ಲಕ್ಷ್ಮೀ ಮೇಲೆ ಕೀರ್ತಿ ಆತ್ಮ – ಡ್ರಾಮಾ ಮಾಡಲು ಹೋಗಿ ದೆವ್ವ ಹಿಡಿತಾ?
ಲಕ್ಷ್ಮೀ ಬಾರಮ್ಮ ಈಗ ಹಾರರ್ ಸೀರಿಯಲ್!

ಲಕ್ಷ್ಮೀ ಮೇಲೆ ಕೀರ್ತಿ ಆತ್ಮ – ಡ್ರಾಮಾ ಮಾಡಲು ಹೋಗಿ ದೆವ್ವ ಹಿಡಿತಾ?ಲಕ್ಷ್ಮೀ ಬಾರಮ್ಮ ಈಗ ಹಾರರ್ ಸೀರಿಯಲ್!

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಈಗ ಥಿಲ್ಲರ್‌ ಸೀರಿಯಲ್‌ ಆಗಿ ಬದಲಾಗಿದೆ. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸಿದೆ.. ಕಾವೇರಿ ಬಣ್ಣ ಬಯಲು ಮಾಡೋಕೆ ಲಕ್ಷ್ಮೀ ಕೀರ್ತಿಯಂತೆ ನಾಟಕವಾಡುತ್ತಿದ್ದಾಳೆ ಅಂತಾ ತೋರಿಸಲಾಗಿತ್ತು.. ಇದೀಗ ನಿಜಕ್ಕೂ ಕೀರ್ತಿಯ ಆತ್ಮ ಲಕ್ಷ್ಮೀ ದೇಹ ಸೇರಿಕೊಂಡಿತಾ ಅನ್ನೋ ಪ್ರಶ್ನೆ ಎದುರಾಗಿದೆ.. ಹಾಗಾದ್ರೆ ತನ್ವಿ ರಾವ್‌ ಕೀರ್ತಿ ಪಾತ್ರಕ್ಕೆ ಗುಡ್‌ಬೈ ಹೇಳಿದ್ರಾ ಅನ್ನೋ ಅನುಮಾನ ಕೂಡ ಶುರುವಾಗಿದೆ..

ಇದನ್ನೂ ಓದಿ: ಏನಿದು ಮಹಿಷ ದಸರಾ ವಿವಾದ..? – ಮಹಿಷ ದಸರಾ ಇತಿಹಾಸವೇನು..?

ಲಕ್ಷ್ಮೀ ಬಾರಮ್ಮ ಟರ್ನ್‌ ಆಂಡ್‌ ಟ್ವಿಸ್ಟ್‌ ನಿಂದ ಕೂಡಿದೆ. ಮುಂದೇನಾಗುತ್ತೆ ಅಂತಾ ಸೀರಿಯಲ್‌ ಪ್ರೇಮಿಗಳು ಕಾದು ಕೂರುವಂತೆ ಸೀರಿಯಲ್‌ ಕತೆ ಸಾಗ್ತಾ ಇದೆ. ಕಾವೇರಿ ಮುಚ್ಚಿಟ್ಟ ಸತ್ಯವನ್ನ ಹೊರ ತರ್ಬೇಕು ಅಂತಾ ಲಕ್ಷ್ಮೀ ಗಂಗಾ ಒತೆ ಸೇರಿ ನಾಟಕವಾಡ್ತಿದ್ದಾಳೆ ಅಂತಾ ಸೀರಿಯಲ್‌ ನಲ್ಲಿ ತೋರಿಸಲಾಗಿತ್ತು.. ಇದು ಡ್ರಾಮಾ  ಅಂತ ಗೊತ್ತಾದ ಮೇಲೆ ಜನರಿಗೆ ತುಂಬಾನೆ ನಿರಾಸೆ ಉಂಟಾಗಿತ್ತು. ಆದರೆ ಇದೀಗ ಮತ್ತೆ ಹಾರರ್ ಎಳೆಯನ್ನು ಕಥೆಯಲ್ಲಿ ಸೇರಿಸಲಾಗಿದೆ. ಲಕ್ಷ್ಮೀ ನಟನೆ, ಕಥೆಯನ್ನು ತೆಗೆದುಕೊಂಡು ಹೋಗುತ್ತಿರುವ ರೀತಿಗೆ ವೀಕ್ಷಕರು ಥ್ರಿಲ್ ಆಗಿದ್ದಾರೆ.

ಹೌದು, ಕೀರ್ತಿ ಸಾವಿಗೆ ನ್ಯಾಯ ಕೊಡಿಸ್ತೇನೆ ಅಂತಾ ಲಕ್ಷ್ಮೀ ಹೊರಟಿದ್ದಾಳೆ.. ಹೀಗಾಗಿ ಕೀರ್ತಿ ದೆವ್ವ ಮೈಮೇಲೆ ಬಂದವರಂತೆ ಲಕ್ಷ್ಮೀ ಡ್ರಾಮಾ ಮಾಡ್ತಿದ್ದಾಳೆ.. ಈ ವಿಚಾರ ಕಾವೇರಿಗೆ ಗೊತ್ತಾಗಿದೆ. ಮತ್ತೊಂದೆಡೆ ವೈಷ್ಣವ್ ಗೆ ಅಮ್ಮನ ಮೇಲೆ ಅನುಮಾನ ಹೆಚ್ಚಾಗಿದೆ. ತನ್ನ ಮೇಲಿನ ಅನುಮಾನವನ್ನು ಲಕ್ಷ್ಮೀ ಮೇಲೆ ತಿರುಗಿಸಲು ಕಾವೇರಿ ಶತಪ್ರಯತ್ನ ಮಾಡ್ತಿದ್ದಾಳೆ.. ಹೀಗಾಗಿ ಲಕ್ಷ್ಮೀ ಮಾಡ್ತಿರೋದು ನಾಟಕ, ಡಾಕ್ಟರ್ ಹೇಳಿರೋದು ಕೇಳಿಲ್ವಾ? ಅವಳಿಂದಾಗಿಯೇ ನಾನು ಹೀಗಾಗಿರೋದು ಎನ್ನುತ್ತಾಳೆ ಕಾವೇರಿ.

