ಭಾರ್ಗವಿಯೇ ‘ಡೆವಿಲ್’ ಅನ್ನೋ ಸತ್ಯ ಶ್ವೇತಾಗೆ ಗೊತ್ತಾಯ್ತು – ಲಕ್ಷಣ ಸೀರಿಯಲ್ ನಲ್ಲಿ ರೋಚಕ ಟ್ವಿಸ್ಟ್..!

ಭಾರ್ಗವಿಯೇ ‘ಡೆವಿಲ್’ ಅನ್ನೋ ಸತ್ಯ ಶ್ವೇತಾಗೆ ಗೊತ್ತಾಯ್ತು – ಲಕ್ಷಣ ಸೀರಿಯಲ್ ನಲ್ಲಿ ರೋಚಕ ಟ್ವಿಸ್ಟ್..!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ತಿದ್ದು ಅಭಿಮಾನಿಗಳನ್ನ ತುದಿಗಾಲಲ್ಲಿ ಕುಳಿತು ನೋಡಿವಂತೆ ಮಾಡಿದೆ. ಕಳೆದ ವಾರದ ಸಂಚಿಕೆಯಲ್ಲಿ ಶ್ವೇತಾ ‘ಆರ್​ಜೆ ಸಖಿ’ ಅಲ್ಲ. ಆರ್​ಜೆ ಸಖಿ ಶೋವನ್ನ ನಕ್ಷತ್ರ ನಡೆಸಿಕೊಡ್ತಿದ್ದಳು ಅನ್ನೋ ಸತ್ಯ ಭೂಪತಿಗೆ ಗೊತ್ತಾಗಿತ್ತು. ಈಗ ಚಂದ್ರಶೇಖರ್ ತಂಗಿ ಭಾರ್ಗವಿಯೇ ಡೆವಿಲ್ ಅನ್ನೋದು ಶ್ವೇತಾಗೆ ಗೊತ್ತಾಗಿದ್ದು ಸೀರಿಯಲ್ ಮತ್ತೊಂದು ರೋಚಕ ತಿರುವು ಪಡೆದಿದೆ.

ಇದನ್ನೂ ಓದಿ : ವೈಷ್ಣವ್​ಗೆ ಮದುವೆ ಇಷ್ಟವಿಲ್ಲ ಅನ್ನೋದು ಲಕ್ಷ್ಮೀಗೆ ಗೊತ್ತಾಯ್ತು – ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್!

ಯಾರಿಗೂ ಗೊತ್ತಾಗದಂತೆ ಚಂದ್ರಶೇಖರ್ ಫ್ಯಾಮಿಲಿಯಲ್ಲಿ ‘ಡೆವಿಲ್’ ಆಟ ಆಡ್ತಿದ್ದ ಭಾರ್ಗವಿ ಬಂಡವಾಳ ಈಗ ಶ್ವೇತಾ ಮುಂದೆಯೇ ಬಯಲಾಗಿದೆ. ಮಿಲಿಯನ್ನ ಮುಂದೆ ಬಿಟ್ಟು ಶ್ವೇತಾ ಡೆವಿಲ್​ ಯಾರು ಅನ್ನೋದನ್ನ ಕಂಡು ಹಿಡಿದಿದ್ದಾಳೆ. ಮೊನ್ನೆಯ ಸಂಚಿಕೆಯಲ್ಲಿ ಶ್ವೇತಾ ನನಗೆ ಡೆವಿಲ್ ಯಾರು ಅನ್ನೋದು ಗೊತ್ತಾಗುತ್ತೆ. ಅವಳು ಬಳಸುತ್ತಿರೋ ಪರ್ಸನಲ್ ನಂಬರ್ ನನಗೆ ಸಿಕ್ಕಿದೆ. ಆ ನಂಬರ್​ಗೆ ಇನ್ನೊಬ್ಬರು ಫೋನ್ ಮಾಡಿದ್ರೂ ಅವಳು ಯಾರು ಅನ್ನೋದು ಗೊತ್ತಾಗುತ್ತೆ ಎಂದು ಮಿಲಿ ಬಳಿ ಹೇಳಿದ್ದಳು.

ತನ್ನ ತಾಯಿ ಭಾರ್ಗವಿಯೇ ಡೆವಿಲ್ ಅನ್ನೋದು ಎಲ್ಲಿ ಶ್ವೇತಾಗೆ ಗೊತ್ತಾಗುತ್ತೋ ಅಂತಾ ಮಿಲಿ ಆತಂಕಗೊಂಡಿದ್ದಳು. ಮಿಲಿಯನ್ನೇ ಮುಂದಿಟ್ಟುಕೊಂಡು ಶ್ವೇತಾ ಡೆವಿಲ್​ನನ್ನ ಪತ್ತೆ ಹಚ್ಚಿದ್ದಳು. ಬಳಿಕ ಹತ್ತಿರ ಹೋಗಿ ಡೆವಿಲ್ ಕೈ ಹಿಡಿದುಕೊಂಡಿದ್ದಳು. ಇನ್ನೇನು ಮುಖ ನೋಡಬೇಕು ಅನ್ನುವಷ್ಟರಲ್ಲಿ, ನಾನೇ ಡೆವಿಲ್ ಅನ್ನೋದು ಶ್ವೇತಾಗೆ ಎಲ್ಲಿ ಗೊತ್ತಾಗುತ್ತೋ ಅಂತಾ ಭಾರ್ಗವಿ ಶ್ವೇತಾ ಕೈ ಬಿಡಿಸಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಳು. ಬಳಿಕ ಶ್ವೇತಾ ಡೆವಿಲ್ ಕಾರನ್ನೇ ಹಿಂಬಾಲಿಸಿಕೊಂಡು ಬಂದಾಗ ಕಾರು ಚಂದ್ರಶೇಖರ್ ಮನೆಗೆ ಬಂದಿತ್ತು. ಡೆವಿಲ್ ಯಾರು ಅನ್ನೋದನ್ನ ಶ್ವೇತಾ ನೋಡುವಷ್ಟರಲ್ಲಿ ಭಾರ್ಗವಿ ಮನೆಯೊಳಗೆ ಸೇರಿಕೊಂಡಿದ್ದಳು. ಬಳಿಕ ಶ್ವೇತಾ ಚಂದ್ರಶೇಖರ್ ಮನೆಯೊಳಗೆ ಹೋಗಿ ಡೆವಿಲ್ ನಿಮ್ಮ ಮನೆಯಲ್ಲೇ ಇದ್ದಾಳೆ. ನಾನೇ ನೋಡಿದೆ. ನಿಮ್ಮ ಮನೆಗೇ ಬಂದಿದ್ದಾಳೆ ಎಂದಳು. ಆದರೆ ಚಂದ್ರಶೇಖರ್ ಮತ್ತು ಪತ್ನಿ ಮತ್ತೆ ಕಥೆ ಕಟ್ಟೋಕೆ ಬಂದಿದ್ದೀಯಾ. ಹಣ ಬೇಕಿತ್ತೇನೋ ಅದಕ್ಕೆ ಹೀಗೆಲ್ಲಾ ನಾಟಕ ಮಾಡ್ತಿದ್ದೀಯ ಎಂದು ಬೈದಿದ್ದಾರೆ.

