಿಚಾರಕ್ಕೆ ಮಾತ್ರ ತುಂಬಾನೆ ಹೆದರ್ತಾನೆ.. ಜಯಂತ್ ನ ಚಿತ್ರ ವಿಚಿತ್ರ ವರ್ತನೆ ನೋಡಿ ವೀಕ್ಷಕರು ಕೂಡ ಬೇಸತ್ತು ಹೋಗಿದ್ದಾರೆ.. ಜಯಂತ್ ಪಾತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.. ಅಷ್ಟಕ್ಕೂ ಜಯಂತ್ ಗೆ ಜಾಹ್ನವಿ ಮೇಲೆ ಒಂಚೂರು ಪ್ರೀತಿ ಇಲ್ವಾ? ಈ ಸೈಕೋ ಪತಿ ಹೆದರೋದು ಯಾರಿಗೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಜಿರಳೆ ಕೊಂದು ಹಾಲಲ್ಲಿ ಬೆರೆಸಿ ಕುಡಿದ ಜಯಂತ್ – ಪಾಪ.. ಜಾಹ್ನವಿ ಕಥೆ ಮುಂದೇನು?

‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಯಂತ್, ತನ್ನ ಹೆಂಡ್ತಿ ಜಾಹ್ನವಿ ವಿಷಯದಲ್ಲಿ ಪಕ್ಕಾ ಸೈಕೋ ಥರ ಆಡ್ತಾನೆ. ಜಯಂತ್ ತನ್ನ ಹೆಂಡ್ತಿ ಜಾಹ್ನವಿಯನ್ನು ತುಂಬ ಇಷ್ಟಪಡ್ತಾನೆ, ಅವಳು ನನಗೆ ಮಾತ್ರ ಸ್ವಂತ, ಅವಳು ನನ್ನ ಮಾತ್ರ ಪ್ರೀತಿ ಮಾಡಬೇಕು, ನನ್ನ ಜೊತೆ ಮಾತ್ರ ಆತ್ಮೀಯತೆಯಿಂದ ಇರಬೇಕು, ನನಗೆ ಮಾತ್ರ ಆದ್ಯತೆ ಕೊಡಬೇಕು ಅಂತ ಜಯಂತ್ ಬಯಸುತ್ತಾನೆ. ಅತಿಯಾದರೆ ಅಮೃತವೂ ವಿಷವಂತೆ.. ಹಾಗೆಯೇ ಇಲ್ಲಿ ಜಯಂತ್ ಪ್ರೀತಿಯೂ, ಅದರ ರೀತಿಯೂ ಮಿತಿಮೀರಿದೆ. ಜಯಂತ್ ನ ಮದುವೆ ಆದ್ಮೇಲೆ ಪಾಪ ಜಾಹ್ನವಿ.. ಹಾಗೇ ಆಕೆಯ ಫ್ರೆಂಡ್ಸ್ ಗೆ ನೆಮ್ಮದಿಯೇ ಇಲ್ಲ ಅನ್ನೋಥರ ಆಗಿದೆ.. ಅವ್ಳ ಮೇಲೆ ಜಯಂತ್ ನ ಒಂದು ಕಣ್ಣು ಇದ್ದೇ ಇರುತ್ತೆ.. ಜಾಹ್ನವಿ ಜೊತೆ ಯಾರೂ ಕ್ಲೋಸ್ ಆಗಿ ಇರೋ ಹಾಗಿಲ್ಲ.. ಕ್ಲೋಸ್ ಆದ್ರೆ ಅವರ ಕತೆ ಮುಗಿದಂಗೆ.. ಆಕೆಗೆ ಹುಷಾರಿಲ್ಲದಿದ್ದಾಗ ಜಾಹ್ನವಿಯನ್ನ ಟೆಸ್ಟ್ ಮಾಡಿದ ಡಾಕ್ಟರ್ ಕೈಯನ್ನೇ ಮುರಿದು ಹಾಕ್ತಾನೆ.. ಇನ್ನು ಕಾಲೇಜ್ ಗೆ ಎಕ್ಸಾಮ್ ಬರೆಯಲು ಹೋದಾಗಲು ಕೂಡ ಆಕೆಯ ಫ್ರೆಂಡ್ ಕ್ಲೋಸ್ ಆಗಿ ಮಾತಾಡಿದ ಅಂತಾ ಅವನ ತಲೆ ಮೇಲೆ ಪಾಟ್ ಎತ್ತಿ ಹಾಕ್ತಾನೆ.. ಹಾಗೆಯೇ ಪಾರ್ಟಿಲಿ ಜಾನು ಹಾಡಿದ್ಲು ಅಂತಾ ಆಕೆಗೆ ರಾತ್ರಿಯಿಡೀ ಹಾಡು ಅಂತಾ ಹೇಳ್ತಾನೆ.. ಬಳಿಕ ನಿನ್ನನ್ನ ಬಿಟ್ಟು ಇರೋಕೆ ಆಗಲ್ಲ ಅಂತಾ ಹೋರಾಗಿ ಅತ್ತು ನಾಟಕ ಆಡ್ತಾನೆ..

