ಸಂಗಣ್ಣ ಕರಡಿಗೆ ಕಾಂಗ್ರೆಸ್‌ ಗಾಳ – ಸಂಸದರ ಮನೆಗೆ ದಿಢೀರ್‌ ಭೇಟಿ ನೀಡಿದ ಲಕ್ಷ್ಮಣ ಸವದಿ!

ಸಂಗಣ್ಣ ಕರಡಿಗೆ ಕಾಂಗ್ರೆಸ್‌ ಗಾಳ – ಸಂಸದರ ಮನೆಗೆ ದಿಢೀರ್‌ ಭೇಟಿ ನೀಡಿದ ಲಕ್ಷ್ಮಣ ಸವದಿ!

ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಸಂಸದ ಸಂಗಣ್ಣ ಕರಡಿ  ಅಸಮಧಾನಗೊಂಡಿದ್ದಾರೆ. ಹೀಗಾಗಿ ಅವರು ಬಿಜೆಪಿ ಪರ ಪ್ರಚಾರದಿಂದ ದೂರ ಉಳಿದಿದ್ದಾರೆ. ಸಂಗಣ್ಣ ಕರಡಿ ಕಾಂಗ್ರೆಸ್‌ ಸೇರುತ್ತಾರೆ ಅನ್ನೋ ವದಂತಿಗಳು ಕೇಳಿ ಬರುತ್ತಲೇ ಇದೆ. ಇದೀಗ ಈ ವದಂತಿಗೆ ಪುಷ್ಠಿ ನೀಡುವಂತೆ ಬೆಳವಣಿಗೆಯೊಂದು ನಡೆದಿದೆ. ಸಂಗಣ್ಣ ಕರಡಿ ಮನೆಗೆ ಲಕ್ಷ್ಮಣ ಸವದಿ  ಭೇಟಿ ನೀಡಿದ್ದಾರೆ.

ಇದನ್ನೂ ಓದಿ:  ಹಾದಿ ತಪ್ಪಿದ ಮಾತಾಡಿ ಕೆಟ್ಟ ಹೆಚ್‌ಡಿಕೆ – ಮೈತ್ರಿ ಮನೆ ಕೆಡಿಸಿತಾ ನಾರಿ ಸಿಟ್ಟು?

ಸಂಗಣ್ಣ ಕರಡಿ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸವದಿ, ಕಾಂಗ್ರೆಸ್ ಪಕ್ಷಕ್ಕೆ ಬರೋದರ ಬಗ್ಗೆ ನಾವು ಮಾತಾಡಿಲ್ಲ. ಅದಕ್ಕೆ ಇನ್ನೂ ಸಮಯ ಇದೆ. ಅದನ್ನ ಸಂಗಣ್ಣ ಅವರು ತೀರ್ಮಾನ ಮಾಡ್ತಾರೆ. ಅವರೂ ರಾಜಕೀಯ ನೆಲೆ ಹುಡುಕಿ ಕೊಳ್ಳಬೇಕು ಅದನ್ನ ಅವರು ಹಾಗೂ ಅವರ ಕುಟುಂಬ ಸದಸ್ಯರು ತೀರ್ಮಾನ ಮಾಡ್ತಾರೆ ಎಂದರು.

ನಾನು ಪಕ್ಷಕ್ಕೆ ಯಾವುದೇ ಆಹ್ವಾನ ಕೊಟ್ಟಿಲ್ಲ ಅದರ ಬಗ್ಗೆ ಚರ್ಚೆ ಕೂಡಾ ಮಾಡಿಲ್ಲ. ಅವರಿಗೆ ಒಳ್ಳೆಯ ಸೂಕ್ತ ಸ್ಥಾನ ಮಾನ ಸಿಗಲಿ ಅನ್ನೋದು ನನ್ನ ಆಸೆ. ಬಂಗಾರ ಯಾರ ಅಂಗಡಿಯಲ್ಲಿ ಇದ್ರೂ ಬಂಗಾರ, ಕುದುರೆ ಓಡತ್ತೆ ಅಂದ್ರೆ ಎಲ್ಲರೂ ಜಿದ್ದು ಕಟ್ಟೋರೇ. ಬಿಜೆಪಿಗೆ ವಿನಾಶಕಾಲೆ ವಿಪರೀತ ಬುದ್ದಿ, 28 ಸೀಟ್ ಗೆಲ್ಲೋದು ಗೋವಾ, ತಮಿಳುನಾಡು ಸೇರಿ ಹೇಳ್ತಿರಬಹುದು ಎಂದು ತಿಳಿಸಿದರು.

Shwetha M