ಲಕ್ಷಣ ಧಾರಾವಾಹಿಯ ಡೆವಿಲ್ ಸೀಕ್ರೆಟ್ ಬಯಲು..! – ಸತ್ಯ ಗೊತ್ತಾದ ಮೇಲೆ ಭೂಪತಿ, ನಕ್ಷತ್ರ, ಚಂದ್ರಶೇಖರ್‌ಗೆ ಶಾಕ್

ಲಕ್ಷಣ ಧಾರಾವಾಹಿಯ ಡೆವಿಲ್ ಸೀಕ್ರೆಟ್ ಬಯಲು..! – ಸತ್ಯ ಗೊತ್ತಾದ ಮೇಲೆ ಭೂಪತಿ, ನಕ್ಷತ್ರ, ಚಂದ್ರಶೇಖರ್‌ಗೆ ಶಾಕ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ‘ಲಕ್ಷಣ’ ಕೂಡ ಒಂದು. ದಿನೇ ದಿನೇ ಹೊಸ ಹೊಸ ಟ್ವಿಸ್ಟ್‌ಗಳೊಂದಿಗೆ ಈ ಧಾರಾವಾಹಿ ಪ್ರೇಕ್ಷಕರನ್ನು ತನ್ನತ್ತ ಹಿಡಿದಿಟ್ಟುಕೊಂಡಿದೆ. ಇದೀಗ ಈ ಧಾರಾವಾಹಿ ಒಂದೊಳ್ಳೆ ಅಂತ್ಯ ಕಾಣುವ ಹಂತಕ್ಕೆ ಬಂದಿದೆ. ಇದೀಗ ಇಷ್ಟು ದಿನ ಡೆವಿಲ್ ಆಗಿ ಅಬ್ಬರಿಸುತ್ತಿದ್ದವರ ಬಣ್ಣ ಬಯಲಾಗುವ ಸಮಯ ಹತ್ತಿರ ಬಂದಿದೆ. ಜೊತೆಗೆ ಡೆವಿಲ್ ಪುತ್ರಿಯ ಸೀಕ್ರೆಟ್ ಕೂಡಾ ಗೊತ್ತಾಗಿದೆ.

ಇದನ್ನೂ ಓದಿ: ಎಮೋಷನ್, ರಿವೇಂಜ್, ಫುಲ್ ಮಾಸ್ – ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ ಲಿಯೋ ಸಿನಿಮಾ ಟ್ರೈಲರ್  

‘ಲಕ್ಷಣ’ ಧಾರಾವಾಹಿ ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಡೆವಿಲ್ ಸೀಕ್ರೆಟ್ ಹೇಳಿ ದುಡ್ಡು ಮಾಡಿಕೊಂಡು ಫಾರಿನ್‌ನಲ್ಲಿ ಸೆಟಲ್ ಆಗಲು ಪ್ಲಾನ್ ಮಾಡಿದ್ದ ಶ್ವೇತಾಳ ಪ್ರಾಣಕ್ಕೆ ಕಂಟಕ್ಕೆ ಎದುರಾಗಿದೆ. ಆಕ್ಸಿಡೆಂಟ್ ಮಾಡಿ ಶ್ವೇತಾ ಪ್ರಾಣಕ್ಕೆ ಅಪಾಯ ಉಂಟಾಗುವಂತೆ ಮಾಡಿದ್ದಾಳೆ ಡೆವಿಲ್ ಮಗಳು ಮಿಲಿ. ಆ ಮೂಲಕ ಡೆವಿಲ್ ಪುತ್ರಿಯೇ ಮಿಲಿ ಎಂಬ ಸತ್ಯ ಭೂಪತಿ, ನಕ್ಷತ್ರ ಹಾಗೂ ಚಂದ್ರಶೇಖರ್‌ಗೆ ಗೊತ್ತಾಗಿದೆ.