ಆದ್ರೆ ವೈಷ್ಣವ್‌ ಲಕ್ಷ್ಮೀಯನ್ನ ವಹಿಸಿಕೊಂಡು ಬರ್ತಾನೆ..  ಈ ವೇಳೆ ಮನೋ ವೈದ್ಯೆ ಭಯದಿಂದಲೇ ಓಡೋಡಿ ಬಂದಿದ್ದಾರೆ.. ಲಕ್ಷ್ಮೀ ಇದ್ದಕ್ಕಿದ್ದಂತೆ ಕೀರ್ತಿ ಆಗಿ ಬದಲಾಗಿದ್ದಾಳೆ.. ಅವಳಿಗೆ ಅನ್ಯಾಯ ಆಗಿದ್ಯಂತೆ.. ಅದಕ್ಕೆ ಉತ್ತರ ಸಿಗೋವರೆಗೂ ಯಾರನ್ನೂ ಬಿಡಲ್ಲ ಎಂದು ಹೇಳಿರೋದಾಗಿ ವೈದ್ಯೆ ಹೇಳುವಾಗ ಕಾವೇರಿ ಭಯದಿಂದ ನಡುಗ್ತಾಳೆ.

ಮತ್ತೊಂದೆಡೆ ಕೀರ್ತಿಯಾಗಿ ಬದಲಾದ ಲಕ್ಷ್ಮೀ ಮುಖಕ್ಕೆ ಕುಂಕುಮ ಹಚ್ಚಿ ನೃತ್ಯ ಮಾಡ್ತಿದ್ದಾಳೆ. ಈವಾಗ ನಾಟಕ ಮಾಡಲು ಹೋಗಿ ನಿಜವಾಗಿಯೂ ಲಕ್ಷ್ಮೀ ದೇಹದಲ್ಲಿ ಕೀರ್ತಿ ಆತ್ಮ ಸೇರಿಕೊಂಡಿದೆಯೇನೋ ಅನಿಸುತ್ತಿದೆ. ಹೀಗಾದ್ರೆ ಮುಂದೆ ಕೀರ್ತಿ ಬರೋದೆ ಇಲ್ವಾ? ಕಾವೇರಿ ಎಲ್ಲ ಸತ್ಯವನ್ನ ಹೇಳ್ತಾಳಾ ಅನ್ನೋದನ್ನು ಕಾದು ನೋಡಬೇಕು.

ಕಳೆದೆರಡು ದಿನಗಳ ಎಪಿಸೋಡ್ ನೋಡಿ ಥ್ರಿಲ್ ಆಗಿರುವ ವೀಕ್ಷಕರು, ಲಕ್ಷ್ಮೀ ನಟನೆಗೆ ಭೇಷ್ ಅಂದಿದ್ದಾರೆ. ಲಕ್ಷ್ಮೀ ಆಕ್ಟಿಂಗ್ ದಿನೇ ದಿನೇ ಸೂಪರ್ ಆಗಿದೆ, ಎಕ್ಸಲೆಂಟ್ ಎಂದಿದ್ದಾರೆ, ಅಷ್ಟೇ ಅಲ್ಲ ಅಬ್ಬಾ ಹಾರರ್ ಮೂವಿಯಲ್ಲೂ ಇಷ್ಟು ಸಸ್ಪೆನ್ಸ್ ಇರಲ್ಲ.. ಲಕ್ಷ್ಮೀ ಮತ್ತು ಕೀರ್ತಿ ಇಬ್ಬರು ಸೂಪರ್ ಎಂದಿದ್ದಾರೆ.

ಅಷ್ಟೇ ಅಲ್ಲ ಪ್ರೊಮೊ ನೋಡಿದ ಜನರು ಲಕ್ಷ್ಮೀ ಮತ್ತು ಗಂಗಾ ಜೊತೆ ಡಾಕ್ಟರ್ ಕೂಡ ಸೇರಿಕೊಂಡ್ರು ಅನ್ಸತ್ತೆ, ಇನ್ನು ಕಾವೇರಿಗೆ ಉಳಿಗಾಲವಿಲ್ಲ ಎಂದಿದ್ದಾರೆ. ಇನ್ನೂ ಲಕ್ಷ್ಮಿ ಅಂದ್ರೆ ಲಕ್ಷ್ಮಿ ಬಾಂಬ್ ತರ ನಮ್ಮನ್ನು ಸರ್ಪ್ರೈಸ್ ಮಾಡುತ್ತಾರೆ.  ಒಟ್ಟಾ ಸೀರಿಯಲ್‌ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *