ಸಿದ್ದೇಗೌಡ್ರು, ಗೌಡ್ರ ವಾಯ್ಸ್ ಒಂದೇ ಅಲ್ವಾ? – ಭಾವನಾ ಇಷ್ಟೊಂದು ಪೆದ್ದಿನಾ?
ವೀಕ್ಷಕರಿಗೆ ಕಾಡುತ್ತಿದೆ ವಾಯ್ಸ್‌ ಪ್ರಶ್ನೆ!!

ಸಿದ್ದೇಗೌಡ್ರು, ಗೌಡ್ರ ವಾಯ್ಸ್ ಒಂದೇ ಅಲ್ವಾ? – ಭಾವನಾ ಇಷ್ಟೊಂದು ಪೆದ್ದಿನಾ?ವೀಕ್ಷಕರಿಗೆ ಕಾಡುತ್ತಿದೆ ವಾಯ್ಸ್‌ ಪ್ರಶ್ನೆ!!

ಸಿದ್ದೇ ಗೌಡ್ರು ಭಾವನ ಹಿಂದೆ ಬಿದ್ದಿದ್ದು ಆಯ್ತು.. ತಾಳಿ ಕಟ್ಟಿದ್ದೂ ಆಯ್ತು.. ಮನದರಸಿಗೆ ತಾಳಿ ಕಟ್ಟಿರುವ ಖುಷಿಯಲ್ಲಿ ಇದ್ದಾರೆ ಸಿದ್ದೇ ಗೌಡ್ರು.. ಆದ್ರೆ ಭವಾನಾ ಮಾತ್ರ ಕೊರಳಿಗೆ ತಾಳಿ ಬಿದ್ದಾಗಿನಿಂದ ಒಳಗೊಳಗೆ ನಕರಯಾತನೆ ಅನುಭವಿಸುತ್ತಿದ್ದಾಳೆ.. ತನಗೆ ತಾಳಿ ಕಟ್ಟಿದ್ದು ಯಾರು ಅಂತಾ ಗೊತ್ತಾಗದೇ ಕ್ಷಣ ಕ್ಷಣಕ್ಕೂ ಮರುಗುತ್ತಿದ್ದಾಳೆ.. ಸಿದ್ದೇಗೌಡ್ರಿಗೆ ಕಾಲ್‌ ಮಾಡಿ ನಡೆದಿರುವ ವಿಷಯ ಹೇಳಿದ್ದಾಳೆ ಭಾವನಾ.. ಇನ್ನೇನಿದ್ರೂ ತಾಳಿ ಕಟ್ಟಿದ್ದು ಯಾರು ಅನ್ನೋ ಗುಟ್ಟು ಭಾವನಾಗೆ ಗೊತ್ತಾಗೊದೊಂದೇ ಬಾಕಿ.. ಆದ್ರೆ ಇದೀಗ ವೀಕ್ಷಕರು ಸೀರಿಯಲ್‌ನಲ್ಲಿ ಬರೋ ಸಣ್ಣ ಪುಟ್ಟ ತಪ್ಪುಗಳನ್ನೇ ಬೊಟ್ಟು ಮಾಡುತ್ತಿದ್ದಾರೆ.. ಜಾಣೆಯಾಗಿರುವ ಭಾವನಾಳನ್ನ ಇಷ್ಟೊಂದು ಪೆದ್ದಿ ಮಾಡಿದ್ದು ಯಾಕೆ ಅಂತಾ ವೀಕ್ಷಕರು ಸೀರಿಯಲ್‌ ಟೀಂ ಅನ್ನ ಪ್ರಶ್ನೆ ಮಾಡುತ್ತಿದ್ದಾರೆ..

