ಭಾವನಾಗೆ ಬಲೆ ಬೀಸಿದ ಜಯಂತ್ – ಅಕ್ಕನಿಗಾಗಿ ಓಡೋಡಿ ಬರ್ತಾಳಾ ಜಾನು? – ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್

ಲಕ್ಷ್ಮೀ ನಿವಾಸ ಧಾರಾವಾಹಿ ಈಗ ರೋಚಕ ಘಟ್ಟ ತಲುಪಿದೆ. ಧಾರವಾಹಿ ಹೀರೋ ಸಿದ್ದೇಗೌಡರೇ ಬಂಧನಕ್ಕೊಳಗಾಗಿದ್ದಾರೆ. ಗಂಡನ ಬಂಧನದಿಂದ ಭಾವನಾ ದಿಕ್ಕೇ ತೋಚದಂತಾಗಿದ್ದಾಳೆ. ಇದ್ರ ಮಧ್ಯೆ ಸೈಕೋ ಜಯಂತ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಸರಿಯಾಗಿಯೇ ಬಲೆ ಬೀಸಿದ್ದಾನೆ.
ಇದನ್ನೂ ಓದಿ:ಭಾಗ್ಯ ಮೇಲೆ ಆದೀಶ್ವರ್ಗೆ ಲವ್.. ಉದ್ಯಮಿ ಕೈ ಹಿಡಿತಾಳಾ ಕುಸುಮಾ ಸೊಸೆ! – ತಾಂಡವ್ Vs ಆದೀಶ್ವರ್.. ಯಾರು ಬೆಸ್ಟ್?
ಭಾವನಾಳನ್ನ ಅತಿಯಾಗಿ ಪ್ರೀತಿಸುತ್ತಿದ್ದ ಸಿದ್ದೇಗೌಡರು ಜೈಲು ಪಾಲಾಗಿದ್ದಾರೆ. ಅರ್ಧ ಸತ್ಯ ತಿಳಿದುಕೊಂಡಿರೋ ಸಿದ್ದೇಗೌಡರು ದುಡುಕಿ ತಾನೇ ಜೈಲುಪಾಲಾಗಿದ್ದಾರೆ. ತನ್ನ ಮದುವೆಯನ್ನು ನಿಲ್ಲಿಸಲು ಸಿದ್ದೇಗೌಡರು ಕಾರ್ ಆಕ್ಸಿಡೆಂಟ್ ಮಾಡಿದ್ರಾ ಅನ್ನೋ ಗೊಂದಲಲ್ಲಿ ಭಾವನಾ ಸಿಲುಕಿದ್ದಾಳೆ. ಇದರ ಮಧ್ಯೆ ಸೊಸೆ ಅಂತಾ ಒಪ್ಪಿಕೊಳ್ಳದೇ ಕಿರಿಕಿರಿ ಮಾಡ್ತಿದ್ದ ಸಿದ್ದೇಗೌಡರ ತಾಯಿ ಈಗ ಮತ್ತಷ್ಟೂ ಸಿಟ್ಟಾಗಿದ್ದಾಳೆ. ಭಾವನಾ ಕಂಡ್ರೆ ಉರಿದುಬೀಳುತ್ತಿದ್ದಾಳೆ. ಇತ್ತ ಸಿದ್ದೇಗೌಡರ ತಂದೆ ಜವರೇಗೌಡರು ಸಹ ಅವಮಾನದಿಂದ ಅಜ್ಞಾತಸ್ಥಳಕ್ಕೆ ಸೇರಿಕೊಂಡಿದ್ದಾರೆ.