ಅನ್ನಪೂರ್ಣ ಹೋಟೆಲ್ ಸುಡಲು ಹೋಗಿ, ತಂದೆ ಮತ್ತು ಅಜ್ಜಿಯನ್ನ ಜೀವಂತವಾಗಿ ಭಸ್ಮ ಮಾಡುವ ಪ್ಲಾನ್ ಮಾಡಿ ಕೊಲೆಯ ಯತ್ನದ ಕೇಸ್‌ನಲ್ಲಿ ಶ್ವೇತಾ ಸಿಕ್ಕಿಬೀಳುತ್ತಾಳೆ. ಪೊಲೀಸರ ಕೈಗೆ ಸಿಗದಂತೆ ವಿದೇಶಕ್ಕೆ ಹೋಗಿ ಸೆಟಲ್ ಆಗಲು ಚಂದ್ರಶೇಖರ್ ಜೊತೆಗೆ ಶ್ವೇತಾ ಡೀಲ್‌ ಮಾಡಲು ಪ್ರಯತ್ನಿಸುತ್ತಾಳೆ. ನನಗೆ ಡೆವಿಲ್ ಯಾರು ಅಂತ ಗೊತ್ತಿದೆ. ಡೆವಿಲ್ ಸೀಕ್ರೆಟ್‌ನ ನಿಮಗೆ ಕೊಡ್ತೀನಿ. ಶಕುಂತಲಾ ದೇವಿಯ ಅಷ್ಟೂ ಆಸ್ತಿಯನ್ನ ವಾಪಸ್ ಮಾಡ್ತೀನಿ. ಅದಕ್ಕೆ ಪ್ರತಿಯಾಗಿ ನನಗೆ ಹೆಚ್ಚು ದುಡ್ಡು ಬೇಕು. ವಿದೇಶಕ್ಕೆ ಹೋಗಿ ಸೆಟಲ್ ಆಗುವಂತೆ ಮಾಡಬೇಕು ಎಂದು ಶ್ವೇತಾ ಚಂದ್ರಶೇಖರ್ ಹತ್ತಿರ ಡಿಮ್ಯಾಂಡ್ ಮಾಡುತ್ತಾಳೆ. ಡೆವಿಲ್ ಯಾರು ಅಂತ ಗೊತ್ತಾಗುತ್ತೆ ಎಂಬ ಕಾರಣಕ್ಕೆ ಶ್ವೇತಾ ಮಾತಿಗೆ ಚಂದ್ರಶೇಖರ್ ಒಪ್ಪಿಗೆ ಸೂಚಿಸುತ್ತಾರೆ. ಆನಂತರ ಶಕುಂತಲಾ ದೇವಿಯ ಆಸ್ತಿಯನ್ನು ವಾಪಸ್ ಮಾಡುವ ಅಗ್ರೀಮೆಂಟ್‌ಗೂ ಶ್ವೇತಾ ಬಳಿ ಸಹಿ ಹಾಕಿಸಿಕೊಳ್ಳುತ್ತಾರೆ. ಇನ್ನೇನು ಹಣ ಮತ್ತು ಕ್ಯಾಶ್ ಶ್ವೇತಾ ಕೈಗೆ ಸೇರಬೇಕು ಎನ್ನುವಷ್ಟರಲ್ಲಿ ಡೆವಿಲ್ ಕುರಿತಾದ ದಾಖಲೆ ಬೇಕು ಎಂದು ಚಂದ್ರಶೇಖರ್ ಕೇಳುತ್ತಾರೆ. ಡೆವಿಲ್ ಬಗ್ಗೆ ಸಾಕ್ಷಿ ಇರುವ ಪೆನ್‌ಡ್ರೈವ್ ತರಲು ಕಾರಿನ ಬಳಿ ಶ್ವೇತಾ ತೆರಳುತ್ತಾಳೆ. ಈ ವೇಳೆ ದಾಖಲೆ ನಾಶ ಮಾಡುವ ಸಲುವಾಗಿ ಶ್ವೇತಾಗೆ ಕಾರಿನ ಮೂಲಕ ಡಿಕ್ಕಿ ಹೊಡೆದು ಆಕ್ಸಿಡೆಂಟ್ ಮಾಡುತ್ತಾಳೆ ಮಿಲಿ. ಶ್ವೇತಾ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಆಗ ಶ್ವೇತಾಳನ್ನ ಸಾಯಿಸಲು ಮಿಲಿ ಮುಂದಾಗುತ್ತಾಳೆ. ಇದೇ ಸಮಯದಲ್ಲಿ ಡೆವಿಲ್ ಪುತ್ರಿ ಮಿಲಿ ಎಂಬ ಸತ್ಯ ಚಂದ್ರಶೇಖರ್, ಭೂಪತಿ ಹಾಗೂ ನಕ್ಷತ್ರಗೆ ಗೊತ್ತಾಗುತ್ತೆ. ಎಲ್ಲರೂ ಶಾಕ್ ಆಗುತ್ತಾರೆ.