ಚಂದ್ರಶೇಖರ್ ಬಳಿ ಶ್ವೇತಾ ನಾನು ಡೆವಿಲ್ ನೋಡಿದೆ ಎಂದು ಹೇಳುತ್ತಿರೋದನ್ನ ಕೇಳಿದ ಭಾರ್ಗವಿ ಅಲ್ಲಿಗೆ ಬರುತ್ತಾಳೆ. ಶ್ವೇತಾ ನಾಟಕ ಮಾಡುತ್ತಿದ್ದಾಳೆ ಎಂದು ರೇಗುತ್ತಾ ಮೂವರು ಸೇರಿ ಶ್ವೇತಾಳನ್ನ ಮನೆಯಿಂದ ಹೊರ ಹಾಕಿದ್ದರು. ಇಷ್ಟಾದ ಮೇಲೂ ಛಲ ಬಿಡದ ಶ್ವೇತಾ ಚಂದ್ರಶೇಖರ್ ಮನೆ ಒಳಗೆ ಹೋಗಿದ್ದಾಳೆ. ಡೆವಿಲ್ ಎಲ್ಲಿ ಅಡಗಿದ್ದಾಳೆ ಅಂತಾ ಮನೆ ತುಂಬಾ ಹುಡುಕಾಡಿದ್ದಾಳೆ. ಈ ವೇಳೆ ಭಾರ್ಗವಿ ತನ್ನ ಮಗಳು ಮಿಲಿ ಬಳಿ ಫೋನ್​ನಲ್ಲಿ ಮಾತನಾಡುತ್ತಿದ್ದಳು. ನಾನು ಕೊಟ್ಟಿದ್ದನ್ನ ಕುಡಿದು ಬೆಳೆದಿರೋಳು ಅವಳು. ಅಂತವಳು ಈ ಭಾರ್ಗವಿ ರಹಸ್ಯ ಕಂಡು ಹಿಡಿಯುತ್ತಾಳಾ. ಸಾಧ್ಯನೇ ಇಲ್ಲ. ಅವಳು ತುಂಬಾ ಹತ್ತಿರ ಬಂದು ನನ್ನನ್ನೇ ಟಚ್ ಮಾಡಿ ಮಾರ್ಕ್ ಕೂಡ ಮಾಡಿ ಹೋಗಿದ್ದಾಳೆ ಎನ್ನುತ್ತಾಳೆ. ಬಾಗಿಲ ಬಳಿ ನಿಂತು ಇದನ್ನೆಲ್ಲಾ ಕೇಳಿಸಿಕೊಂಡ ಶ್ವೇತಾ, ಇದು ನಾನು ಡೆವಿಲ್​ಗೆ ಮಾಡಿದ ಗಾಯ ಭಾರ್ಗವಿ ಕೈಯಲ್ಲಿ ಇದೆ. ನಾನು ಏನ್ ನೋಡ್ತಿದ್ದೀನಿ. ಹಾಗಾದ್ರೆ ಭಾರ್ಗವಿನೇ ಡೆವಿಲ್  ಅಂತಾ ಶಾಕ್ ಆಗಿದ್ದಾಳೆ.

ಮಗಳ ಜೊತೆ ಮತ್ತೆ ಮಾತು ಮುಂದುವರಿಸುವ ಭಾರ್ಗವಿ ಇಷ್ಟು ದಿನ ಶ್ವೇತಾನ ಮುಂದಿಟ್ಟುಕೊಂಡು ಚಂದ್ರಶೇಖರ್ ಕಣ್ಣೀರಿಡುವಂತೆ ಮಾಡಿದೆ. ಆದ್ರೆ 23 ವರ್ಷದ ಬಳಿಕ ಶ್ವೇತಾ ಅವನ ಮಗಳಲ್ಲ ಅನ್ನೋದು ಗೊತ್ತಾಯ್ತು. ಜೊತೆಗೆ ತುಂಬಾ ಪ್ರೀತಿಸುವ ನಕ್ಷತ್ರ ಸಿಕ್ಕಿದ್ದಳು. ಗಂಡನ ಮನೆಯಿಂದ ನಕ್ಷತ್ರಳನ್ನ ಶಾಶ್ವತವಾಗಿ ದೂರ ಮಾಡಿ ಚಂದ್ರಶೇಖರ್ ಕಣ್ಣೀರಿಡುವಂತೆ ಮಾಡ್ಬೇಕು ಅನ್ಕೊಂಡೆ. ಆದ್ರೆ ಅದು ಸಾಧ್ಯವಾಗಲಿಲ್ಲ. ಇನ್ಮುಂದೆ ಚಂದ್ರಶೇಖರ್ ನೆಮ್ಮದಿ ಹಾಳು ಮಾಡೋಕೆ ಶ್ವೇತಾ ಒಬ್ಬಳೇ ಸಾಕು ಮಗಳೇ ಎನ್ನುತ್ತಾಳೆ. ಇದೆಲ್ಲವನ್ನೂ ಮರೆಯಲ್ಲಿ ನಿಂತು ಶ್ವೇತಾ ಕೇಳಿಸಿಕೊಂಡಿದ್ದು ಭಾರ್ಗವಿಯೇ ಡೆವಿಲ್ ಅನ್ನೋದು ಗೊತ್ತಾಗಿ ಧಾರಾವಾಹಿ ಮತ್ತಷ್ಟು ಕುತೂಹಲ ಮೂಡಿಸಿದೆ.

suddiyaana