ಈಗೀಗ ಸೀರಿಯಲ್‌ಗಳ ಕತೆ ವೀಕ್ಷಕರಿಗೆ ತಲೆ ಕೆಡುವಂತೆ ಮಾಡುತ್ತಿವೆ.. ಧಾರಾವಾಹಿಯಲ್ಲಿ ಬರೋ ಸನ್ನಿವೇಶಗಳು, ಸಂದರ್ಭಗಳು ಕೆಲವೊಂದು ಬಾರಿ ಚಿತ್ರ, ವಿಚಿತ್ರವಾಗಿರುತ್ತವೆ. ಇದಕ್ಕೆ ಬೆಸ್ಟ್‌ ಎಕ್ಸಾಂಪಲ್‌ ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಲಕ್ಷ್ಮೀ ನಿವಾಸ ಸೀರಿಯಲ್‌ ಅಂತಾ ಹೇಳಿದ್ರೆ ತಪ್ಪಾಗಲ್ಲ.. ಲಕ್ಷ್ಮೀ ನಿವಾಸದಲ್ಲಿ ಬರೋ ಸೈಕೋ ಜಯಂತ್‌ ಪಾತ್ರ ನೋಡಿದ್ರೆ ಅನೇಕ ವೀಕ್ಷಕರು ಹಿಡಿ ಹಿಡಿ ಶಾಪ ಹಾಕ್ತಾರೆ.. ಜಾಹ್ನವಿ ಮೇಲಿನ ಅತಿಯಾದ ಪ್ರೀತಿಯಿಂದಾಗಿ ಜಯಂತ್‌ ಚಿತ್ರ ವಿಚಿತ್ರವಾಗಿ ಆಡುತ್ತಿರುತ್ತಾನೆ. ಇನ್ನು ಈ ಸೀರಿಯಲ್‌ನಲ್ಲಿ ಭಾವನಾ ಸಿದ್ದೇಗೌಡ್ರ ಪಾತ್ರ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತೆ. ಸಿದ್ದೇಗೌಡ್ರಿಗೆ ಮದುವೆ ಮಾಡಲೆಂದು ಮನೆಯವರು ಓಡಾಡ್ತಿದ್ರೆ, ಇತ್ತ ಸಿದ್ದೇಗೌಡ್ರು ಭಾವನಾಳಿಗೆ ಗುಟ್ಟಾಗಿ ತಾಳಿ ಕಟ್ಟಿದ್ದಾರೆ. ತಾಳಿ ಕಟ್ಟಿದ್ಮೇಲೆ ಭಾವನಾ ಮಂಕಾಗಿದ್ದಾಳೆ.. ಊಟ-ತಿಂಡಿಯನ್ನು ಸರಿಯಾಗಿ ಮಾಡುತ್ತಿಲ್ಲ. ಸೀರೆ ಹಾಕಿದರೂ ಸೆರಗು ಕುತ್ತಿಗೆಯನ್ನು ಮುಚ್ಚಿಯೇ ಇರುತ್ತದೆ. ಆದರೆ ಮನೆಯವರ್ಯಾರು ಇದನ್ನು ಗಮನಿಸುತ್ತಲೇ ಇಲ್ಲ. ಸದಾ ತಾಳಿ ಕಟ್ಟಿದವನ ಬಗ್ಗೆಯೇ ಚಿಂತಿಸುತ್ತಿರುತ್ತಾಳೆ.. ಗಂಡ ಯಾರು ಅಂತಾ ಗೊತ್ತಾಗದೇ, ಮನೆಯವರೊಂದಿಗೆ ವಿಚಾರ ಹಂಚಿಕೊಳ್ಳಲು ಆಗದೇ ಒದ್ದಾಡುತ್ತಿದ್ದಾಳೆ.