ಹುಟ್ಟಿದ ಕೂಡಲೆ ಅದಲು ಬದಲಾಗುವ ನಕ್ಷತ್ರ ಹಾಗೂ ಶ್ವೇತಾಳ ಕಥೆಯೇ ‘ಲಕ್ಷಣ’. ಚಂದ್ರಶೇಖರ್ ಮಗಳು ನಕ್ಷತ್ರ.. ತುಕಾರಾಂ ಮನೆಯಲ್ಲಿ, ತುಕಾರಾಂ ಮಗಳು ಶ್ವೇತಾ.. ಚಂದ್ರಶೇಖರ್ ಮನೆಯಲ್ಲಿ ಬೆಳೆಯುತ್ತಾಳೆ. 23 ವರ್ಷಗಳ ಬಳಿಕ ಶ್ವೇತಾ – ಭೂಪತಿಗೆ ಮದುವೆ ಫಿಕ್ಸ್ ಆಗುತ್ತದೆ. ಮದುವೆ ಮನೆಯಲ್ಲೇ ಚಂದ್ರಶೇಖರ್ ಅವರ ನಿಜವಾದ ಮಗಳು ನಕ್ಷತ್ರ ಎಂಬ ಸತ್ಯ ಬಹಿರಂಗವಾಗುತ್ತದೆ. ಹೀಗಾಗಿ, ಭೂಪತಿ – ನಕ್ಷತ್ರ ಮದುವೆ ಜರುಗುತ್ತದೆ. ಪರಿಣಾಮ, ಸೇಡು ತೀರಿಸಿಕೊಳ್ಳಲು ಶ್ವೇತಾ ಮುಂದಾಗುತ್ತಾಳೆ. ನಕ್ಷತ್ರ – ಭೂಪತಿಯನ್ನ ಬೇರೆ ಮಾಡಲು ಹೋದ ಶ್ವೇತಾಗೆ ಮೌರ್ಯ ತಾಳಿ ಕಟ್ಟುತ್ತಾನೆ. ಆನಂತರ ಶಕುಂತಲಾ ದೇವಿಯ ಆಸ್ತಿಯನ್ನೆಲ್ಲಾ ಶ್ವೇತಾ ಮೋಸದಿಂದ ಕಬಳಿಸುತ್ತಾಳೆ. ಶಕುಂತಲಾ ದೇವಿ ಫ್ಯಾಮಿಲಿಯನ್ನ ಜೈಲಿಗೆ ಕಳುಹಿಸಲು ಸ್ವಂತ ಅಪ್ಪ, ಅಜ್ಜಿಯನ್ನೇ ಜೀವಂತವಾಗಿ ಸುಡಲು ಶ್ವೇತಾ ಮುಂದಾಗುತ್ತಾಳೆ. ಶ್ವೇತಾ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮೇಲೆ ವಿದೇಶಕ್ಕೆ ಹೋಗಿ ಸೆಟಲ್ ಆಗಲು ಆಲೋಚಿಸುತ್ತಾಳೆ. ಡೆವಿಲ್ ಬಗ್ಗೆ ಚಂದ್ರಶೇಖರ್ಗೆ ತಿಳಿಸಿ, ಹಣ ಗಳಿಸಲು ಮುಂದಾಗುತ್ತಾಳೆ. ಡೆವಿಲ್ ಕಡೆಯಿಂದ ಶ್ವೇತಾ ಪ್ರಾಣಕ್ಕೆ ಈಗ ಕುತ್ತು ಬಂದಿದೆ.

ಲಕ್ಷಣ ಧಾರಾವಾಹಿಯಲ್ಲಿ ಶ್ವೇತಾ ಆಗಿ ಸುಕೃತಾ ನಾಗ್, ಡೆವಿಲ್ ಅಲಿಯಾಸ್ ಭಾರ್ಗವಿ ಆಗಿ ಪ್ರಿಯಾ ಶಠಮರ್ಷಣ, ಮಿಲಿ ಆಗಿ ಶ್ರುತಿ ರಮೇಶ್, ಭೂಪತಿ ಆಗಿ ಜಗನ್ನಾಥ್ ಚಂದ್ರಶೇಖರ್, ನಕ್ಷತ್ರ ಆಗಿ ವಿಜಯಲಕ್ಷ್ಮೀ, ಚಂದ್ರಶೇಖರ್ ಆಗಿ ಕೀರ್ತಿ ಭಾನು ನಟಿಸುತ್ತಿದ್ದಾರೆ.

Sulekha