ಬಾಳಲ್ಲಿ ದುರಂತ.. ಬದುಕಿಗಾಗಿ ರಿಸ್ಕ್‌.. ಲಕ್ಷ್ಮೀ ನಿವಾಸಕ್ಕೆ ಶ್ವೇತಾ ಗುಡ್‌ಬೈ? – ಲಕ್ಷ್ಮೀ ಪಾತ್ರಕ್ಕೆ ಹೊಸ ನಟಿ ಎಂಟ್ರಿ!

ಬಾಳಲ್ಲಿ ದುರಂತ.. ಬದುಕಿಗಾಗಿ ರಿಸ್ಕ್‌.. ಲಕ್ಷ್ಮೀ ನಿವಾಸಕ್ಕೆ ಶ್ವೇತಾ ಗುಡ್‌ಬೈ? – ಲಕ್ಷ್ಮೀ ಪಾತ್ರಕ್ಕೆ ಹೊಸ ನಟಿ ಎಂಟ್ರಿ!

ಲಕ್ಷ್ಮೀ ನಿವಾಸ ಸೀರಿಯಲ್‌ ನಲ್ಲಿ ಲಕ್ಷ್ಮೀ, ಶ್ರೀನಿವಾಸ್‌ ಗೆ ಒಂದಿಲ್ಲೊಂದು ಸಮಸ್ಯೆ ಎದುರಾಗ್ತಾನೆ ಇದೆ. ವಯಸ್ಸಾದ ಮಕ್ಕಳು ಚೆನ್ನಾಗಿ ನೋಡ್ಕೊಳ್ತಾರೆ.. ಒಟ್ಟಿಗೆ ಖುಷಿ ಖುಷಿಯಿಂದ ಇರ್ಬೋದು ಅಂತಾ ಕನಸು ಕಂಡ ಲಕ್ಷ್ಮೀ, ಶ್ರೀನಿವಾಸ್‌, ಈಗ ದೂರ ದೂರ ಆಗಿದ್ದಾರೆ. ಇದೀಗ ಹರೀಶ ಹಾಗೂ ಸಂತೋಷ್‌ ಅಪ್ಪ ಅಮ್ಮನನ್ನೇ ಪಾಲು ಮಾಡ್ಕೊಂಡಿದ್ದಾರೆ. ಹರೀಶನ ಮನೆಗೆ ಲಕ್ಷ್ಮೀಯನ್ನ ಕರ್ಕೊಂಡು ಹೋದ್ರೆ, ಸಂತೋಷ್‌ ಅಪ್ಪನನ್ನ ಮನೆಯಲ್ಲಿ ಉಳಿಸಿಕೊಂಡಿದ್ದಾನೆ. ಆದ್ರೀಗ ಸೀರಿಯಲ್‌ ನಲ್ಲಿ ಕಳೆದ ಹಲವು ದಿನಗಳಿಂದ ಪ್ರಮುಖ ಪಾತ್ರವೇ ಕಾಣಿಸಿಕೊಳ್ತಿಲ್ಲ.. ಲಕ್ಷ್ಮೀ ಪಾತ್ರವನ್ನ ಸೀರಿಯಲ್‌ ನಲ್ಲಿ ತೋರಿಸಲಾಗ್ತಿಲ್ಲ..

ಇದನ್ನೂ ಓದಿ: ಒಂದಲ್ಲಾ.. ಎರಡಲ್ಲಾ.. ಮೂರು ಸೂಪರ್ ಓವರ್

ಲಕ್ಷ್ಮೀ ನಿವಾಸ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಒಂದ್ಕಡೆ ಸಿದ್ದೇಗೌಡ್ರು ಜೈಲು ಸೇರಿದ್ದಾರೆ. ಗಂಡನ ತಪ್ಪಿಲ್ಲ.. ಹೇಗಾದ್ರೂ ಮಾಡಿ ಸಿದ್ದೇಗೌಡ್ರನ್ನ ಬಚಾವ್‌ ಮಾಡ್ಬೇಕು ಅಂತಾ ಭಾವನಾ ಒದ್ದಾಡ್ತಿದ್ದಾಳೆ. ಮತ್ತೊಂದ್ಕಡೆ ಜಾಹ್ನವಿ ವಿಶ್ವನ ಮನೆಯಲ್ಲಿದ್ದಾಳೆ. ಜಯಂತ್‌ ಹಾಗೂ ತನ್ನ ಮನೆಯವರ ಕಣ್ಣಿಂದ ತಪ್ಪಿಸಿಕೊಳ್ಳಲು ಜಾನು ಒದ್ದಾಡ್ತಿದ್ದಾಳೆ.. ಮತ್ತೊಂದ್ಕಡೆ ಸಂತೋಷ್‌ ಹಾಗೂ ಹರೀಶ ಸೇರ್ಕೊಂಡು ತಂದೆ ತಾಯಿಯನ್ನ ದೂರ ದೂರ ಮಾಡಿದ್ದಾರೆ. ಹರೀಶ ತಾಯಿಯನ್ನ ತನ್ನ ಮನೆಗೆ ಕರ್ಕೊಂಡು ಹೋಗಿದ್ರೆ, ಸಂತೋಷ್‌ ಶ್ರೀನಿವಾಸ್‌ನ ಮನೆಯಲ್ಲೇ ಉಳಿಸಿಕೊಂಡಿದ್ದಾನೆ.. ಹರೀಶ ಲಕ್ಷ್ಮೀಯನ್ನ ಮನೆಗೆ ಕರ್ಕೊಂಡು ಬಂದ ಬಳಿಕ ಲಕ್ಷ್ಮೀ ಪಾತ್ರ ಕಾಣೆಯಾಗಿದೆ. ಅದಾದ ಬಳಿಕ ಲಕ್ಷ್ಮೀ ಪಾತ್ರವನ್ನ ತೋರಿಸಿಲ್ಲ.. ಜಾನು ಅಜ್ಜಿಗೆ ಹುಷಾರಿಲ್ಲ.. ಆಕೆಯನ್ನ ನೋಡಿಕೊಳ್ಳಲು ಹೋಗಿದ್ದಾರೆ ಅಂತಾ ತೋರಿಸಲಾಗಿದೆ.. ಆದ್ರೀಗ ಲಕ್ಷ್ಮೀ ಪಾತ್ರಧಾರಿ ಸೀರಿಯಲ್‌ ಬಿಟ್ಟಿದ್ದಾರೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಲಕ್ಷ್ಮೀ ಪಾತ್ರಕ್ಕೆ ಹೊಸ ನಟಿಯನ್ನ ಕೂಡ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ.

ಹೌದು, ಸ್ಯಾಂಡಲ್ ವುಡ್‌ ನಟಿ ಶ್ವೇತಾ ಸುಮಾರು 25ಕ್ಕೂ ಹೆಚ್ಚು ಕನ್ನಡ ಸಿನಿಮಾಗಲ್ಲಿ ನಟಿಸಿದ್ರು.. ಶ್ವೇತಾ ನಟನೆಯ ಚೈತ್ರದ ಪ್ರೇಮಾಂಜಲಿ ಅನ್ನೋ ಸಿನಿಮಾವನ್ನು ಒಂದು ಜನರೇಶನ್ ಮಂದಿ ಮರೆಯೋದಿಲ್ಲ. ಅದರ ಹಾಡುಗಳು ಅಷ್ಟು ಇಂಪು, ಕಥೆ ಅಷ್ಟು ನವಿರಾದದ್ದು, ಇನ್ನು ನಟನೆ ವಿಚಾರ ಕೇಳೋದೇ ಬೇಡ. ಅಷ್ಟು ಅದ್ಭುತವಾಗಿ ನಟಿಸಿ ಕರುನಾಡಿನ ಜನರ ಮನಗೆದ್ದಿದ್ರು.. ಕುಟುಂಬ ಸಿನಿಮಾದ ಬಳಿಕ ಯಾವ ಕನ್ನಡ ಸಿನಿಮಾದಲ್ಲೂ ನಟಿಸಿರ್ಲಿಲ್ಲ.. ಅದಕ್ಕೆ ಕಾರಣ ವೈಯಕ್ತಿಕ ಜೀವನದಲ್ಲಿ ನಡೆದ ದುರಂತ. ಶ್ವೇತಾ ಪತಿಯ ಹೆಸರು ಶ್ರೀಧರ್. ಕೆಲ ವರ್ಷದ ಹಿಂದೆ ಶ್ರೀಧರ್‌ ಗೆ ದುಡ್ಡಿನ ವಿಚಾರದಲ್ಲಿ ಮೋಸವಾಗುತ್ತೆ. ಇದ್ರಿಂದಾಗಿ ಇಡೀ ಕುಟುಂಬ ಕಷ್ಟಕ್ಕೆ ಒಳಗಾಗುತ್ತೆ. ಗಾಯದ ಮೇಲೆ ಬರೆ ಎಳೆದಂತೆ ಇದೇ ಟೈಮ್‌ ನಲ್ಲಿ ಶ್ರೀಧರ್‌ ಬೈಕ್‌ ಆಕ್ಸಿಡೆಂಟ್‌ ಆಗುತ್ತೆ. ಈ ಅಪಘಾತದಿಂದಾಗಿ ಶ್ರೀಧರ್‌ ಇಂದಿಗೂ ಸ್ವತಂತ್ರವಾಗಿ ಓಡಾಡಲಾಗದ ಸ್ಥಿತಿಯಲ್ಲಿದ್ದಾರೆ. ಶ್ರೀಧರ್‌ಗೆ ವೀಲ್‌ ಚೇರ್‌ ಆಧಾರ. ಹೀಗಾಗಿ ಶ್ರೀಧರ್ ದುಡಿಯಲಾಗದೇ ಕುಟುಂಬದ ಜವಾಬ್ದಾರಿಯೆಲ್ಲ ನಟಿ ಶ್ವೇತಾ ಹೆಗಲ ಮೇಲೆ ಬೀಳುತ್ತೆ. ಒಂದು ಕಡೆ ಗಂಡ, ಮತ್ತೊಂದು ಕಡೆ ಮಕ್ಕಳು.. ಎಲ್ಲವನ್ನು ನಿಭಾಯಿಸಬೇಕಾದ ಪರಿಸ್ಥಿತಿ ಇರುವುದರಿಂದ ಈ ಪ್ರತಿಭಾವಂತ ನಟಿ ಸಿನಿಮಾರಂಗದಿಂದಲೇ ದೂರವಾಗುತ್ತಾರೆ. ಈ ಎಲ್ಲ ವಿಚಾರವನ್ನು ನಟಿ ಶ್ವೇತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ರು.. ಸಮಸ್ಯೆಗಳು ಬಗೆಹರಿತಿದ್ದಂತೆ ಶ್ವೇತಾ ಮತ್ತೆ ನಟನೆಗೆ ಎಂಟ್ರಿ ಕೊಟ್ಟಿದ್ರು. ಸುಮಾರು 20 ವರ್ಷಗಳ ನಂತ್ರ ಲಕ್ಷ್ಮೀ ನಿವಾಸ ಸೀರಿಯಲ್‌ ಮೂಲಕ ನಟನೆಗೆ ಕಮ್‌ಬ್ಯಾಕ್‌ ಮಾಡಿದ್ರು.. ಆದ್ರೀಗ ಲಕ್ಷ್ಮೀ ಪಾತ್ರಕ್ಕೂ ಶ್ವೇತಾ ಗುಡ್‌ಬೈ ಹೇಳಿದ್ದಾರೆ ಎಂದು ಹೇಳಲಾಗ್ತಿದೆ.