ಜಾನುಗೆ ಇಷ್ಟೆಲ್ಲಾ ಕಾಟ ಕೊಡ್ತಿರೋ ಜಯಂತ್ ಗೆ ಒಂದು ಭಯ ಕಾಡ್ತಾ ಇದೆ.. ಜಯಂತ್ ಅನಾಥವಾಗಿ ಬೆಳೆದಿದ್ದಾನೆ. ಜಯಂತ್, ವೆಂಕಿ ಒಂದೇ ಅನಾಥಾಶ್ರಮದಲ್ಲಿ ಬೆಳೆದವರು. ಜಯಂತ್ ಪಾಸ್ಟ್ ಲೈಫ್‌ ನಲ್ಲಿ ಏನೋ ಒಂದು ನಡೆದಿದೆ. ಅದು ಬೇರೆಯವರಿಗೆ ಗೊತ್ತಾದರೆ ಅಂತ ಅವನು ಹೆದರುತ್ತಿದ್ದಾನೆ. ಪ್ರತಿ ಬಾರಿ ಜಾಹ್ನವಿ ಫೋನ್‌ ನಲ್ಲಿ ಮಾತನಾಡುವಾಗಲೂ, ಅವಳು ನನ್ನ ಬಗ್ಗೆ ಹೇಳಬಹುದು ಅಂತ ಜಯಂತ್‌ ಗೆ ಭಯ ಶುರುವಾಗಿದೆ. ಇದೇ‌ ಕಾರಣಕ್ಕೆ  ಜಾಹ್ನವಿಯನ್ನು ಅವನು ತವರು ಮನೆಗೆ ಕೂಡ ಕಳಿಸಿಕೊಡೋದಿಲ್ಲ, ತಂದೆ-ತಾಯಿ ಜೊತೆ ಅವಳು ಮಾತನಾಡುತ್ತಿದ್ದರೂ ಕೂಡ ಅದನ್ನು ಅವನು ಕದ್ದು ಕೇಳಿಸಿಕೊಳ್ಳುತ್ತಾನೆ. ಇನ್ನು ಜಯಂತ್ ಗೆ ಆಫೀಸ್ ಪಾರ್ಟಿಲಿ ಜಾಹ್ನವಿ ಫ್ರೆಂಡ್ ಪರಿಚಯ ಆಗಿದ್ದು, ಆತನ ಹತ್ರ ಜಾನು ಬಗ್ಗೆ ಎಲ್ಲಾ ತಿಳ್ಕೊಂಡಿದ್ದಾನೆ.. ಕಾಲೇಜ್ ನಲ್ಲಿ ಫ್ರೆಂಡ್ಸ್ ಗೆ ಅಡ್ಡ ಹೆಸ್ರು ಇಟ್ಟಿರೋ ವಿಚಾರವನ್ನೇ ಇಟ್ಕೊಂಡು ಆಕೆಗೆ ಕಾಟ ಕೊಡೊದಿಕ್ಕೆ ಶುರು ಮಾಡಿದ್ದಾನೆ. ತನಗೆ ಯಾಕೆ ಈ ವಿಚಾರವನ್ನು ಹೇಳಿಲ್ಲ? ಇದಕ್ಕೆ ತಕ್ಕ ಶಿಕ್ಷೆ ಆಗಬೇಕು ಅಂತಾ ಜಾಹ್ನವಿಯನ್ನು ಮಂಡಿಯೂರಿ ಕೂರಿಸಿದ್ದಾನೆ. ಜಾಹ್ನವಿ ತಪ್ಪಾಯ್ತು ಅಂತಾ ಎಷ್ಟು ಕೇಳಿದ್ರೂ ಜಯಂತ್‌ ಮನಸ್ಸು ಮಾತ್ರ ಕರಗಿಲ್ಲ. ತುಂಬಾ ಹೊತ್ತು ಮಂಡಿಯೂರಿ ಕುಳಿತಿದ್ದ ಜಾಹ್ನವಿ ಪ್ರಜ್ಞೆಕಳೆದುಕೊಂಡು ಬಿದ್ದಿದ್ದಾಳೆ.

