ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಬಿಗ್‌ ಸರ್ಪೈಸ್! – ಹಸಿವಿನಿಂದ ಕಂಗೆಟ್ಟ ಮನೆ ಸದಸ್ಯರಿಗೆ ಸಿಕ್ತು ಕಿಚ್ಚನ ಕೈರುಚಿ!

ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಬಿಗ್‌ ಸರ್ಪೈಸ್! – ಹಸಿವಿನಿಂದ ಕಂಗೆಟ್ಟ ಮನೆ ಸದಸ್ಯರಿಗೆ ಸಿಕ್ತು ಕಿಚ್ಚನ ಕೈರುಚಿ!

ಈ ಸಲದ ಬಿಗ್‌ಬಾಸ್‌ ಮನೆಯಲ್ಲಿ ಮನರಂಜನೆಗಿಂತ ಬರೀ ಜಗಳಗಲೇ ಹೆಚ್ಚು ಸದ್ದು ಮಾಡುತ್ತಿವೆ. ಸಣ್ಣ ಪುಟ್ಟ ವಿಚಾರಗಳಿಗೂ ಸ್ಪರ್ಧಿಗಳು ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ. ಆದ್ರೆ ಈ ವಾರ ಬಿಗ್‌ಬಾಸ್ ಮನೆಯ ಸದಸ್ಯರು ಶಾಲೆಯಲ್ಲಿ ಮಕ್ಕಳಾಗಿ ನಲಿದಿದ್ದರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿದರೆ, ಯಾವುದೇ ಜಗಳಗಳಿಲ್ಲದೆ, ಅನಾಹುತಗಳಿಲ್ಲದೆ ಸುವ್ಯವಸ್ಥಿತವಾಗಿಯೇ ಕಳೆದಿತ್ತು. ಇನ್ನೇನು ಇದೇ ರೀತಿ ಈ ವಾರ ಸುಖಾಂತ್ಯವನ್ನು ಕಾಣಲಿದೆ ಎನ್ನುವ ಹೊತ್ತಿಗೇ ಬಿಗ್‌ಬಾಸ್‌ ಮನೆಯಲ್ಲಿ ಮತ್ತೆ ಕೋಲಾಹಲವೆದ್ದಿತ್ತು. ಡ್ರೋನ್‌ ಮನೆ ಸದಸ್ಯರಿಗೆ ಮುದ್ದೆಯೂಟದ ಮಾಡಿಕೊಟ್ಟ ಬಳಿಕ ಬಿಗ್‌ಬಾಸ್ ಮನೆಯ ಗ್ಯಾಸ್ ಕನೆಕ್ಷನ್ ಕಟ್ಟಾಗಿತ್ತು. ಇದರಿಂದ ಇಡೀ ಮನೆಯ ಸದಸ್ಯರೆಲ್ಲ ಕಂಗಾಲಾಗಿದ್ದರು. ಇದಕ್ಕೆ ರಾತ್ರಿ ಹಸಿದುಕೊಂಡೇ ಇಡೀ ದಿನ ಕಳೆಯಬೇಕಾಗುತ್ತದೆ ಎಂಬ ಬೇಸರ ವ್ಯಕ್ತಪಡಿಸಿದ್ದರು.  ಆದರೆ ಹಸಿವಿಂದ ಕೂತ ಮನೆಯ ಸದಸ್ಯರಿಗೆ ಎಂದೆಂದೂ ಮರೆಯಲಾಗದಂತಹ ಸಖತ್ ಸ್ಪೆಷಲ್ ಸರ್ಪೈಸ್​ ಸಿಕ್ಕಿದೆ. ಹಸಿವಿನಿಂದ ಕಂಗೆಟ್ಟ ಸ್ಪರ್ಧಿಗಳಿಗೆ ಭರ್ಜರಿ ಬಾಡೂಟ ಸಿಕ್ಕಿದೆ.

ಇದನ್ನೂ ಓದಿ: ರಾಗಿ ಮುದ್ದೆ ಮಾಡಿಕೊಟ್ಟು ಪೇಚಿಗೆ ಸಿಲುಕಿದ ಪ್ರತಾಪ್ – ಗ್ಯಾಸ್ ಬಾರದೆ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಗಲಾಟೆ

ಹೌದು, ದೊಡ್ಮನೆಯಲ್ಲಿ ಮುದ್ದೆಯೂಟದ ಬಳಿಕ ಅಸಮಧಾನ ಹೊಗೆಯಾಡಲಾರಂಭಿಸಿತ್ತು. ಇಡೀ ದಿನ ಹಸಿದುಕೊಂಡೇ ಇರಬೇಕು ಅಂತಾ ಮನೆಯ ಸದಸ್ಯೆರೆಲ್ಲರೂ ಕಂಗಾಲಾಗಿದ್ದರು. ಆದರೆ ಹಸಿವಿಂದ ಕೂತ ಮನೆಯ ಸದಸ್ಯರಿಗೆ ಎಂದೆಂದೂ ಮರೆಯಲಾಗದಂಥ ಸಖತ್ ಸ್ಪೆಷಲ್ ಸರ್ಪೈಸ್‌ವೊಂದನ್ನು ಕಿಚ್ಚ ಸುದೀಪ್‌ ನೀಡಿದ್ದಾರೆ. ಆ ಸರ್ಪೈಸ್‌ ಏನು ಎಂಬುದು ಅಂತಾ ವಾಹಿನಿ ಪ್ರೋಮೊ ಬಿಡುಗಡೆ ಮಾಡಿದೆ.

ನಟ ಕಿಚ್ಚ ಸುದೀಪ್‌ ದೊಡ್ಮನೆ ಸದಸ್ಯರಿಗೆ ತಮ್ಮ ಕೈಯಾರೆ ರೆಡಿ ಮಾಡಿದ ಅಡುಗೆಯನ್ನು ಕಳುಹಿಸಿದ್ದಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಊಟದ ಜೊತೆಗೆ ಒಂದೊಂದು ಪತ್ರವನ್ನೂ ಕೈಯಾರೆ ಬರೆದು ಕಳಿಸಿದ್ದಾರೆ. ಆ ಪತ್ರದಲ್ಲಿ ಆಯಾ ಸ್ಪರ್ಧಿಗಳಿಗೆ ಅತ್ಯಮೂಲ್ಯವಾದ ಸಲಹೆಗಳಿವೆ. ‘ಇದು ಸರ್ಪೈಸ್‌. ಇವತ್ತಿನ ಅಡುಗೆ, ಕಿಚ್ಚನ ಕೈಯಡುಗೆ’ ಎಂದು ಹೇಳಿರುವ ಕಿಚ್ಚನ ಮಾತುಗಳೂ ಪ್ರೋಮೊದಲ್ಲಿ ಸೆರೆಯಾಗಿವೆ.

ಪ್ರತಿ ಸ್ಪರ್ಧಿಗಳಿಗೆ ಇಷ್ಟವಾಗುವ ಅಡುಗೆ ಜೊತೆಗೆ ಕಿವಿ ಮಾತನ್ನು ಕಿಚ್ಚ ಕಳುಹಿಸಿಕೊಟ್ಟಿದ್ದಾರೆ. ಇದನ್ನು ನೋಡಿದ ಮನೆಯ ಮಂದಿಯೆಲ್ಲ ಅಕ್ಷರಶಃ ಕುಣಿದಾಡಿದ್ದಾರೆ. ಒಬ್ಬೊಬ್ಬರೂ ಕ್ಯಾಮೆರಾ ಎದುರಿಗೆ ಬಂದು ಥ್ಯಾಂಕ್ಸ್ ಹೇಳಿದ್ದಾರೆ. ಇದೊಂದು ಮರೆಯಲಾಗದ ಕೊಡುಗೆ ಎಂದು ಎಲ್ಲ ಸ್ಪರ್ಧಿಗಳೂ ಅನಿಸಿದೆ. ಇಷ್ಟು ಹೊತ್ತು ಹಸಿದುಕೊಂಡಿದ್ದಕ್ಕೂ ಸಾರ್ಥಕವಾಯ್ತು ಎಂದೂ ಅನಿಸಿರಬೇಕು.

Shwetha M