ಇದೀಗ ಭಾವನಾ ಸಹಾಯಕ್ಕೆ ಸೈಕೋ ಜಯಂತ್ ಎಂಟ್ರಿ ಕೊಡುತ್ತಿದ್ದಾನೆ. ಇದಕ್ಕೆಲ್ಲಾ ಕಾರಣ ಜಯಂತ್ ಮನೆಯಲ್ಲಿರುವ ಶಾಂತಮ್ಮ. ಮೊಬೈಲ್ನಲ್ಲಿ ಸಿದ್ದೇಗೌಡರು ಜೈಲು ಸೇರಿರುವ ನ್ಯೂಸ್ ಜಯಂತ್ ನೋಡುತ್ತಿರುತ್ತಾನೆ. ಆಗ ಅಲ್ಲಿಗೆ ಬಂದ ಶಾಂತಮ್ಮನ ಮುಂದೆ ಜಯಂತ್, ಜೈಲು ಸೇರಿರುವ ಸಿದ್ದೇಗೌಡರು, ಜಾಹ್ನವಿಯ ಅಕ್ಕನ ಗಂಡ. ಜಾನು ಮತ್ತು ಭಾವನಾ ತುಂಬಾ ಅನ್ಯೋನ್ಯವಾಗಿದ್ದರು. ಇಲ್ಲಿಗೆ ಬಂದಾಗಲೂ ಜಾಹ್ನವಿಯನ್ನು ಭಾವನಾ ತುಂಬಾ ಚೆನ್ನಾಗಿ ಮಾಡಿಕೊಂಡಿದ್ದರು. ಭಾವನಾ ಮಿತಭಾಷಿ, ಅವರಿಗೆ ಇಂತಹ ಕಷ್ಟ ಬಂದಿದೆ ಎಂದು ಜಯಂತ್ ಮರುಕಪಟ್ಟಿದ್ದಾನೆ. ಜಯಂತ್ ಮಾತುಗಳನ್ನು ಕೇಳಿದ ಶಾಂತಮ್ಮ, ನೀನು ಈ ಕೇಸ್ ಬಗ್ಗೆ ಸ್ವಲ್ಪ ಗಮನ ಕೊಡಬೇಕಪ್ಪ. ಭಾವನಾಗೆ ಸಹಾಯ ಮಾಡಿದ್ರೆ ನಿನ್ನ ಹೆಂಡ್ತಿ ಜಾಹ್ನವಿ ಆತ್ಮಕ್ಕೂ ಶಾಂತಿ ಸಿಗುತ್ತದೆ ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾಳೆ. ಶಾಂತಮ್ಮಳ ಮಾತಿನಲ್ಲಿ ಅರ್ಥವಿದೆ ಎಂದು ಜಯಂತ್ಗೆ ಅನ್ನಿಸುತ್ತದೆ. ಸಿದ್ದೇಗೌಡರನನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬಂದ್ರೆ ಭಾವನಾ ಅವರಿಗೆ ಸಹಾಯ ಮಾಡಿದಂತಾಗುತ್ತದೆ. ಭಾವನಾ ಅವರು ಖುಷಿಯಾದ್ರೆ, ಜಾಹ್ನವಿಯನ್ನು ಹುಡುಕಲು ಸಹಾಯ ಮಾಡುತ್ತಾರೆ. ಇದರಿಂದ ತನ್ನ ಕೆಲಸಗ ಸಹಾಯವಾಗುತ್ತದೆ ಎಂದು ಸೈಕೋ ಜಯಂತ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲಾನ್ ಮಾಡಿದ್ದಾನೆ.
ಇತ್ತ ಜಾನು ಸಹ ಮನೆಯ ವಿಷಯವನ್ನು ಟಿವಿಯಲ್ಲಿ ನೋಡಿ ಕಣ್ಣೀರು ಹಾಕುತ್ತಿದ್ದಾಳೆ. ಇನ್ನು ಈ ಅಪಘಾತದ ಸತ್ಯ ಜಯಂತ್ನಿಂದಲೇ ಹೊರಬೀಳಬಹುದು ಅಂತಾ ವೀಕ್ಷಕರು ಕೂಡಾ ಕಾಯ್ತಿದ್ದಾರೆ.