ಶ್ವೇತಾ ಸೀರಿಯಲ್‌ ಬಿಡಲು ಕಾರಣ ಏನು ಅನ್ನೋದು ರಿವೀಲ್‌ ಆಗಿದೆ. ನಟಿ ಶ್ವೇತಾ ಚೆನ್ನೈನಲ್ಲಿ ನೆಲೆಸಿದ್ದಾರೆ.  ಲಕ್ಷ್ಮೀ ನಿವಾಸ ಸೀರಿಯಲ್‌ ಶೂಟಿಂಗ್‌ ತುಮಕೂರು ಹಾಗೂ ಬೆಂಗಳೂರಿನಲ್ಲಿ ನಡೆಯುತ್ತೆ ಎಂದು ಹೇಳಲಾಗ್ತಿದೆ. ಚೆನ್ನೈನಿಂದ ಶೂಟಿಂಗ್‌ ಗೆ ಬರಲು ಶ್ವೇತಾ ಅವ್ರಿಗೆ ಕಷ್ಟವಾಗ್ತಿದೆ ಎಂದು ಹೇಳಲಾಗ್ತಿದೆ. ಸೀರಿಯಲ್‌ ಬಿಡಲು ಇದೇ ಕಾರಣ ಅಂತಾ ಹೇಳಲಾಗ್ತಿದೆ. ಲಕ್ಷ್ಮೀ ಪಾತ್ರಕ್ಕೆ ನಟಿ ಶ್ವೇತಾ ಬದಲು ಗಟ್ಟಿಮೇಳ ಸೀರಿಯಲ್‌ ನಟಿ ಸ್ವಾತಿ ಅವರನ್ನ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ವಾಹಿನಿ ಆಗ್ಲೀ, ಸೀರಿಯಲ್‌ ಟೀಮ್‌ ಆಗ್ಲೀ.. ನಟಿ ಆಗ್ಲೀ.. ಎಲ್ಲೂ ಹೇಳಿಕೊಂಡಿಲ್ಲ.. ಇದು ಜಸ್ಟ್‌ ಅಂತೆ ಕಂತೆಗಳಷ್ಟೆ.. ಮುಂದಿನ ದಿನಗಳಲ್ಲಿ ಈ ಬಗ್ಗೆ ಗೊತ್ತಾಗಲಿದೆ.

Shwetha M

Leave a Reply

Your email address will not be published. Required fields are marked *