ಇಲ್ಲಿ ಜಯಂತ್ ಹಾಗೂ ಜಾಹ್ನವಿ ಪಾತ್ರ ನೋಡಿದಾಗ ವೀಕ್ಷಕರಿಗೆ ಒಂಡ್ಕಡೆ ಸಿಟ್ಟು ಬಂದ್ರೆ ಮತ್ತೊಂದ್ಕಡೆ ಹಲವು ಪಶ್ನೆಗಳು ಕೂಡಾ ಕಾಡ್ತಾ ಇದೆ. ಗಂಡ ಆದವನು ತನ್ನ ಮಡದಿಯನ್ನ ಪ್ರೀತಿಯಿಂದ ನೋಡಿಕೊಳ್ತಾನೆ ಒಕೆ.. ಆದ್ರೆ ಆಕೆಯನ್ನ ಕೂಡಿ ಹಾಕೋದು.. ಆಕೆ ಯಾರೊಂದಿಗೂ ಕ್ಲೋಸ್ ಆಗ್ಬಾರ್ದು ಅಂತಾ ಹೇಳೊದು.. ತವರು ಮನೆಗೆ ಹೋಗಲು ಬಿಡದೇ ಇರೋದು.. ತವರು ಮನೆಯವರನ್ನ ತನ್ನ ಮನೆಗೆ ಬರಲು ಬಿಡದೇ ಇರೋದನ್ನ ನಿಜ ಜೀವನದಲ್ಲಿ ಯಾವ ಹೆಣ್ಣು ಕೂಡ ಸಹಿಸಲ್ಲ.. ಇಷ್ಟೊಂದು ಪೊಸೆಸಿವ್ ಆಗೋದು.. ಇಂತಹ ವಿಚಿತ್ರ ವರ್ತನೆ ಹೆಣ್ಣು ಮಕ್ಕಳಿಗೆ ಸಿಟ್ಟು ಬರೋದು ಸಹಜ.. ಆದ್ರೆ ಜಾಹ್ನವಿ, ಜಯಂತ್ ಅನ್ನ ಹೇಗೆ ಸಹಿಸಿಕೊಂಡಿದ್ದಾಳೆ.. ಯಾಕೆ ಏನೂ ಪ್ರಶ್ನೆ ಮಾಡಲ್ಲ ಅಂತಾ ವೀಕ್ಷಕರು ಕೇಳ್ತಿದ್ದಾರೆ.

ಜಾಹ್ನವಿಯನ್ನು ಮನೆಯಲ್ಲಿ ಕೂಡಿ ಹಾಕುತ್ತಿರುವ ಜಯಂತ್  ಏನು ಬೇಕಾದ್ರೂ ಮಾಡಲು ರೆಡಿ ಇದ್ದಾನೆ.. ಒಟ್ಟಿನಲ್ಲಿ ಜಾಹ್ನವಿ ಪರಿಸ್ಥಿತಿ ತುಂಬ ಕಷ್ಟ ಇದೆ. ಇನ್ನು  ಜಾಹ್ನವಿಯನ್ನು ವಿಶ್ವ ಪ್ರೀತಿ ಮಾಡುತ್ತಿದ್ದಾನೆ ಅಂತ ಜಯಂತ್ ಗೆ ಗೊತ್ತಾದರೆ ಏನಾಗಬಹುದು? ಜಾಹ್ನವಿಗೆ ಜಯಂತ್ ಮಾನಸಿಕ ಆರೋಗ್ಯ ಸರಿ ಇಲ್ಲ ಅಂತ ಗೊತ್ತಾದಾಗ ಕಥೆ ಬೇರೆ ತಿರುವು ಪಡೆದುಕೊಳ್ಳುತ್ತಾ? ಜಯಂತ್ ಮಾನಸಿಕ ಆರೋಗ್ಯವನ್ನು ಜಾಹ್ನವಿ ಸರಿಪಡಿಸ್ತಾಳಾ? ಅಥವಾ ಜಯಂತ್ ಕಪಿಮುಷ್ಠಿಯಿಂದ ಅವಳು ಹೊರಬರುತ್ತಾಳಾ ಅಂತ ವೀಕ್ಷಕರ ಮುಂದೆ ಇರುವ ಪ್ರಶ್ನೆಗಳು.

Shwetha M