ಇನ್ನು ಭಾವನಾಗೆ ಒಳ್ಳೆಯ ಸ್ನೇಹ ಇರುವುದು ಗೌಡ್ರ ಬಳಿ. ತಾನೂ ಏನನ್ನೇ ಆದರೂ ಹೇಳಿಕೊಳ್ಳಬಹುದು ಎಂಬ ನಂಬಿಕೆ ಇಟ್ಟುಕೊಂಡಿದ್ದಾಳೆ. ಈ ತಾಳಿ ವಿಚಾರವನ್ನು ಮನೆಯಲ್ಲಿ ಯಾರ ಬಳಿಯೂ ಹೇಳಿಕೊಳ್ಳುವುದಕ್ಕೆ ಆಗುತ್ತಿಲ್ಲ. ಆದರೆ ಮನಸ್ಸು ಹಗುರಾಗುತ್ತಿಲ್ಲ, ಯಾವುದೇ ದಾರಿಯೂ ಸಿಗುತ್ತಿಲ್ಲ. ಹೀಗಾಗಿ ಗೌಡ್ರ ಬಳಿ ಮಾತನಾಡುವುದಕ್ಕೆ ಅಂತ ಕಾಲ್ ಮಾಡಿದ್ದಾಳೆ. ಅಂದು ನಡೆದಿದ್ದೆಲ್ಲವನ್ನು ಹೇಳಿದ್ದಾಳೆ. ಗೊತ್ತಿಲ್ಲದೇ ತಾಳಿ ಕಟ್ಟಿ ಹೋದ ಅವನು ಹೇಡಿ ಎಂದು ಗೌಡ್ರ ಬಳಿಯೇ ಬೈದಿದ್ದಾಳೆ. ಈ ವೇಳೆ ಸಿದ್ದೇಗೌಡ್ರು ಭಾವಾನಗೆ ತಾಳಿಯ ಮಹತ್ವ ತಿಳಿಸಲು ಹೋಗಿದ್ದಾರೆ. ಹೀಗೆ ಗೊತ್ತಿಲ್ಲದೆ ತಾಳಿ ಕಟ್ಟಿದ್ದಾನೆ ಎಂದರೆ ಅದು ದೇವರ ಇಚ್ಚೆಯೇ ಇರಬಹುದು ಅಲ್ಲವೇ ಎಂದಿದ್ದಾನೆ. ಆದರೆ ಗೌಡ್ರ ಮಾತನ್ನು ಕೇಳದ ಭಾವನಾ, ತಾಳಿ ಕಟ್ಟಿದ ಮೇಲೆ ತನ್ನ ಸ್ಥಿತಿ ಹೇಗಾಗಿದೆ ಎಂಬುದನ್ನು ವಿವರಿಸಿದ್ದಾಳೆ. ಖುಷಿಯ ಜೊತೆಗೂ ಮಾತನಾಡುವುದಕ್ಕೆ ಆಗದಷ್ಟು ಸಂಕಟ ಪಡುತ್ತಿರುವ ಬಗ್ಗೆಯೂ ಹೇಳಿದ್ದಾಳೆ. ತಾಳಿ ಕಟ್ಟಿದವನ ಬಗ್ಗೆ ಕೋಪದಲ್ಲಿ ಮಾತನಾಡಿ, ಸಮಾಧಾನ ಮಾಡಿಕೊಳ್ಳಿ ಎಂದರು ಕೇಳದೆ ಕಣ್ಣೀರು ಹಾಕುತ್ತಲೇ ಕಾಲ್ ಕಟ್ ಮಾಡಿದ್ದಾಳೆ. ಭಾವನಾಳ ಅಳು ಕೇಳಿಸಿಕೊಂಡ ಗೌಡ್ರು ಕುಸಿದು ಬಿದ್ದಿದ್ದಾರೆ. ಈ ಸೀನ್‌ ವೀಕ್ಷಕರನ್ನು ಭಾವುಕರನ್ನಾಗಿ ಮಾಡಿದ್ರು ಹಲವು ಪ್ರಶ್ನೆಗಳು ಕಾಡುತ್ತಿವೆ..

ಸಾಮಾನ್ಯವಾಗಿ ಯಾರಾದ್ರು ನಮ್ಗೆ ಕ್ಲೋಸ್‌ ಆದ್ರೆ.. ಆ ವ್ಯಕ್ತಿ ಬೇರೆ ನಂಬರ್‌ನಿಂದ ಕಾಲ್‌ ಮಾಡಿದ್ರೆ, ನಾವು ಆ ಧ್ವನಿಯನ್ನು ಕಂಡು ಹಿಡಿತೀವಿ.. ಆದ್ರೆ ಭಾವನಾ, ಗೌಡ್ರ ಜೊತೆ ಸಾಕಷ್ಟು ಸಲ ಮಾತನಾಡಿದ್ದಾಳೆ. ಹಾಗೇ ಸಿದ್ದೇಗೌಡ್ರನ್ನ ಬಹಳ ಹತ್ತಿರದಿಂದ ನೋಡಿದ್ದಾಳೆ. ಅವನ ಮಾತನ್ನು ಕೇಳಿಸಿಕೊಂಡಿದ್ದಾಳೆ. ಆದರೂ ಇಬ್ಬರ ವಾಯ್ಸ್ ಮೇಲೆ ಭಾವನಾಳಿಗೆ ಯಾಕೆ ಅನುಮಾನ ಬರ್ತಿಲ್ಲ ಅನ್ನೋದು ಪ್ರೇಕ್ಷಕರ ಪ್ರಶ್ನೆ. ಇದೆಲ್ಲಾ ನಿರ್ಧಾರ ಮಾಡುವುದು ನಿರ್ದೇಶಕರೇ ಎಂಬುದು ಅವರಿಗೂ ಗೊತ್ತು. ಆದರೂ ಭಾವನಾಳನ್ನು ಇಷ್ಟೊಂದು ದಡ್ಡಿ ಮಾಡಿಬಿಟ್ಟರಲ್ಲ ನಿರ್ದೇಶಕರು ಎಂಬುದೇ ನೋಡುಗರ ಬೇಸರ. ಜೊತೆಗೆ ಭಾವನಾಳ ನೋವನ್ನು ನೋಡುವುದಕ್ಕೆ ಆಗ್ತಿಲ್ಲ, ಗೌಡ್ರು ಬೇಗ ಸತ್ಯ ಹೇಳಲಿ ಅಂತಿದ್ದಾರೆ ಫ್ಯಾನ್ಸ್‌.

Shwetha M

Leave a Reply

Your email address will not be published. Required fields are marked *